MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಲಾಡ್ಜ್‌ಗೆ ಕರೆಸಿಕೊಂಡು ರೇ* , ಮದ್ವೆಯಾಗೋಕೆ ಕೀಳು ಜಾತಿ ಎಂದ ಪೊಲೀಸಪ್ಪ ಅರೆಸ್ಟ್

ಲಾಡ್ಜ್‌ಗೆ ಕರೆಸಿಕೊಂಡು ರೇ* , ಮದ್ವೆಯಾಗೋಕೆ ಕೀಳು ಜಾತಿ ಎಂದ ಪೊಲೀಸಪ್ಪ ಅರೆಸ್ಟ್

Bengaluru Crime News: ಮದುವೆಯಾಗುವುದಾಗಿ ನಂಬಿಸಿ ವಕೀಲೆಯ ಮೇಲೆ ಅತ್ಯಾ*ಚಾರ ಎಸಗಿದ್ದ ಪೊಲೀಸ್ ಕಾನ್ಸ್ಟೇಬಲ್ ಸಿದ್ದೇಗೌಡನನ್ನು ಬಂಧಿಸಲಾಗಿದೆ. ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

1 Min read
Mahmad Rafik
Published : Sep 06 2025, 09:48 AM IST
Share this Photo Gallery
  • FB
  • TW
  • Linkdin
  • Whatsapp
15
Image Credit : Asianet News

ಮದುವೆಯಾಗೋದಾಗಿ ನಂಬಿಸಿ ಅತ್ಯಾ*ಚಾರ ಮಾಡಿದ್ದ ಪೊಲೀಸ್‌ ಸಿದ್ದೇಗೌಡ ಅಲಿಯಾಸ್ ಸಿದ್ದಿ ಎಂಬಾತನನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿದೆ. ಜಮಖಂಡಿ ಮೂಲದ ಸಿದ್ದೇಗೌಡ ಮಂಗಳೂರಿನ ಪಾಂಡೇಶ್ವರದ ಎಸ್‌ಎಎಫ್‌ (Special Action Force) ನಲ್ಲಿ ಕಾನ್‌ಸ್ಟೇಬಲ್ ಆಗಿ ಕೆಲಸ ಮಾಡಿಕೊಂಡಿದ್ದನು.

25
Image Credit : Asianet News

ಸಂತ್ರಸ್ತೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಮೂಲದ ನಿವಾಸಿಯಾಗಿದ್ದು, ಬೆಂಗಳೂರಿನಲ್ಲಿ ವಕೀಲೆಯಾಗಿ ಪ್ರ್ಯಾಕ್ಟಿಸ್ ಮಾಡಿಕೊಂಡಿದ್ದರು. ಹುಬ್ಬಳ್ಳಿ ಮದುವೆಯೊಂದರಲ್ಲಿ ಸಂತ್ರಸ್ತೆಯನ್ನು ಸಿದ್ದೇಗೌಡ ಭೇಟಿಯಾಗಿದ್ದನು. ಇಲ್ಲಿಯೇ ಇಬ್ಬರು ಮೊಬೈಲ್ ನಂಬರ್ ಎಕ್ಸ್‌ಚೇಂಜ್ ಮಾಡಿಕೊಂಡಿದ್ದರು.

Related Articles

Related image1
Jewellery Shop Robbery: ಬೆಂಗಳೂರು ಪ್ಲಾಸ್ಟಿಕ್ ಗನ್ ತೋರಿಸಿ ಜ್ಯೂವೆಲ್ಲರಿ ಶಾಪ್ ದರೋಡೆ: ಮೂವರು ಆರೋಪಿಗಳ ಬಂಧನ
Related image2
ಬೆಂಗಳೂರು: ಮಧ್ಯರಾತ್ರಿ ಪಿಜಿಗೆ ನುಗ್ಗಿ ನಿದ್ದೆಯಲ್ಲಿದ್ದ ಯುವತಿಯ ಕಾಲು ಸವರಿದ ಸ್ವಿಗ್ಗಿ ಯುವಕ ಕೊನೆಗೂ ಅರೆಸ್ಟ್
35
Image Credit : Asianet News

ನಂಬರ್ ಎಕ್ಸ್‌ಚೇಂಜ್ ಆಗುತ್ತಿದ್ದಂತೆ ಸಿದ್ದೇಗೌಡನ ಬಣ್ಣದ ಮಾತುಗಳು ಶುರುವಾಗಿದ್ದವು. ಈ ವೇಳೆ ಮದುವೆಯಾಗೋದಾಗಿ ಸಂತ್ರಸ್ತೆಯನ್ನು ಸಿದ್ದೇಗೌಡ ನಂಬಿಸಿದ್ದನು. ಬೆಂಗಳೂರಿಗೆ ಬರುತ್ತಿದ್ದ ಸಿದ್ದೇಗೌಡ, ಲಾಡ್ಜ್‌ ಬುಕ್ ಮಾಡಿ ಸಂತ್ರಸ್ತೆಯನ್ನು ಕರೆಸಿಕೊಂಡು ಅತ್ಯಾ*ಚಾರ ಎಸಗಿದ್ದಾನೆ. ಒಟ್ಟು ನಾಲ್ಕು ಬಾರಿ ಅತ್ಯಾ*ಚಾರ ಮಾಡಿರೋದಾಗಿ ಸಂತ್ರಸ್ತೆ ಆರೋಪಿಸಿದ್ದಾರೆ.

45
Image Credit : Asianet News

ಇದಾದ ಬಳಿಕ ಮದುವೆ ವಿಷಯ ಬಂದಾಗ ನಿಮ್ಮದು‌ ಕೀಳು ಜಾತಿ. ಹೀಗಾಗಿ ಮದುವೆಗೆ ನಮ್ಮ ಮನೆಯಲ್ಲಿ ಒಪ್ಪಲ್ಲ‌ ಎಂದು ಹೇಳಿದ್ದಾನೆ. ಇಷ್ಟು ಮಾತ್ರವಲ್ಲ ಸಂತ್ರಸ್ತೆಯಿಂದ ಹಣ ಸಹ ಪಡೆದುಕೊಂಡಿದ್ದನು. ಹಣ ಸಹ ವಾಪಸ್ ನೀಡಿಲ್ಲ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಈ ಸಂಬಂಧ ಸಂತ್ರಸ್ತೆ ಆಗಸ್ಟ್ 8ರಂದು ಬಸವೇಶ್ವರ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

55
Image Credit : our own

ದೂರು ದಾಖಲಾಗುತ್ತಿದ್ದ ಸಿದ್ದೇಗೌಡ ಎಸ್ಕೇಪ್ ಆಗಿದ್ದನು. ಆಗಸ್ಟ್ 30 ರಂದು ನಾಪತ್ತೆಯಾಗಿದ್ದ ಸಿದ್ದೇಗೌಡನನ್ನು ಪೊಲೀಸರು ಬಂಧಿಸಿದ್ದರು. ಇದೀಗ ಆರೋಪಿ ಸಿದ್ದೇಗೌಡನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಕ್ರೈಮ್ ನ್ಯೂಸ್
ಕರ್ನಾಟಕ ಸುದ್ದಿ
ಅತ್ಯಾಚಾರ ಪ್ರಕರಣ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved