MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • 26ರ ಲೇಡಿ, 52ರ ಅಂಕಲ್ ಲವ್ ಸ್ಟೋರಿ; ಹೊಸ ಗೆಳೆಯನ ಹಿಂದೆ ಹೋಗಿದ್ದಕ್ಕೆ ಬೆಂಕಿ ಇಟ್ಟ!

26ರ ಲೇಡಿ, 52ರ ಅಂಕಲ್ ಲವ್ ಸ್ಟೋರಿ; ಹೊಸ ಗೆಳೆಯನ ಹಿಂದೆ ಹೋಗಿದ್ದಕ್ಕೆ ಬೆಂಕಿ ಇಟ್ಟ!

ಬೆಂಗಳೂರಿನಲ್ಲಿ 26 ವರ್ಷದ ವನಜಾಕ್ಷಿ ಎಂಬ ಯುವತಿಯನ್ನು 52 ವರ್ಷದ ವಿಠಲ್ ಎಂಬಾತ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಈ ಘಟನೆ ನಡೆದಿದೆ.

1 Min read
Mahmad Rafik
Published : Sep 01 2025, 11:20 AM IST
Share this Photo Gallery
  • FB
  • TW
  • Linkdin
  • Whatsapp
15
26ರ ಲೇಡಿ, 52ರ ಅಂಕಲ್ ಲವ್ ಸ್ಟೋರಿ
Image Credit : Asianet News

26ರ ಲೇಡಿ, 52ರ ಅಂಕಲ್ ಲವ್ ಸ್ಟೋರಿ

ಪ್ರೇಯಸಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊ*ಲೆ ಮಾಡಿರುವ ಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 26 ವರ್ಷದ ವನಜಾಕ್ಷಿ ಕೊ*ಲೆಯಾದ ಮಹಿಳೆ. ಗಂಡನ ನಿಧನದ ಬಳಿಕ 26 ವರ್ಷದ ವನಜಾಕ್ಷಿ, ಕ್ಯಾಬ್ ಚಾಲಕನಾಗಿದ್ದ 52 ವರ್ಷದ ವಿಠಲ್ ಜೊತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು.

25
ಆಕೆ ಗಂಡನಿಲ್ಲ, ಈತನಿಗೆ ಹೆಂಡ್ತಿ ಇರಲಿಲ್ಲ
Image Credit : chatgpt

ಆಕೆ ಗಂಡನಿಲ್ಲ, ಈತನಿಗೆ ಹೆಂಡ್ತಿ ಇರಲಿಲ್ಲ

ವನಜಾಕ್ಷಿ ಮತ್ತು ವಿಠಲ್ ಇಬ್ಬರು ನೇಕಲ್ ಬಳಿಯ ಮಳೆನಲ್ಲಸಂದ್ರದ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ. ಈ ವಿಠಲ್‌ಗೆ ಎರಡು ಮದುವೆಯಾಗಿದ್ದು, ಮೊದಲ ಪತ್ನಿ ನಿಧನವಾಗಿದ್ದಾರೆ. ಎರಡನೇ ಪತ್ನಿ ವಿಠಲ್‌ನಿಂದ ದೂರವಾಗಿ ಬೇರೆಯೊಬ್ಬನ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಾರೆ.

Related Articles

Related image1
ಮದ್ವೆಯಾಗಿದ್ರೂ ಅಕ್ರಮ ಸಂಬಂಧ; ಬಾಯಿಗೆ ಸ್ಪೋಟಕ ತುರುಕಿ ಕೊಂದ ಪ್ರೇಮಿ
Related image2
ಮೈದುನನ ಜೊತೆ ಮಂಚ ಏರಲು ಅಡ್ಡಿಯಾದ ಗಂಡನನ್ನೇ ಎಲೆಕ್ಟ್ರಿಕ್‌ ಶಾಕ್‌ ಕೊಟ್ಟು ಮುಗಿಸಿದಳು ಪತ್ನಿ!
35
ಹೊಸ ಗೆಳೆಯ ಸಿಗ್ತಿದ್ದಂತೆ ವಿಠಲ್‌ನಿಂದ ಡಿಸ್ಟೇನ್ಸ್ ಮೇಂಟೈನ್
Image Credit : Asianet News

