MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ಅಂದು ಗುಜರಿ ವ್ಯಾಪಾರಿ, ಇಂದು ಕೋಟ್ಯಾಧಿಪತಿ, ಹೀಗಿದೆ ನವಾಬ್ ಮಲಿಕ್ ರಾಜಕೀಯ ಪಯಣ!

ಅಂದು ಗುಜರಿ ವ್ಯಾಪಾರಿ, ಇಂದು ಕೋಟ್ಯಾಧಿಪತಿ, ಹೀಗಿದೆ ನವಾಬ್ ಮಲಿಕ್ ರಾಜಕೀಯ ಪಯಣ!

ಎನ್‌ಸಿಪಿ ನಾಯಕ ಮತ್ತು ಉದ್ಧವ್ ಠಾಕ್ರೆ ಸರ್ಕಾರದ ಸಚಿವ ನವಾಬ್ ಮಲಿಕ್ ಅವರನ್ನು ಇಡಿ ಬಂಧಿಸಿದೆ. ಮಲಿಕ್ ಬಂಧನದ ನಂತರ ಮಹಾರಾಷ್ಟ್ರದ ರಾಜಕೀಯದಲ್ಲಿ ರಾಜಕೀಯ ಸಂಚಲನ ಉಂಟಾಗಿದೆ. ಮಾಧ್ಯಮಗಳಲ್ಲಿ ಎಲ್ಲೆಂದರಲ್ಲಿ ಅವರದ್ದೇ ಸುದ್ದಿ. ನವಾಬ್ ಮಲಿಕ್ ಬಹಳ ಸಮಯದಿಂದ ಚರ್ಚೆಯಲ್ಲಿದ್ದಾರೆ. ಆದರೆ ಇದೀಗ ಅವರ ವಿರುದ್ಧ ಕ್ರಮಕೈಗೊಂಡಿರುವುದರಿಂದ ಈ ವಿಚಾರ ಮತ್ತಷ್ಟು ಸದ್ದು ಮಾಡುತ್ತಿದೆ. ಅಷ್ಟಕ್ಕೂ ನವಾಬ್ ಮಲಿಕ್ ಯಾರು? ಅವರ ರಾಜಕೀಯ ಪಯಣ ಹೇಗೆ ಆರಂಭವಾಯಿತು ಮತ್ತು ಎಷ್ಟು ಆಸ್ತಿಯ ಒಡೆಯ ಇಲ್ಲಿದೆ ವಿವರ

3 Min read
Suvarna News
Published : Feb 23 2022, 07:23 PM IST
Share this Photo Gallery
  • FB
  • TW
  • Linkdin
  • Whatsapp
18

ವಾಸ್ತವವಾಗಿ, ನವಾಬ್ ಮಲಿಕ್ ಅವರು ಪ್ರಸ್ತುತ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದಾರೆ, ಅಲ್ಪಸಂಖ್ಯಾತರು, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆಯ ಜವಾಬ್ದಾರಿಯನ್ನು ಹೊಂದಿದ್ದಾರೆ. ಅವರು ಮುಖ್ಯವಾಗಿ ಎನ್‌ಸಿಪಿಯಲ್ಲಿ ಮುಸ್ಲಿಂ ಮುಖವಾಗಿ ಗುರುತಿಸಿಕೊಂಡಿದ್ದಾರೆ. ಅವರು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಮತ್ತು ಹಿರಿಯ ನಾಯಕ ಶರದ್ ಪವಾರ್‌ಗೆ ಬಹಳ ಹತ್ತಿರದವರು ಎಂದು ಪರಿಗಣಿಸಲಾಗಿದೆ. ಆದರೆ, ಆ ಬಳಿಕ ಸಮಾಜವಾದಿ ಪಕ್ಷದೊಂದಿಗೆ ರಾಜಕೀಯ ಪಯಣ ಆರಂಭಿಸಿದ ಮಲಿಕ್ ಮುಂದೆ ತೆಗೆದುಕೊಂಡಿದ್ದೇ ಬೇರೆ ದಾರಿ. ಆದರೆ ಇಂದು ಅವರು ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವರಾಗಿದ್ದಾರೆ.
 

