ನನ್ನ ತಂದೆ ಒಳ್ಳೆ ವ್ಯಕ್ತಿಯಾಗಿದ್ರು, ಅವರನ್ನೇಕೆ ಸಾಯ್ಸಿದ್ರಿ? ರಾಜೀವ್ ಹಂತಕಿಯನ್ನು ಪ್ರಶ್ನಿಸಿದ್ದ ಪ್ರಿಯಾಂಕಾ!
ಜೈಲಿನಲ್ಲಿ ಬಂಧಿಯಾಗಿದ್ದ ರಾಜೀವ್ ಗಾಂಧೀ ಹತ್ಯೆ ಆರೋಪಿ ನಳಿನಿ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ತಮಿಳುನಾಡಿನ ವೆಲ್ಲೂರ್ ಜೈಲಿನಲ್ಲಿ ಕೈದಿಯಾಗಿರುವ ನಳಿನಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಜೈಲಿನಲ್ಲಿದ್ದ ಮತ್ತೊಬ್ಬ ಕೈದಿ ಜೊತೆಗಿನ ಜಗಳದ ಬಳಿಕ ನಳಿನಿ ಈ ಯತ್ನ ನಡೆಸಿದ್ದಾರೆನ್ನಲಾಗಿದೆ. ನಳಿನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ದೋಷಿಯಾಗಿದ್ದಾರೆ. 2008 ರಲ್ಲಿ ನಳಿನಿಯನ್ನು ಪ್ರಯಾಂಕಾ ಗಾಂಧಿ ಕೂಡಾ ಭೇಟಿಯಾಗಿದ್ದರು. 90ನಿಮಿಷಗಳ ಈ ಭೇಟಿಯಲ್ಲಿ ನಡೆದಿದ್ದೇನು? ಇಲ್ಲಿದೆ ವಿವರ
ನಳಿನಿ ಕಳೆದ 29 ವರ್ಷಗಳಿಂದ ಜೈಲಿನಲ್ಲಿದ್ದಾರೆ. ಪ್ರಿಯಾಂಕಾ ಗಾಂಧಿ 2008ರ ಮಾರ್ಚ್ 19ರಂದು ನಳಿನಿಯನ್ನು ಭೇಟಿಯಾಗಿದ್ದರು. ಈ ಕುರಿತಾಗಿ ನಳಿನಿ ತಾವು ಬರೆದ ಪುಸ್ತಕ ರಾಜೀವ್ ಅಸಾಸಿನೇಷನ್: ಹಿಡನ್ ಟ್ರುಥ್ಸ್ ಆಂಡ್ ಪ್ರಿಯಾಂಕಾ, ನಳಿನಿ ಮೀಟಿಂಗ್ನಲ್ಲಿ ಬರೆದಿದ್ದಾರೆ.
ಕೋಪಗೊಂಡಿದ್ದರು ಪ್ರಿಯಾಂಕಾ: ಪುಸ್ತಕದಲ್ಲಿ ಬರೆದಿರುವ ಮಾಹಿತಿ ಅನ್ವಯ ಪ್ರಿಯಾಂಕಾ ಗಾಂಧಿ ನಳಿನಿಯವರನ್ನು ಕಂಡ ಕೂಡಲೇ ಕೋಪಗೊಂಡಿದ್ದರು. ಈ ಭೇಟಿ ಸಂಬಂಧ ಟೈಮ್ಸ್ ಆಫ್ ಇಂಡಿಯಾ ಕೂಡಾ 2008ರಇದರ ಅನ್ವಯ ಪ್ರಿಯಾಂಕಾ, ನಳಿನಿಯನ್ನು ಬಹಳ ಸಮಯ ನೋಡುತ್ತಲೇ ನಿಂತಿದ್ದರು. ಇದಾದ ಬಳಿಕ ಅಳುತ್ತಲೇ ನನ್ನ ತಂದೆ ಬಹಳ ಒಳ್ಳೆಯ ವ್ಯಕ್ತಿಯಾಗಿದ್ದರು. ಅವರನ್ನು ನೀನು ಯಾಕೆ ಕೊಂದೆ. ಸಮಸ್ಯೆ ಇತ್ತೆಂದಾದರೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಿತ್ತಲ್ಲವೇ? ಹತ್ಯೆ ಮಾಡುವ ಗತ್ಯವೇನಿತ್ತು? ಎಂದು ಪ್ರಶ್ನಿಸಿದ್ದರು.
ನಳಿನಿ ತಮ್ಮ ಪುಸ್ತಕದಲ್ಲೂ ಈ ಬಗ್ಗೆ ಬರೆದಿದ್ದು, ಮಗಳೊಬ್ಬಳು ತನ್ನ ತಂದೆಯನ್ನು ಕಳೆದುಕೊಂಡ ನೋವು ಪ್ರಿಯಾಂಕಾ ಕಣ್ಣಲ್ಲಿ ಕಾಣಿಸುತ್ತಿತ್ತು ಎಂದು ಬರೆದಿದ್ದಾರೆ.
ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ ನಳಿನಿ: ನಳಿನಿ 29 ವರ್ಷಗಳಿಂದ ಜೈಲಿನಲ್ಲಿದ್ದಾರೆ. ಅಲ್ಲದೇ ಅವರು ತನ್ನ ಮಗಳಿಗೆ ಜೈಲಿನಲ್ಲೇ ಜನ್ಮ ಕೊಟ್ಟಿದ್ದಾರೆ. ಆರಂಭದಲ್ಲಿ ನಳಿನಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು ಬಳಿಕ ಇದನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಾಡು ಮಾಡಲಾಗಿತ್ತು. ಇದಾದ ಬಳಿಕ ಕಳೆದ ವರ್ಷ ಹೈಕೋರ್ಟ್ ನಳಿನಿಗೆ ಮಗಳ ಮದುವೆಗೆ ಹಾಜರಾಗಲು 30 ದಿನಗಳ ಪೆರೋಲ್ ನೀಡಿತ್ತು.
ಪತಿಯೂ ಜೈಲಿನಲ್ಲಿ: ಚೆನ್ನೈ ಬಳಿ ಚುನಾವಣಾ ರ್ಯಾಲಿ ಒಂದರಲ್ಲಿ ರಾಜೀವ್ ಗಾಂಧಿ ಭೇಟಿಯಾಗುವ ನೆಪದಲ್ಲಿ ಮಹಿಳೆಯೊಬ್ಬಳು ತನ್ನನ್ನು ತಾನು ಮಾನವ ಬಾಂಬ್ ಆಗಿ ಸ್ಫೋಟಿಸಿಕೊಂಡಿದ್ದಳು. ಈ ವೆಳೆ ರಾಜೀವ್ ಗಾಂಧಿ ಮೃತಪಟ್ಟಿದ್ದರು. ಪ್ರಕರಣ ಸಂಬಂಧ ಎಲ್ಲಾ 7 ದೋಷಿಗಳು 1991ರಿಂದ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ದೋಷಿಗಳಲ್ಲಿ ಪೆರರೀವಲನ್, ಮುರುಗನ್, ನಳಿನಿ, ಶಾಂತನ್, ರವಿಚಂದ್ರನ್, ಜಯಕುಮಾರ್ ಹಾಗೂ ರಾಬರ್ಟ್ ಪಾಯಸ್ ಕೂಡಾ ಶಾಮೀಲಾಗಿದ್ದಾರೆ. ಇವರಲ್ಲಿ ಮುರುಗನ್ ನಳಿನಿ ಗಂಡ.