ಹೊಸ ಗೆಳೆಯ ಸಿಗ್ತಿದ್ದಂತೆ ವಿಠಲ್‌ನಿಂದ ಡಿಸ್ಟೇನ್ಸ್ ಮೇಂಟೈನ್

ಗಂಡನಿಲ್ಲದ ವನಜಾಕ್ಷಿಗೂ ಮತ್ತು ಹೆಂಡತಿ ಇಲ್ಲದ ವಿಠಲ್‌ಗೂ ಪರಿಚಯವಾಗಿದೆ. ಹಾಗಾಗಿ ವನಜಾಕ್ಷಿ ಮತ್ತು ವಿಠಲ್ ಜೊತೆಯಾಗಿರಲು ಆರಂಭಿಸಿದ್ದರು. ಇಬ್ಬರು ಹೆಂಡತಿಯರ ನಂತರ ವಿಠ್ಠಲ ತನಗಿಂತ 26 ವರ್ಷ ಚಿಕ್ಕವಳಾದ ವನಜಾಕ್ಷಿಯ ಸಾಂಗತ್ಯ ಬೆಳೆಸಿದ್ದನು. ಮೂರ್ನಾಲ್ಕು ವರ್ಷ ವನಜಾಕ್ಷಿ ಮತ್ತು ವಿಠಲ್ ನಡುವೆ ಎಲ್ಲವೂ ಚೆನ್ನಾಗಿತ್ತು. ಆದ್ರೆ ಇತ್ತೀಚೆಗೆ ವಿಠಲ್‌ ನಿಂದ ವನಜಾಕ್ಷಿ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದಳು.

45
ಪೆಟ್ರೋಲ್ ಸುರಿದು ಬೆಂಕಿಯಿಟ್ಟ ಅಂಕಲ್
Image Credit : Asianet News

ಪೆಟ್ರೋಲ್ ಸುರಿದು ಬೆಂಕಿಯಿಟ್ಟ ಅಂಕಲ್

ವಿಠಲ್‌ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದ ವನಜಾಕ್ಷಿ ಅದೇ ಗ್ರಾಮದ ಮತ್ತೋರ್ವನೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಳು. ಶನಿವಾರ ಗೆಳೆಯನೊಂದಿಗೆ ವನಜಾಕ್ಷಿ ಸ್ಯಾಂಟ್ರೋ ಕಾರ್‌ನಲ್ಲಿ ಬನ್ನೇರುಘಟ್ಟದಿಂದ ಬಸವನಪುರಕ್ಕೆ ಹೋಗುತ್ತಿರೋದನ್ನು ವಿಠಲ್ ನೋಡಿದ್ದಾನೆ. ಕೂಡಲೇ ವಿಠಲ್ ಅವರಿಬ್ಬರಿದ್ದ ಕಾರ್ ಹಿಂಬಾಲಿಸಿದ್ದಾನೆ. ಹುಳಿಮಾವು ಠಾಣೆ ವ್ಯಾಪ್ತಿಯ ಹೊಮ್ಮದೇವನಹಳ್ಳಿ ಬಳಿ ಕಾರ್ ನಿಲ್ಲಿಸಿ, ವನಜಾಕ್ಷಿ ಜೊತೆ ಜಗಳವಾ

55
ಚಿಕಿತ್ಸೆ ಫಲಕಾರಿಯಾಗದೇ ವನಜಾಕ್ಷಿ ಸಾವು
Image Credit : chatgpt

ಚಿಕಿತ್ಸೆ ಫಲಕಾರಿಯಾಗದೇ ವನಜಾಕ್ಷಿ ಸಾವು

ಈ ವೇಳೆ ವನಜಾಕ್ಷಿ ಮೇಲೆ ಪೆಟ್ರೋಲ್ ಸುರಿದು ಲೈಟರ್‌ನಿಂದ ಬೆಂಕಿ ಹೆಚ್ಚಿದ್ದಾನೆ. ಶೇ.60ರಷ್ಟು ಸುಟ್ಟಗಾಯಗಳಿಂದ ಗಾಯಗೊಂಡಿದ್ದ ವನಜಾಕ್ಷಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ವನಜಾಕ್ಷಿ ಸಾವನ್ನಪ್ಪಿದ್ದಾಳೆ. ಘಟನೆ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಕೊ*ಲೆ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ವಿಠಲ್‌ನನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬೆಂಗಳೂರು
ಸಂಬಂಧಗಳು
ಪ್ರೀತಿ
ಮಹಿಳೆಯರು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved