MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಕೇದಾರನಾಥನ ದರ್ಶನ ಪಡೆದ ನನ್ನರಸಿ ರಾಧೆ, ತ್ರಿಪುರ ಸುಂದರಿ ನಟ ಅಭಿನವ್ ವಿಶ್ವನಾಥನ್

ಕೇದಾರನಾಥನ ದರ್ಶನ ಪಡೆದ ನನ್ನರಸಿ ರಾಧೆ, ತ್ರಿಪುರ ಸುಂದರಿ ನಟ ಅಭಿನವ್ ವಿಶ್ವನಾಥನ್

ಕನ್ನಡ ಕಿರುತೆರೆ ನಟ ಅಭಿನವ್ ವಿಶ್ವನಾಥನ್ ಹಿಮಾಲಯಕ್ಕೆ ತೆರಳಿ ಕೇದಾರನಾಥನ ದರ್ಶನ ಪಡೆದು ಬಂದಿದ್ದು, ಆ ದಿವ್ಯ ದರ್ಶನದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.  

2 Min read
Pavna Das
Published : Feb 28 2025, 12:07 PM IST| Updated : Feb 28 2025, 12:31 PM IST
Share this Photo Gallery
  • FB
  • TW
  • Linkdin
  • Whatsapp
17

ನನ್ನರಸಿ ರಾಧೆ ಧಾರಾವಾಹಿಯಲ್ಲಿ ಅಗಸ್ತ್ಯನ ಪಾತ್ರದ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ನಟ ಅಭಿನವ್ ವಿಶ್ವನಾಥನ್ (Abhinav Viswanathan) ಇದೀಗ ಕೇದಾರನಾಥನ ದರ್ಶನ ಪಡೆದು ಬಂದಿದ್ದಾರೆ. ಜೊತೆಗೆ ದಿವ್ಯ ದರ್ಶನ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 
 

27

ಇತ್ತೀಚೆಗೆ ಕೇದರನಾಥಕ್ಕೆ ತೆರಳಿರುವ ಅಭಿನವ್ ತಮ್ಮ ಇನ್’ಸ್ಟಾಗ್ರಾಂ ನಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದು, ಅದರ ಜೊತೆಗೆ ‘ಶಿವನು ಶುದ್ಧ ಪ್ರಜ್ಞೆ, ಆನಂದ ಮತ್ತು ಶಾಶ್ವತವಾಗಿರುವ ಸ್ಥಿತಿಯಾಗಿದೆ’ (Shiva is a state of being pure conscious blissful and eternal) ಹರ್ ಹರ್ ಮಹಾದೇವ್ ಎಂದು ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ. 
 

37

ಅಭಿನವ್ ವಿಶ್ವನಾಥನ್ ಮುಂಬೈ ಮೂಲದ ಯುವಕ. ಬೆಂಗಳೂರಲ್ಲಿ ಇಂಜಿನಿಯರಿಂಗ್ ಮಾಡಲು ಬಂದಿದ್ದರು. ಆರಂಭದಲ್ಲಿಯೇ ಇಂಗ್ಲಿಷ್ ಹಾಗೂ ಹಿಂದಿ ನಾಟಕಗಳನ್ನು ಮಾಡುತ್ತಾ, ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದ ಅಭಿನವ್ ಗೆ ಬೆಂಗಳೂರಲ್ಲಿ ನೆರವಾಗಿದ್ದು, ಪ್ರಕಾಶ್ ಬೆಳವಾಡಿ. 
 

47

ಪ್ರಕಾಶ್ ಬೆಳವಾಡಿ ಸಹಾಯದಿಂದಾಗಿ ಅಭಿನವ್ ನನ್ನರಸಿ ರಾಧೆ ಸೀರಿಯಲ್ (Nannarasi Radhe Serial) ಆಡಿಶನ್ ತೆರಳಿ ಅದರಲ್ಲಿ ಆಯ್ಕೆ ಕೂಡ ಆಗಿದ್ದರು, ಆದರೆ ಕನ್ನಡ ಮಾತನಾಡಲು, ಓದಲು ಬರದೇ ಇದ್ದ ಈ ನಟನಿಗೆ ಸೀರಿಯಲ್ ತಂಡವೇ ನೆರವು ನೀಡಿತ್ತಂತೆ, ಬಳಿಕ ಲಾಕ್ ಡೌನ್ ಸಮಯದಲ್ಲಿ ಕನ್ನಡ ಸಿನಿಮಾಗಳನ್ನು ನೋಡುತ್ತಾ, ಕನ್ನಡ ಕಲಿತವರು ಅಭಿನವ್. 
 

57

ನನ್ನರಸಿ ರಾಧೆ ಬಳಿಕ, ಅಭಿನವ್ ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ಪ್ರದ್ಯುಮ್ನನಾಗಿ ಕೂಡ ಗಮನ ಸೆಳೆದಿದ್ದರು. ಇದಾದ ಬಳಿಕ ಅವರು ಸದ್ಯ ತೆಲುಗಿನ ಮೇಘ ಸಂದೇಶಂ ಧಾರಾವಾಹಿಯಲ್ಲಿ ಗಗನ್ ಆಗಿ ನಟಿಸುತ್ತಿದ್ದಾರೆ. ಆ ಮೂಲಕ ತೆಲುಗು ಪ್ರೇಕ್ಷಕರೂ ಕೂಡ ಇವರನ್ನು ಮೆಚ್ಚಿಕೊಂಡಿದ್ದಾರೆ. ಈ ಧಾರಾವಾಹಿಯಲ್ಲಿ ಅಭಿನವ್ ಗೆ ನಾಯಕಿಯಾಗಿರುವುದು ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಭೂಮಿಕಾ ರಮೇಶ್. 
 

67

ಅಭಿನವ್ ಕೇವಲ ಸೀರಿಯಲ್ ಗಳಲ್ಲಿ ಮಾತ್ರವಲ್ಲ, ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಶೈನ್ ಶೆಟ್ಟಿ ಅಂಕಿತಾ ಅಮರ್ ನಟಿಸಿರುವ ಜಸ್ಟ್ ಮ್ಯಾರೀಡ್ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿರುವ ಅಭಿನವ್, ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ ಕನ್ನಡದ ಇನ್ನೂ ಹೆಸರಿಡದ ಸಿನಿಮಾ ಒಂದರಲ್ಲಿ ನಾಯಕನಾಗಿ ಸಹ ಇವರು ನಟಿಸುತ್ತಿದ್ದಾರೆ. ಇದು ಹಾರರ್ ಥ್ರಿಲ್ಲರ್ ಕಥೆಯಾಗಿದೆ. 
 

77

ಇನ್ನು ತಮಿಳು ಸಿನಿಮಾ ಒಂದರಲ್ಲಿ ಕೂಡ ನಾಯಕನಾಗಿ ಅಭಿನವ್ ನಟಿಸುತ್ತಿದ್ದಾರೆ. ಈ ಸಿನಿಮಾ ಹೆಸರು ರೂಟ್. ಈ ಚಿತ್ರದಲ್ಲಿ ಕೆಜಿಎಫ್‌ ಖ್ಯಾತಿಯ ಗರುಡ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ತಮಿಳಿನ ಖ್ಯಾತ ನಟ ಭಾಗ್ಯರಾಜ್‌ ಕೂಡ ನಟಿಸುತ್ತಿದ್ದಾರೆ. 
 

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved