MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಭಾರತದ ಟಾಪ್-10 ಸುಂದರ ಗ್ರಾಮಗಳು; ಕರ್ನಾಟಕದ ಯಾವ ಹಳ್ಳಿ ಇದೆ?

ಭಾರತದ ಟಾಪ್-10 ಸುಂದರ ಗ್ರಾಮಗಳು; ಕರ್ನಾಟಕದ ಯಾವ ಹಳ್ಳಿ ಇದೆ?

ಭಾರತದಲ್ಲಿ ಅತ್ಯಂತ ಸುಂದರವಾದ ಟಾಪ್-10 ಹಳ್ಳಿಗಳು ಯಾವುವು ಗೊತ್ತಾ.? ಇದರಲ್ಲಿ ಕರ್ನಾಟಕದ ಈ ಹಳ್ಳಿಯೂ ಕೂಡ ಟಾಪ್ 10 ಸುಂದರ ಹಳ್ಳಿಗಳಲ್ಲಿ ಸ್ಥಾನ ಪಡೆದುಕೊಂಡಿರುವುದು ಕನ್ನಡಿಗರ ಹೆಮ್ಮೆಯ ವಿಷಯವಾಗಿದೆ.

2 Min read
Author : Sathish Kumar KH
| Updated : Nov 28 2024, 03:13 PM IST
Share this Photo Gallery
  • FB
  • TW
  • Linkdin
  • Whatsapp
110

ಬಿರ್ ಉತ್ತರ ಭಾರತದ ಹಿಮಾಚಲ ಪ್ರದೇಶ ರಾಜ್ಯದ ಜೋಗಿಂದರ್ ನಗರ ಕಣಿವೆಯ ಪಶ್ಚಿಮದಲ್ಲಿರುವ ಒಂದು ಗ್ರಾಮವಾಗಿದೆ. ಇದು ಭಾರತದ ಪ್ಯಾರಾಗ್ಲೈಡಿಂಗ್ ರಾಜಧಾನಿ ಎಂದು ಖ್ಯಾತಿಯಾಗಿದೆ. 1959ರ ಟಿಬೆಟಿಯನ್ ದಂಗೆಯ ನಂತರ ಟಿಬೆಟಿಯನ್ ನಿರಾಶ್ರಿತರಿಗೆ ನೆಲೆಯಾಗಿ 1960ರ ದಶಕದ ಆರಂಭದಲ್ಲಿ ಸ್ಥಾಪಿಸಲಾದ ಬಿರ್ ಗ್ರಾಮ ಟಿಬೆಟಿಯನ್ ಕಾಲೋನಿಯಾಗಿದೆ.

210

ಝಿರೋ ಭಾರತದ ಅರುಣಾಚಲ ಪ್ರದೇಶದಲ್ಲಿರುವ ಲೋವರ್ ಸುಬನ್ಸಿರಿ ಜಿಲ್ಲೆಯ ಒಂದು ಪಟ್ಟಣವಾಗಿದೆ. ಅಪಾಟಾನಿ ಸಾಂಸ್ಕೃತಿಕ ಕೇಂದ್ರವಾಗಿರುವ ಇದನ್ನು ಯುನೆಸ್ಕೋದ ವಿಶ್ವ ಪರಂಪರೆಯ ತಾಣವಾಗಿ ತಾತ್ಕಾಲಿಕ ಪಟ್ಟಿಯಲ್ಲಿ ಸೇರಿಸಲಾಗಿದೆ.

310

ಕೊಲ್ಲಂಗೋಡು ಭಾರತದ ಕೇರಳದ ಪಾಲಕ್ಕಾಡ್ ಜಿಲ್ಲೆಯ ಒಂದು ಪಟ್ಟಣವಾಗಿದೆ. 2001ರ ಭಾರತದ ಜನಗಣತಿಯ ಪ್ರಕಾರ, ಕೊಲ್ಲಂಗೋಡು-I 18,583 ಜನಸಂಖ್ಯೆಯನ್ನು ಹೊಂದಿತ್ತು. ಕೊಲ್ಲಂಗೋಡು ರೈಲು ನಿಲ್ದಾಣವು ಊಟಾರದಲ್ಲಿದೆ. ಇದು ನೈಸರ್ಗಿಕವಾಗಿ ಅತ್ಯಂತ ಸುಂದರ ತಾಣವಾಗಿದ್ದು, ಭಾರತದ ಟಾಪ್ 10 ಸುಂದರ ಹಳ್ಳಿಗಳಲ್ಲಿ ಒಂದಾಗಿದೆ.