28

ರಾಜಕೀಯಕ್ಕೆ ಬರುವ ಮೊದಲು ನವಾಬ್ ಮಲಿಕ್ ತಮ್ಮ ವೃತ್ತಿಜೀವನವನ್ನು ಗುಜರಿ ವ್ಯಾಪಾರಿಯಾಗಿ ಪ್ರಾರಂಭಿಸಿದರು ಎಂಬುವುದು ಉಲ್ಲೇಖನೀಯ. ಅವರು ಕೆಲವು ವರ್ಷಗಳ ಕಾಲ ಈ ಕೆಲಸವನ್ನು ಮಾಡಿದರು. ಅಷ್ಟೇ ಅಲ್ಲ, ಪತ್ರಿಕಾಗೋಷ್ಠಿಯಲ್ಲಿ ಅವರೇ ನಾನೊಬ್ಬ ಗುಜರಿ ವ್ಯಾಪಾರಿ ಎಂದು ಹೇಳಿದ್ದರು. ನನ್ನ ತಂದೆ ಮುಂಬೈನಲ್ಲಿ ಗುಜರಿ ವ್ಯಾಪಾರ ಮಾಡುತ್ತಿದ್ದರು. ಎಂಎಲ್ ಎ ಆಗುವವರೆಗೂ ಈ ಉದ್ಯಮ ಕೂಡ ಮಾಡಿದ್ದೆ. ಅದರ ಬಗ್ಗೆ ನನಗೆ ಹೆಮ್ಮೆ ಇದೆ ಎಂದಿದ್ದರು. 
 

38

ನವಾಬ್ ಮಲಿಕ್ ಮೂಲತಃ ಉತ್ತರ ಪ್ರದೇಶದವರು. ಅವರು 20 ಜೂನ್ 1959 ರಂದು ಉತ್ತರಪ್ರದೇಶದ ಬಲರಾಂಪುರ ಜಿಲ್ಲೆಯ ತಾಲೂಕಿನ ಧುಸ್ವಾ ಗ್ರಾಮದಲ್ಲಿ ಜನಿಸಿದರು. ಆದಾಗ್ಯೂ, 1970 ರಲ್ಲಿ ಅವರ ಕುಟುಂಬ ಮುಂಬೈಗೆ ಸ್ಥಳಾಂತರಗೊಂಡಿತು. ಇಲ್ಲಿಂದ ಮಾಯಾನಗರಿಯ ಅಂಜುಮನ್ ಶಾಲೆಯಲ್ಲಿ 10ನೇ ತರಗತಿವರೆಗೆ ಓದಿದ್ದಾರೆ. ಇದಾದ ನಂತರ ಬುರ್ಹಾನಿ ಕಾಲೇಜಿನಲ್ಲಿ 12ನೇ ವರೆಗೆ ಓದಿದರು. ನಂತರ 1979 ರಲ್ಲಿ, ಅವರು ಈ ಕಾಲೇಜಿನಲ್ಲಿ ಬಿಎಗೆ ಪ್ರವೇಶ ಪಡೆದರು, ಆದರೆ ಕಾರಣಾಂತರಗಳಿಂದ ಅಂತಿಮ ವರ್ಷವನ್ನು ಮಾಡಲು ಸಾಧ್ಯವಾಗಲಿಲ್ಲ.

48

ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಮಲಿಕ್ ತನ್ನ ಕುಟುಂಬ ವ್ಯವಹಾರದೊಂದಿಗೆ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಅದನ್ನು ಹೆಚ್ಚು ಕಾಲ ಮಾಡಲು ಸಾಧ್ಯವಾಗಲಿಲ್ಲ, ಏಕೆಂದರೆ ಈ ಮಧ್ಯೆ ಅವರ ರಾಜಕೀಯ ಆಸಕ್ತಿಯು ಹೆಚ್ಚಾಗತೊಡಗಿತು. 90ರ ದಶಕದಲ್ಲಿ ದೇಶದಲ್ಲಿ ರಾಮಮಂದಿರ ಚಳವಳಿ ಆರಂಭವಾದಾಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ವಿರುದ್ಧ ಮಾತನಾಡಲು ಆರಂಭಿಸಿದ್ದರು. ಈ ನಡುವೆ ಎಸ್ಪಿ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರ ಸಂಪರ್ಕಕ್ಕೆ ಬಂದರು.

58

ಮುಸ್ಲಿಮರಲ್ಲಿ ನವಾಬ್ ಮಲಿಕ್ ಅವರ ಜನಪ್ರಿಯತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಲಾಯಂ ಸಿಂಗ್ ಕೂಡ ಎಸ್ಪಿಗೆ ಸೇರ್ಪಡೆಗೊಂಡರು ಎಂಬುವುದು ಉಲ್ಲೇಖನೀಯ. ಇದಾದ ಬಳಿಕ 1996ರಲ್ಲಿ ಮಹಾರಾಷ್ಟ್ರದ ಮುಸ್ಲಿಂ ಪ್ರಾಬಲ್ಯವಿರುವ ನೆಹರೂ ನಗರದಲ್ಲಿ ಎಸ್‌ಪಿಯಿಂದ ಮೊದಲ ಬಾರಿಗೆ ಟಿಕೆಟ್‌ ಪಡೆದರು. ಮೊದಲ ಹಂತದಲ್ಲಿ, ಮಲಿಕ್ ಅವರ ಅದೃಷ್ಟವು ಬಲವಾಗಿ ಕೈ ಹಿಡಿದಿದೆ, ಅವರು ಗೆದ್ದ ನಂತರ ಅವರು ವಿಧಾನಸಭೆಗೆ ತಲುಪಿದರು. ಈ ಗೆಲುವಿನ ನಂತರ ಅವರು ಮುಲಾಯಂ ಸಿಂಗ್ ಅವರಿಗೆ ಅತ್ಯಂತ ನಿಕಟವಾಗಿರುವ ನಾಯಕರಲ್ಲಿ ಒಬ್ಬರಾದರು.

