Ukraine Crisis: ಹಠವಾದಿಗಳ ಯುದ್ಧಕ್ಕೆ ಕನ್ನಡಿಗ ಬಲಿ, ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ!

Mar 2, 2022, 2:43 PM IST

ಕನ್ನಡಿಗನನ್ನು ಬಲಿ ಪಡೆದಿದೆ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ. ರಷ್ಯಾ-ಯುಕ್ರೇನ್ ಯುದ್ಧದಲ್ಲಿ ಕನ್ನಡಿಗ ನವೀನ್ ಮೃತಪಟ್ಟಿದ್ದಾನೆ. ಅತ್ತ ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ನೀರವ ಮೌನ ಮನೆ ಮಾಡಿದೆ. ಹಾವೇರಿ ಜಿಲ್ಲೆಯ ಚಳಗೇರಿಯಲ್ಲಿರುವ ನವೀನ್ ನಿವಾಸದಲ್ಲಿ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. 

ಅತ್ತ ಗ್ರಾಮಸ್ಥರೂ ತಮ್ಮೂರಿನ ಹುಡುಗನ ಸಾವಿಗೆ ಕಂಬನಿ ಮಿಡಿಯುತ್ತಿದ್ದು, ಎಲ್ಲೆಡೆ ಧೋಕದ ವಾತಾವರಣ ಮಡುಗಟ್ಟಿದೆ. ಈಗಾಗಳೆ ಗಣ್ಯರು ನವೀನ್ ಮನೆಗೆ ತೆರಳಿ ಸಾಂತ್ವನ ಸೂಚಿಸಿದ್ದು, ಇಂದು ಮುಖ್ಯಮಂತ್ರಿ ಬೊಮ್ಮಾಯಿ ಚಳಗೇರಿಗೆ ಭೇಟಿ ಕೊಡುವ ಸಾಧ್ಯತೆ ಇದೆ.