ಆದರ್ಶ ಯುವ ಶಾಸಕಿ ಪ್ರಶಸ್ತಿಗೆ ಸೌಮ್ಯ ರೆಡ್ಡಿ ಭಾಜನ: ಇದು ಇತರರಿಗೆ ಮಾದರಿ
ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಸೌಮ್ಯಾರೆಡ್ಡಿ ಆದರ್ಶ ಯುವ ಶಾಸಕಿ ಎಂಬ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳು ಹಾಗೂ ಸಂಸದೀಯ ವ್ಯವಸ್ಥೆಯಲ್ಲಿ ಉತ್ತಮ ಸೇವಾ ಕಾರ್ಯಗಳಿಗಾಗಿ ಭಾರತೀಯ ಛಾತ್ರಾ ಸಂಸದ್ ಸೌಮ್ಯರೆಡ್ಡಿ ಅವರಿಗೆ "ಆದರ್ಶ ಯುವ ಶಾಸಕಿ" ಪ್ರಶಸ್ತಿ ನೀಡಿ ಗೌರವಿಸಿದೆ.
ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಸೌಮ್ಯಾರೆಡ್ಡಿ ಆದರ್ಶ ಯುವ ಶಾಸಕಿ ಎಂಬ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳು ಹಾಗೂ ಸಂಸದೀಯ ವ್ಯವಸ್ಥೆಯಲ್ಲಿ ಉತ್ತಮ ಸೇವಾ ಕಾರ್ಯಗಳಿಗಾಗಿ ಭಾರತೀಯ ಛಾತ್ರಾ ಸಂಸದ್ ಸೌಮ್ಯರೆಡ್ಡಿ ಅವರಿಗೆ "ಆದರ್ಶ ಯುವ ಶಾಸಕಿ" ಪ್ರಶಸ್ತಿ ನೀಡಿ ಗೌರವಿಸಿದೆ.
ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸೌಮ್ಯರೆಡ್ಡಿ ಶಾಸಕರಾದ ಮೊದಲ ಬಾರಿಗೆ ಎಲ್ಲರ ಗಮನ ಸೆಳೆದಿದ್ದರು.
ಪರಿಸರ ಬಗೆಗಿನ ಕಾಳಜಿ, ಪ್ಲಾಸ್ಟಿಕ್ ವಿರುದ್ಧದ ಅಭಿಯಾನ, ಸಹಜವಾಗಿ ಎಲ್ಲರೊಂದಿಗೆ ಬೆರೆಯುವ ಗುಣ ಮತ್ತು ಶಾಸಕಿ ಎನ್ನುವ ಯಾವ ಗತ್ತೂ ಇಲ್ಲದೇ ಕೆಲಸದಲ್ಲಿಯೇ ತಮ್ಮನ್ನು ಕಾಣುವ ನಡೆಯಿಂದ ಕ್ಷೇತ್ರದಲ್ಲಿ ಇವರು ಚಿರಪರಿಚಿತ.
ತಮಗಿಂತಲೂ ತಮ್ಮ ಕ್ಷೇತ್ರದ ಜನರಿಗೆ ಪ್ರಶಸ್ತಿ ಸಂದಿರುವುದು ಬಹಳ ಖುಷಿತಂದಿದೆ. ಜನರಿಂದ ಆರಿಸಲ್ಪಟ್ಟಿರುವ ನಾನು ಮತಹಾಕಿದ ದೇವರುಗಳಿಗೆ ಸ್ಪಂದಿಸಬೇಕಿರುವುದು ನನ್ನ ಆದ್ಯಕರ್ತವ್ಯ.
ಕ್ಷೇತ್ರದಲ್ಲಿ ಜನಸಾಮಾನ್ಯರಿಗೆ ಸಿಗುವ ಜನಸ್ನೇಹಿ ಎಂಎಲ್ಎ
ತಮ್ಮ ಅಭಿವೃದ್ಧಿಯ ಕಾರ್ಯಗಳಿಗೆ ತಂದೆ ಹಾಗೂ ಶಾಸಕರೂ ಆಗಿರುವ ರಾಮಲಿಂಗಾರೆಡ್ಡಿ ಅವರ ಪ್ರೇರಣೆ ಮತ್ತು ಸಹಕಾರ ಸದಾ ಇದ್ದು, ಅವರ ಸರಳತೆ ಮತ್ತು ಜನತೆಗೆ ಸ್ಪಂದಿಸುವ ಗುಣ ತಮ್ಮಲ್ಲಿ ಮೈದಳೆದಿದೆ ಎಂದು ಸೌಮ್ಯರೆಡ್ಡಿ ಹೇಳಿದರು.
ಮೊದಲ ಬಾರಿಗೆ ವಿಧಾಸಭೆ ಸದಸ್ಯರಾಗಿರುವ ಸೌಮ್ಯರೆಡ್ಡಿ
ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳು ಹಾಗೂ ಸಂಸದೀಯ ವ್ಯವಸ್ಥೆಯಲ್ಲಿ ಉತ್ತಮ ಸೇವಾ ಕಾರ್ಯಗಳಿಗಾಗಿ ಭಾರತೀಯ ಛಾತ್ರಾ ಸಂಸದ್ ಸೌಮ್ಯರೆಡ್ಡಿ ಅವರಿಗೆ "ಆದರ್ಶ ಯುವ ಶಾಸಕಿ" ಪ್ರಶಸ್ತಿ ನೀಡಿ ಗೌರವಿಸಿದೆ.
2018ರಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆದ್ದಿರುವ ಸೌಮ್ಯ ರೆಡ್ಡಿ
ಈ ಹಿಂದೆ ಎರಡು ಬಾರಿ ಬಿಜೆಪಿಯ ವಿಜಯ ಕುಮಾರ್ ಅವರು ಗೆಲುವು ಸಾಧಿಸಿದ್ದರು. ಆದ್ರೆ, ಅವರ ನಿಧನದ ನಂತರ ಅವರ ಸಹೋದರನ ವಿರುದ್ಧ ಸೌಮ್ಯ ರೆಡ್ಡಿ ಗೆಲುವು ಸಾಧಿಸಿದ್ದಾರೆ.
ಈ ಮೊದಲು ಜಯನಗರ ವಿಧಾಸಭೆ ಕ್ಷೇತ್ರದಿಂದ ಅವರ ತಂದೆ ರಾಮಲಿಂಗರೆಡ್ಡಿ ಸ್ಪರ್ಧಿಸುತ್ತಿದ್ದರು. ಬಳಿಕ ಅವರು ಪಕ್ಕದ ಬಿಟಿಎಂ ಕ್ಷೇತ್ರ ವಲಸೆ ಹೋಗಿದ್ದರಿಂದ ಜಯನಗರದಲ್ಲಿ ಬಿಜೆಪಿ ಗೆಲ್ಲುತ್ತಿತ್ತು
2018ರಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆದ್ದಿರುವ ಸೌಮ್ಯ ರೆಡ್ಡಿ