68

ನವಾಬ್ ಮಲಿಕ್ ನಿರಂತರ ಎರಡು ಬಾರಿ ಸಮಾಜವಾದಿ ಪಕ್ಷದಿಂದ ಎರಡು ಬಾರಿ ಚುನಾವಣೆ ಗೆದ್ದ ಬಳಿಕ 2004 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಎಸ್‌ಪಿ ತೊರೆದರು. ಇದಾದ ನಂತರ ಅವರು ಶರದ್ ಪವಾರ್ ಅವರ ಪಕ್ಷವಾದ ಎನ್‌ಸಿಪಿ ಸೇರಿದರು. ಅದೇ ವರ್ಷದಲ್ಲಿ ನವಾಬ್ ಮಲಿಕ್ ಅವರು ನೆಹರು ನಗರದಿಂದ ಎನ್‌ಸಿಪಿಯಿಂದ ಟಿಕೆಟ್ ಪಡೆದರು ಮತ್ತು ಗೆದ್ದರು. ನಂತರ 2009 ರ ವಿಧಾನಸಭಾ ಚುನಾವಣೆಯಲ್ಲಿ ಡಿಲಿಮಿಟೇಶನ್ ನಂತರ, ನವಾಬ್ ಮಲಿಕ್ ಅನುಶಕ್ತಿ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸತತ ನಾಲ್ಕನೇ ಬಾರಿಗೆ ಶಾಸಕರಾದರು. ಆದರೆ, 2014ರ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರು. ಅವರು 2019 ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರು ಮತ್ತು ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿಯ ಸಮ್ಮಿಶ್ರ ಸರ್ಕಾರವನ್ನು ರಚಿಸಲಾಯಿತು. ಅಲ್ಲಿ ನವಾಬ್ ಮಲಿಕ್ ಅವರನ್ನು ಮಹಾರಾಷ್ಟ್ರ ಸರ್ಕಾರದಲ್ಲಿ NCP ಕೋಟಾದಿಂದ ಮಂತ್ರಿ ಮಾಡಲಾಯಿತು.

78

ನವಾಬ್ ಮಲಿಕ್ 1980 ರಲ್ಲಿ 21 ನೇ ವಯಸ್ಸಿನಲ್ಲಿ ಮೆಹಜಬೀನ್ ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರಿದ್ದಾರೆ. ಪುತ್ರರ ಹೆಸರು ಫರಾಜ್ ಮತ್ತು ಅಮೀರ್, ಪುತ್ರಿಯರ ಹೆಸರು ನಿಲೋಫರ್ ಮತ್ತು ಸನಾ. ಮಲಿಕ್ ಅವರ ವ್ಯಾಪಾರವನ್ನು ಅವರ ಪುತ್ರರು ಮತ್ತು ಪುತ್ರಿಯರು ನಡೆಸುತ್ತಾರೆ.
 

88

ಗುಜರಿ ವ್ಯಾಪಾರದಿಂದ ವೃತ್ತಿ ಜೀವನ ಆರಂಭಿಸಿದ ನವಾಬ್ ಮಲಿಕ್ ಇಂದಿನ ಕಾಲದಲ್ಲಿ ಕೋಟಿಗಟ್ಟಲೇ ಆಸ್ತಿಯ ಒಡೆಯ. 2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ನೀಡಿದ ಅಫಿಡವಿಟ್‌ನಲ್ಲಿ ಅವರು ನೀಡಿರುವ ಮಾಹಿತಿ ಪ್ರಕಾರ, ಅವರು ಒಟ್ಟು 5 ಕೋಟಿ 74 ಲಕ್ಷ 69 ಆಸ್ತಿಯ ಒಡೆಯರಾಗಿದ್ದಾರೆ.

About the Author

SN
Suvarna News
ಜಾರಿ ನಿರ್ದೇಶನಾಲಯ
ಇಡಿ ದಾಳಿ
ರಾಷ್ಟ್ರೀಯ ಕಾಂಗ್ರೆಸ್ ಪಕ್ಷ
ಮಹಾರಾಷ್ಟ್ರ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved