ಹೊಸಪೇಟೆ Railway Stationಗೆ ಹಂಪಿಯ ಸ್ಪರ್ಶ

ಹೊಸಪೇಟೆ Railway Stationಗೆ ಹಂಪಿಯ ಸ್ಪರ್ಶ

Published : Mar 22, 2022, 02:41 PM IST

ಎಲ್ಲದರಲ್ಲೂ ಹಂಪಿಯ ಸ್ಮಾರಕವನ್ನು ಕಾಣುವ ಸ್ಮಾರಕ ಪ್ರಿಯರಿಗಾಗಿ ರೈಲ್ವೇ ಇಲಾಖೆ ಮತ್ತು ಪ್ರವಾಸೋದ್ಯಮ ‌ಇಲಾಖೆ ಜಂಟಿಯಾಗಿ ಇಡೀ‌‌ ಹೊಸಪೇಟೆಯ ರೈಲ್ವೆ ನಿಲ್ದಾಣವನ್ನು ಹಂಪಿಯ ಸ್ಮಾರಕ ಮಾದರಿಯಲ್ಲಿ ‌ನಿರ್ಮಾಣ ಮಾಡಿದ್ದಾರೆ.

ಐತಿಹಾಸಕ ಹಂಪಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ..  ಹಂಪಿಯ ಸ್ಮಾರಕದ ಸೌಂದರ್ಯ ವಿಜಯನಗರ(Vijaynagar)ದ ಇತಿಹಾಸ ಕೇಳಲು ಮತ್ತು ನೋಡಲು ಎಲ್ಲರಿಗೂ ಬಲು ಇಷ್ಟ. ಎಲ್ಲದರಲ್ಲೂ ಹಂಪಿಯ ಸ್ಮಾರಕವನ್ನು ಕಾಣುವ ಸ್ಮಾರಕ ಪ್ರಿಯರಿಗಾಗಿ ರೈಲ್ವೇ ಇಲಾಖೆ ಮತ್ತು ಪ್ರವಾಸೋದ್ಯಮ ‌ಇಲಾಖೆ ಜಂಟಿಯಾಗಿ ವಿನೂತನ ಪ್ರಯತ್ನ ಮಾಡಿದೆ.  ಹೌದು, ಇಡೀ‌‌ ಹೊಸಪೇಟೆ(Hospet)ಯ ರೈಲ್ವೆ ನಿಲ್ದಾಣ(Railway station)ವನ್ನು ಹಂಪಿಯ ಸ್ಮಾರಕ ಮಾದರಿಯಲ್ಲಿ ‌ನಿರ್ಮಾಣ ಮಾಡೋ ಮೂಲಕ ನಿಲ್ದಾಣದಲ್ಲಿಯೇ ಹಂಪಿಯ ಸ್ಮಾರಕ ಕಣ್ತಂಬಿಕೊಳ್ಳುವಂತೆ ಮಾಡಿದ್ದಾರೆ.

 ಹಂಪಿ(Hampi)ಯ ಐಕಾನ್ ಆಗಿರೋ ಕಲ್ಲಿನ ತೇರಿನ ಮಾದರಿಯನ್ನು ನಿಲ್ದಾಣದ ಮುಂಭಾಗದಲ್ಲಿ ‌ನಿರ್ಮಿಸಲಾಗಿದೆ. ದ್ವಾರಬಾಗಿಲಿನಲ್ಲಿ ಬೃಹತ್ ಚಕ್ರದ ಕಲ್ಲಿನ ತೇರಿನ ಮಾದಿರಿಯ ಸ್ಮಾರಕ ನೋಡುಗರನ್ನು ಆಕರ್ಷಿಸುತ್ತದೆ. ನಿಲ್ದಾಣದ ಒಳ ಗೋಡೆಯ ಮೇಲೂ ವಿಜಯನಗರದ ಇತಿಹಾಸ ಸಾರುವ ಚಿತ್ತಾರಗಳು,  ಹಂಪಿ ಸ್ಮಾರಕದ ಸ್ಥಬ್ದ ಚಿತ್ರಗಳು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿವೆ.. ಎಲ್ಲೆಲ್ಲೂ ಹಂಪಿ ಎನ್ನುವ ಧ್ಯೇಯ ವಾಕ್ಯವನ್ನು ‌ಪಾಲಿಸೋ ಮೂಲಕ ನಿಲ್ದಾಣದ ಯಾವ ಮೂಲೆಯಲ್ಲಿ ಹೋದ್ರೂ ಹಂಪಿಯ ಯಾವುದಾದರೊಂದು ಕುರುಹು ಕಾಣಬೇಕು ಆ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ.

