15ನೇ ದಿನವೂ ರಣರಂಗದಲ್ಲಿ ಇಸ್ರೇಲ್ ಗುಂಡಿನ ಮಳೆ: ಗಾಜಾದ ಮತ್ತೊಂದು ಮಸೀದಿ ಉಡೀಸ್‌

15ನೇ ದಿನವೂ ರಣರಂಗದಲ್ಲಿ ಇಸ್ರೇಲ್ ಗುಂಡಿನ ಮಳೆ: ಗಾಜಾದ ಮತ್ತೊಂದು ಮಸೀದಿ ಉಡೀಸ್‌

Published : Oct 21, 2023, 10:34 AM IST

ಎಲ್ಲೆಲ್ಲೂ ಗುಂಡಿನ ಮಳೆ.. ಬಹುಮಹಡಿ ಕಟ್ಟಡಗಳ ಮೇಲೆ ರಾಕೆಟ್ ದಾಳಿ. ಎಲ್ಲೆಲ್ಲೂ ಜನರ ಚೀತ್ಕಾರ. ಆಸ್ಪತ್ರೆಗಳಲ್ಲಿ ಗಾಯಾಳುಗಳ ನರಳಾಟ. ಗಾಜಾ ಉತ್ತರ ಭಾಗದಲ್ಲೆಡೆ ದಟ್ಟ ಹೊಗೆ. ಗಾಜಾ ಬೀದಿಯಲ್ಲಿ ರಕ್ತಪಾತ. 14ನೇ ದಿನದ ಯುದ್ಧಭೂಮಿಯಲ್ಲಿ ಇಸ್ರೇಲ್ ಪ್ಯಾಲೆಸ್ತೀನ್ ಮೇಲೆ ಮುಗಿಬಿದ್ದ ಪರಿ ಇದು.

ಇಸ್ರೇಲ್ ಏಟಿಗೆ ಗಾಜಾಸಿಟಿ ಅಕ್ಷರಶಃ ಸ್ಮಶಾನ ಆಗಿದೆ. ಇಸ್ರೇಲ್(Israel) ವಾಯುಪಡೆ ನಿರಂತರವಾಗಿ ಏರ್ಸ್ಟ್ರೈಕ್ ನಡೆಸುತ್ತಲೇ ಇದೆ. ಹಮಾಸ್ ಉಗ್ರರ ಹೆಡೆಮುರಿ ಕಟ್ಟೋವರೆಗೂ ಸಮರ ನಿಲ್ಲಲ್ಲ ಎಂದು ದಾಳಿ ಮುಂದುವರಿಸಿದೆ. ಇತ್ತೀಚೆಗೆ ಗಾಜಾದ ಆಲ್ ಅಮೀನ್ ಮಸೀದಿ(Al Omar Mosque) ಮೇಲೆ ದಾಳಿ ನಡೆಸಿ, ನಾಶಪಡಿಸಿತ್ತು.. ನಿನ್ನೆ ರಾತ್ರಿ ಕೂಡ, ಗಾಜಾದ(Gaza) ಉತ್ತರ ಭಾಗದಲ್ಲಿನ ಪ್ರಸಿದ್ಧ ಆಲ್ ಒಮರ್ ಮಸೀದಿ ಮೇಲೆ ದಾಳಿ ನಡೆಸಿ ನಾಶಪಡಿಸಿದೆ. ಹಮಾಸ್ ಉಗ್ರರ ನೆಲೆಗಳೇ ಇಸ್ರೇಲ್ ಸೇನೆ ಪ್ರಮುಖ ಟಾರ್ಗೆಟ್. ನಿನ್ನೆ ತಡರಾತ್ರಿಯ ಕಾರ್ಯಾಚರಣೆಯಲ್ಲಿ 100 ಉಗ್ರರ ನೆಲೆ ಟಾರ್ಗೆಟ್ ಮಾಡಿ ಉಡಾಯಿಸಲಾಗಿದೆ. ಉಗ್ರರು ಬಂದೂಕು ಹಿಡಿದು ಹೊರ ಬರ್ತಿದ್ದಂತೆಯೇ ಇಸ್ರೇಲ್ ದಾಳಿ ಕ್ಷಣಾರ್ಧದಲ್ಲೇ ಹೊಡೆದುರುಳಿಸಿದೆ. ಗಾಜಾ ಮಾತ್ರವಲ್ಲ ಲೆಬನಾನ್ ಗಡಿಯ ಹಿಜ್ಬುಲ್ಲಾ ಉಗ್ರರ ನೆಲೆಗಳ ಮೇಲೂ ದಾಳಿ ನಡೆಸಿದೆ. ಇಸ್ರೇಲ್‌ನ ಈ ದಾಳಿಯಲ್ಲಿ ಹಲವು ಉಗ್ರರ ಹೆಣ ಬಿದ್ದಿವೆ. ಇದು ದಕ್ಷಿಣ ಭಾಗದಲ್ಲಿರುವ ಪ್ಯಾಲಿಸ್ತೇನ್ ನಿರಾಶ್ರಿತರ ಟೆಂಟ್ಗಳು. ಈ ಭಾಗದಲ್ಲಿ ಆಹಾರ ಅಷ್ಟೇ ಅಲ್ಲ.ನೀರಿಗೂ ಹಾಹಾಕಾರ ಶುರುವಾಗಿದೆ. ಯುದ್ಧ ನಿಲ್ಲಿಸುವಂತೆ ಈಗಾಗಲೇ 57 ಮುಸ್ಲಿಂ ರಾಷ್ಟ್ರಗಳು, ಇಸ್ರೇಲ್ಗೆ ಎಚ್ಚರಿಕೆ ನೀಡಿವೆ. ಇಸ್ರೇಲ್ ಮಾತ್ರ ಬಗ್ಗುವ ಲಕ್ಷಣ ಕಾಣ್ತಿಲ್ಲ.

ಇದನ್ನೂ ವೀಕ್ಷಿಸಿ:  ಇಸ್ರೇಲ್ ಬೆನ್ನಿಗೆ ನಿಂತ ವಿಶ್ವದ ಬಲಿಷ್ಠ ರಾಷ್ಟ್ರಗಳು: ಲೆಬನಾನ್ ಗುರಿಯಾಗಿಸಿಕೊಂಡು ಸಿದ್ಧವಾಗಿ ನಿಂತ ಇಸ್ರೇಲ್ ಸೇನೆ

44:40ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಮೇಲೆ ಶೇ.500ರಷ್ಟು ಸುಂಕ?
20:21ಡೊನಾಲ್ಡ್ ಟ್ರಂಪ್ ಬಿಗ್ ಚೆಕ್! ಜಗತ್ತಿನ ಈ ಐದು ರಾಷ್ಟ್ರಗಳು ಈಗ ಅಮೆರಿಕಾದ ಟಾರ್ಗೆಟ್!
18:03Suvarna Focus: ಜಗತ್ತಿನ ವಿನಾಶಕ್ಕೆ ಮುನ್ನುಡಿ ಬರೆಯುತ್ತಾ ಅಮೆರಿಕದ ಸಾಹಸ?
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
22:39ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?
20:42ಎಪ್‌ಸ್ಟೀನ್ ಪಟ್ಟಿಯಲ್ಲಿ ಭಾರತದ ಘಟಾನುಘಟಿಗಳು: ಕಾಮುಕನ ಸೀಕ್ರೆಟ್ ಫೈಲ್ಸ್ ಸತ್ಯ ಹೊರಬರುತ್ತಾ? ಸಮಾಧಿಯಾಗುತ್ತಾ?
98:27ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
Read more