410

ನಾಕೋ ಗ್ರಾಮವು ಉತ್ತರ ಭಾರತದ ಹಿಮಾಲಯದಲ್ಲಿದೆ. ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಟ್ರಾನ್ಸ್-ಹಿಮಾಲಯನ್ ಪ್ರದೇಶದಲ್ಲಿ ಭಾರತ-ಚೀನಾ ಗಡಿಯ ಸಮೀಪದಲ್ಲಿದೆ. ನಾಕೋ ಸರೋವರವು ಗ್ರಾಮದ ಗಡಿಯಲ್ಲಿದ್ದು, ಈ ಗ್ರಾಮದ ಸುಂದರ ನೋಟಕ್ಕೆ ಕಾರಣೀಭೂತವಾಗಿದೆ.

510

ಜಿರಂಗ್ ಗ್ರಾಮವನ್ನು ಭಾರತದ ಚಂದ್ರಗಿರಿ ಎಂದೂ ಕರೆಯುತ್ತಾರೆ. ಇದು ಒಡಿಶಾ ರಾಜ್ಯದ ಗಜಪತಿ ಜಿಲ್ಲೆಯ ಒಂದು ಸಣ್ಣ ಹಳ್ಳಿಯಾಗಿದೆ. ಇದೊಂದು ಸಣ್ಣ ಹಳ್ಳಿಯಾಗುದ್ದರೂ ಟಿಬೆಟಿಯನ್ ಜನರೇ ಹೆಚ್ಚಾಗಿ ಇಲ್ಲಿ ವಾಸವಾಗಿದ್ದಾರೆ. ಈ ಗ್ರಾಮಕ್ಕೆ ಜಿರಂಗ್ ಎಂದು ಹೆಸರು ಬರಲು ಇಲ್ಲಿನ ಬೌದ್ಧ ವಿಹಾರವೇ ಕಾರಣವಾಗಿದೆ. ಇಲ್ಲಿನ ಬೌದ್ಧ ವಿಹಾರವು ಪೂರ್ವ ಭಾರತದ ಅತಿ ದೊಡ್ಡ ಬೌದ್ಧ ವಿಹಾರಗಳಲ್ಲಿ ಒಂದಾಗಿದೆ.

610

ವರಂಗ ಗ್ರಾಮ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿದೆ.2011ರ ಜನಗಣತಿಯ ಪ್ರಕಾರ, ಇದು 4,011 ಜನಸಂಖ್ಯೆಯನ್ನು ಹೊಂದಿದೆ. ಈ ಗ್ರಾಮವು ಪ್ರಮುಖ ಜೈನ ಕೇಂದ್ರವಾಗಿದೆ. ಇಲ್ಲಿ ಕೆರೆ ಬಸದಿ ಪ್ರಮುಖ ಪ್ರವಾಸಿ ತಾಣವೂ ಆಗಿದೆ. ಈ ಗ್ರಾಮವು ಕರ್ನಾಟಕದ ನಂಬರ್ 1 ಸುಂದರ ತಾಣವಾಗಿದೆ. ಇದು ಭಾರತದ ಟಾಪ್ 10 ಸುಂದರ ಹಳ್ಳಿಗಳಲ್ಲಿ ಒಂದಾಗಿದೆ.

ಮತ್ತೊಂದೆಡೆ ಶಿವಮೊಗ್ಗ ಜಿಲ್ಲೆಯ ಮತ್ತೂರು ಗ್ರಾಮವನ್ನೂ ಕೂಡ ಕರ್ನಾಟಕದ ಸುಂದರ ಗ್ರಾಮಗಳಲ್ಲಿ ಟಾಪ್-1 ಸ್ಥಾನ ಪಡೆದುಕೊಂಡಿದೆ ಎಂದು ಹೇಳಲಾಗುತ್ತದೆ. ಈ ಮತ್ತೂರು ಗ್ರಾಮ ತನ್ನ ರಮಣೀಯ ಸೌಂದರ್ಯ ಮತ್ತು ಪ್ರಾಚೀನ ದೇವಾಲಯಗಳಿಗೆ ಹೆಸರುವಾಸಿಯಾಗಿದೆ.

710

ಲಮಾಯೂರೋ ಭಾರತದ ಲಡಾಖ್‌ನ ಲೇಹ್ ಜಿಲ್ಲೆಯ ಒಂದು ಹಳ್ಳಿಯಾಗಿದೆ. ಲಮಯೂರು ಮಠವು ಹತ್ತಿರದಲ್ಲಿದೆ. ಇದು ಖಾಲ್ಸಿ ತಹಸಿಲ್‌ನಲ್ಲಿದೆ. ಈ ಗ್ರಾಮದ ಸುತ್ತಮುತ್ತಲಿನ ಭೂಪ್ರದೇಶವು ಚಂದ್ರನ ಮೇಲ್ಮೈಯನ್ನು ಹೋಲುವುದರಿಂದ ಈ ಪ್ರದೇಶವನ್ನು 'ಮೂನ್ ಲ್ಯಾಂಡ್' ಎಂದೂ ಕರೆಯಲಾಗುತ್ತದೆ.

ಇದನ್ನೂ ಓದಿ: 2 ದಿನದ ಟ್ರಿಪ್ ಹೋಗಲು ವಿಶ್ವದ ಟಾಪ್ 5 ಸಣ್ಣ ದೇಶಗಳಿವು

810

ಖಿಮ್ಸರ್ ಗ್ರಾಮವನ್ನು ಭಾರತದ ಥಾರ್ ಮರುಭೂಮಿಯ ಹೃದಯಭಾಗದಲ್ಲಿ ಅಡಗಿರುವ ಗುಪ್ತ ರತ್ನ ಎಂದೇ ಕರೆಯುತ್ತಾರೆ. ಈ ವಿಶಿಷ್ಟ ಗ್ರಾಮವು ಚಿನ್ನದ ಬಣ್ಣದಲ್ಲಿರುವ ಮರಳಿನ ನಡುವೆ ಒಂದು ಅದ್ಭುತವಾದ ಓಯಸಿಸ್ ಅನ್ನು ಹೊಂದಿದೆ. ಇದು ಶಾಂತವಾದ ಅನುಭವವನ್ನು ನೀಡುತ್ತದೆ. ಇದೊಂದು ಪ್ರವಾಸಿ ತಾಣವೂ ಆಗಿದೆ.

910

ಮನ ಎಂಬ ಗ್ರಾಮವು ಭಾರತದ ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿದೆ. ಇದು ಸಮುದ್ರ ಮಟ್ಟದಿಂದ 3,200 ಮೀಟರ್‌ಗಳು (10,500 ಅಡಿ) ಎತ್ತರದಲ್ಲಿದೆ. ಇದು ರಾಷ್ಟ್ರೀಯ ಹೆದ್ದಾರಿ 7ರ ಉತ್ತರದ ಟರ್ಮಿನಸ್‌ನಲ್ಲಿದೆ. ಇದು ಮನಾ ಪಾಸ್‌ನ ಮೊದಲ ಗ್ರಾಮವಾಗಿದೆ ಮತ್ತು ಭಾರತ ಮತ್ತು ಟಿಬೆಟ್‌ನ ಗಡಿಯಿಂದ 26 ಕಿಲೋಮೀಟರ್ ದೂರದಲ್ಲಿದೆ. ಹಾಗಾಗಿ ಇದನ್ನು ಭಾರತದ ಕೊನೆಯ ಗ್ರಾಮವೆಂದೂ ಕರೆಯುತ್ತಾರೆ.

1010

ಅರು ಗ್ರಾಮ ಕಾಶ್ಮೀರದಲ್ಲಿದೆ, ಇದನ್ನು ಅಡವ್ ಎಂದು ಕರೆಯುತ್ತಾರೆ. ಇದು ಭಾರತದ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಒಂದು ಹಳ್ಳಿಯಾಗಿದ್ದು, ಪ್ರಮುಖ ಪ್ರವಾಸಿ ತಾಣವಾಗಿದೆ. ಇದು ಜಿಲ್ಲಾ ಕೇಂದ್ರವಾದ ಅನಂತನಾಗ್ ನಗರದಿಂದ 53 ಕಿಮೀ ದೂರದಲ್ಲಿದೆ. ಇದು ಪಹಲ್ಗಾಮ್‌ನಿಂದ ಸುಮಾರು 12 ಕಿಮೀ ದೂರದಲ್ಲಿದೆ. ಇನ್ನು ಈ ಹಳ್ಳಿ ಚಳಿಗಾಲದಲ್ಲಿ ಮಂಜಿನಿಂದ ಆವೃತವಾಗಿದ್ದು, ಉಳಿದ ದಿನಗಳಲ್ಲಿ ಹಚ್ಚ ಹಸಿರಿನಿಂದ ಕೂಡಿರುತ್ತದೆ.

ಮೂಲ ಮಾಹಿತಿ: https://x.com/VertigoWarrior/status/1591325948770590721

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.

Latest Videos
Recommended Stories
Recommended image1
ವಧು ಬೇಡಿಕೆ ಕೇಳಿ ಬೆಚ್ಚಿಬಿದ್ದ ಶೋಭನ ರಾತ್ರಿಗೆ ರೆಡಿಯಾಗಿ ಬಂದ ವರ; ಕುಟುಂಬಸ್ಥರು ಶಾಕ್
Recommended image2
Now Playing
ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
Recommended image3
ನಿನ್ನೆ ಮೊನಾಲಿಸಾ ಮಿಸ್ಸಿಂಗ್​ ಅಂದ, ಇಂದು ನಾನವಳ ಗಂಡನೇ ಅಲ್ಲ ಅಂತಿದ್ದಾನೆ! ಅಷ್ಟಕ್ಕೂ ಏನಾಯ್ತು ನೋಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved