ಬಾಂಗ್ಲಾ ದಂಗೆಕೋರರ ವಿರುದ್ಧ ತಿರುಗಿಬಿದ್ದ ಹಿಂದೂಗಳು: ಬೀದಿಯಲ್ಲಿ ಮೊಳಗಿದ ಹರೇ ರಾಮ್ ಹರೇ ಕೃಷ್ಣ

Aug 12, 2024, 11:52 AM IST

ಬಾಂಗ್ಲಾದಲ್ಲಿ ವಿದ್ಯಾರ್ಥಿ ದಂಗೆಯೊಂದಿಗೆ ಮತೀಯವಾದಿಗಳು ಸೇರಿಕೊಂಡಿದ್ದು, ಹೊತ್ತಿಯುರಿಯುತ್ತಿರೋ ಬಾಂಗ್ಲಾದೇಶದಲ್ಲಿ ಹಿಂದೂಗಳೇ ಭಸ್ಮವಾಗ್ತಿದ್ದಾರೆ.. ಸಮುದ್ರ ತೀರದಲ್ಲಿ, ನದಿ ತಟದಲ್ಲಿ ನಾಪತ್ತೆಯಾದ ಹಿಂದೂಗಳ ಶವಗಳು ಸಿಗ್ತಿದ್ದಾವೆ..  ಇದನ್ನೆಲ್ಲಾ ನೋಡಿ ನೋಡಿ ಹಿಂದೂಗಳ ತಾಳ್ಮೆಯ ಕಟ್ಟೆ ಒಡೆದಿದೆ.. ಹೋರಾಟಗಾರರ ಮುಸುಕಿನಲ್ಲಿರೋ ದಂಗೆಕೋರರ ವಿರುದ್ಧ ಹಿಂದೂಗಳು ತಿರುಗಿಬಿದ್ದಿದ್ದಾರೆ.  ಬಾಂಗ್ಲಾದಲ್ಲಿ ಪರಿಸ್ಥಿತಿ ಭೀಕರವಾಗಿದೆ.. ಅಲ್ಲಿನ ರಸ್ತೆ ರಸ್ತೆಗಳಲ್ಲೂ ರಕ್ತದೋಕುಳಿ ಹರೀತಿದೆ.. ಅಷ್ಟೆಲ್ಲಾ ಆದ್ರೂ ಅಲ್ಲಿ ಶಾಂತಿ ಸ್ಥಾಪನೆ ಮಾಡ್ಬೇಕು ಅನ್ನೋ ಪ್ರಯತ್ನವೇ ನಡೀತಿಲ್ಲ. ಇದರ ಪರಿಣಾಮ ಏನೇನಾಗಿದೆ ಗೊತ್ತಾ..? ಬಾಂಗ್ಲಾದೇಶದಲ್ಲಿ ಹಿಂದೂಗಳು ತಿರುಗಿಬಿದ್ದರೆ ಏನಾಗುತ್ತೆ ಗೊತ್ತಾ? ಹಿಂದೂಗಳ ರೋಷಾಗ್ನಿಗೆ ಬಾಂಗ್ಲಾದಲ್ಲಿ ಸೃಷ್ಟಿಯಾಗಿರೋ ಬೃಹತ್ ಸಂಚಲನದ ಕಥಾನಕ ಇದು ಇದರ ಡಿಟೇಲ್ಡ್ ಸ್ಟೋರಿ ಇಲ್ಲಿದೆ ವೀಕ್ಷಿಸಿ