Sri Lanka Economic Crisis ದೇಶ ದಿವಾಳಿಯಾದದ್ದು ಹೇಗೆ? ಆ ಒಂದು ಕುಟುಂಬ ರಾಜಕೀಯದ ಕಥೆ!

Sri Lanka Economic Crisis ದೇಶ ದಿವಾಳಿಯಾದದ್ದು ಹೇಗೆ? ಆ ಒಂದು ಕುಟುಂಬ ರಾಜಕೀಯದ ಕಥೆ!

Published : Apr 05, 2022, 04:39 PM IST

ಆರ್ಥಿಕ ಸಂಕಷ್ಟದಿಂದಾಗಿ ಬಳಲುತ್ತಿರುವ ಶ್ರೀಲಂಕಾದಲ್ಲಿ ಅಕ್ಷರಶಃ ಒಂದು ಹೊತ್ತಿನ ಊಟಕ್ಕೂ ಜನರು ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ಒಂದು ಕೆಜಿ ಅಕ್ಕಿಗೆ 500 ರೂಪಾಯಿ ಆಗಿದ್ದರೆ, ಸಕ್ಕರೆ ಕೆಜಿಗೆ 290 ರೂಪಾಯಿ ಆಗಿದೆ. ಆದರೆ, ಶ್ರೀಲಂಕಾ ಈ ಸ್ಥಿತಿಗೆ ಬರಲು ಕಾರಣವಾದರೂ ಏನು ಎನ್ನುವ ಕುತೂಹಲ ಎಲ್ಲರಲ್ಲಿದೆ.

ಬೆಂಗಳೂರು (ಏ.5): ದೇಶದಲ್ಲಿ ಒಂದು ಸ್ಥಿರ ಸರ್ಕಾರ, ಆರ್ಥಿಕ ಸ್ವಾವಲಂಬನೆ ಇಲ್ಲದೇ ಇದ್ದಲ್ಲಿ ಏನಾಗಬಹುದು ಎನ್ನುವುದಕ್ಕೆ ಶ್ರೀಲಂಕಾ ವಿಶ್ವದ ಎದುರಿಗೆ ನಿಂತ ಮತ್ತೊಂದು ಉದಾಹರಣೆ.  ಆರ್ಥಿಕ ಸಂಕಷ್ಟದಿಂದಾಗಿ (Economic Crisis) ಇಂದು ಇಡೀ ದೇಶ ದಿವಾಳಿಯ ಅಂಚಿಗೆ ಬಂದು ತಲುಪಿದೆ. ಶ್ರೀಲಂಕಾದಲ್ಲಿ ದಿನನಿತ್ಯದ ವಸ್ತುಗಳಿಗೆ ಇರುವ ಬೆಲೆ ಕೇಳಿದರೆ, ಅಬ್ಬಾ ನಾನಿರುವ ದೇಶವೇ ಬೆಸ್ಟ್ ಅನ್ನೋ ಖುಷಿ ನಮ್ಮದಾಗುತ್ತೆ.

ಶ್ರೀಲಂಕಾದಲ್ಲಿ (Sri Lanka) ಒಂದು ಕೆಜಿ ಅಕ್ಕಿಗೆ 500 ರೂಪಾಯಿ, ಕೆಜಿ ಸಕ್ಕರೆಗೆ 290 ರೂಪಾಯಿ, 400 ಗ್ರಾಂ ಹಾಲಿಗೆ 79 ರೂಪಾಯಿ. ಒಂದೇ ಒಂದು ಬಾಂಬ್ ಬ್ಲಾಸ್ಟ್ ನಿಂದ ಇಡೀ ದೇಶ ಇಂದು ಬೀದಿಗೆ ಬಿದ್ದಿದೆ ಎಂದರೆ ಅಚ್ಚರಿಯಾಗದೇ ಇರದು. ಇದರೊಂದಿಗೆ ಶ್ರೀಲಂಕಾವನ್ನು ಆಳಿದ ಒಂದೇ ಕುಟುಂಬ ಹಾಗೂ ಅದರ ರಾಜಕೀಯಗಳು (Family Politics) ಇವೆಲ್ಲವೂ ದೇಶದ ದಿವಾಳಿಗೆ ಕಾರಣವಾಗಿ ಉಳಿದುಕೊಂಡಿದೆ.

Sri Lanka Economic Crisis ಅಧ್ಯಕ್ಷರ ಮನೆಯ ಮುಂದೆ ಹಿಂಸಾತ್ಮಕ ಪ್ರತಿಭಟನೆ, ದೇಶದಲ್ಲಿ ಡೀಸೆಲ್ ಖಾಲಿ!

ನೀರು, ಡೀಸೆಲ್, ಔಷಧ, ಎಕ್ಸಾ ಯಾವುದಕ್ಕೂ ಶ್ರೀಲಂಕಾ ಬಳಿ ಹಣವಿಲ್ಲ. ಇದಕ್ಕೆಲ್ಲ ಕಾರಣ ಒಂದು ಕುಟುಂಬದ ಎಡವಟ್ಟು. ಶ್ರೀಲಂಕಾದ ಜಿಡಿಪಿಗೆ (GDP) ಬಹುದೊಡ್ಡ ಕಾಣಿಕೆ ನೀಡುವುದು ಪ್ರವಾಸೋದ್ಯಮ (Tourism) ಆದರೆ, 2019ರಲ್ಲಿ ಸಂಭವಿಸಿದ ಈಸ್ಟರ್ ಬಾಂಬ್ ಸ್ಫೋಟದಿಂದಾಗಿ ಶ್ರೀಲಂಕಾಗೆ ಬರುವ ಪ್ರವಾಸಿಗರಲ್ಲಿ ದೊಡ್ಡ ಮಟ್ಟದ ಇಳಿಕೆಯಾಗಿದೆ. ಯುರೋಪಿಯನ್ ಪ್ರವಾಸಿಗರು ದಂಡಿಯಾಗಿ ಸುರಿಯುತ್ತಿದ್ದ ಹಣಕ್ಕೂ ಕಡಿವಾಣ ಬಿದ್ದಿದೆ.

98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
44:18ಡೊನಾಲ್ಡ್ ಟ್ರಂಪ್ ಶಾಂತಿ ಸೂತ್ರ: ಇಸ್ರೇಲ್-ಗಾಜಾ ಯುದ್ಧಕ್ಕೆ ಬೀಳುತ್ತಾ ತೆರೆ?
22:58ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!
18:07ಕೊಲೆಗಡುಕರ ಟಾರ್ಗೆಟ್ ಆಗಿದ್ದೇಕೆ ಟ್ರಂಪ್ ಆಪ್ತ? ಅಮೆರಿಕಾದ ಪ್ರಭಾವಿಯ ಹತ್ಯೆಗೂ ಮುನ್ನ ಆಗಿದ್ದೇನು?
19:06ಕಿಮ್ ಕುಟುಂಬವೇ ರಹಸ್ಯಗಳ ಗೂಡು, ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?
Read more