ವಿಶ್ವವಿಖ್ಯಾತ ಹಂಪಿಯನ್ನು ನೋಡಲು ದೇಶವಿದೇಶದಿಂದ ನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಅವರಿಗೆ ಹೊಸಪೇಟೆಗೆ ಬಂದ ಕೂಡಲೇ ಆ ಕಲ್ಪನೆ ಬರಬೇಕು ಎನ್ನುಬ ಉದ್ದೇಶದಿಂದ ತಲಾ ನಾಲ್ಕು ಕೋಟಿ ಅಂದ್ರೇ ಪ್ರವಾಸೋದ್ಯಮ ಮತ್ತು ರೈಲ್ವೆ ಇಲಾಖೆಯ  ಜಂಟಿ ಕಾರ್ಯಾಚರಣೆಯಲ್ಲಿ ಎಂಟು ಕೋಟಿ ವೆಚ್ಚದಲ್ಲಿ ನಿಲ್ದಾಣ ಅಭಿವೃದ್ಧಿ ಮಾಡಲಾಗಿದೆ.

Save Soil Campaign: ಲಂಡನ್‌ನಿಂದ ಕಾವೇರಿವರೆಗೆ 35,000 ಕಿ.ಮೀ ಸದ್ಗುರು ಬೈಕ್‌ ರ್ಯಾಲಿ

ಸಾಮಾನ್ಯವಾಗಿ ಯಾವುದಾದರೂ ಕಡೆ ಅಭಿವೃದ್ಧಿ ಮಾಡಬೇಕಂದ್ರೇ ರಾಜ್ಯ ಸರ್ಕಾರ ಇಚ್ಚಾಶಕ್ತಿ ಇದ್ರೇ ಸಾಕು ಅದ್ರೇ ರೈಲ್ವೆ ಇಲಾಖೆಯದ್ದು ಎಲ್ಲವೂ ಕೇಂದ್ರದಿಂದಲೇ ಅಗಬೇಕು. ಹೀಗಾಗಿ ಪ್ರವಾಸೋದ್ಯಮ ಇಲಾಖೆ ಸಚಿವ ಆನಂದ ಸಿಂಗ್ ಮತ್ತು ಸ್ಥಳೀಯ  ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ನಿರಂತರ ಪ್ರಯತ್ನದಿಂದ ಈ ಕನಸು ಸಾಕರಗೊಂಡಿದೆ ಎನ್ನುತ್ತಿದ್ದಾರೆ ಸ್ಥಳೀಯರು.

Happy Nation Finland ಜನರ ಸಂತೋಷದ ರಹಸ್ಯ ಇಲ್ಲಿದೆ!

 ಕಳೆದ ವರ್ಷ ರಾಜ್ಯದ  31ನೇ‌ ಜಿಲ್ಲೆಯಾಗಿ ಹೊರಹೊಮ್ಮಿದ ವಿಜಯನಗರ ಜಿಲ್ಲೆಯ ಅಭಿವೃದ್ಧಿಗೆ ಹೊಸ ರೀತಿಯ ಕನಸನ್ನು ಸಚಿವ ಆನಂದ ಸಿಂಗ್ ಕಂಡಿದ್ದರು. ಜಿಲ್ಲಾಡಳಿತದ ಕಚೇರಿ, ರೈಲ್ವೆ ‌ನಿಲ್ದಾಣ, ಎಸ್ಪಿ ಕಚೇರಿ ಸೇರಿದಂತೆ ಎಲ್ಲಕ್ಕೂ ಹಂಪಿಯ ಟಚ್ ಕೊಡಬೇಕು ಎನ್ನುವದಾಗಿತ್ತು.  ಹೊಸಪೇಟೆಯ ದ್ವಾರ ಬಾಗಿಲಿಗೆ ಬಂದ್ರೆ ಇದು ವಿಜಯನಗರ ಸಂಸ್ಥಾನವೆಂದು ಗೊತ್ತಾಗಬೇಕು ಎನ್ನುವ ಉದ್ದೇಶದಿಂದ ಈ ರೀತಿಯ ವಿನೂತನ ಪ್ರಯತ್ನ ಮಾಡ್ತಿದ್ದಾರೆ. ಇದೀಗ ಮೊದಲ ಪ್ರಯತ್ನ ಭರ್ಜರಿಯಾಗಿ ಯಶಸ್ವಿಯಾಗಿದೆ..

22:54ಆಧುನಿಕತೆಯಿಂದ ದೂರವಿರುವ ರಹಸ್ಯ ಗ್ರಾಮ, 200 ವರ್ಷ ಹಿಂದಿನ ಬದುಕು!
00:35ಉಜ್ಜೈನ್ ಮಹಾಕಾಳ ದೇವಸ್ಥಾನದಲ್ಲಿ ನಾಯಿ ಜಗಳದ ವಿಡಿಯೋ ವೈರಲ್
02:29ಜೂನ್ 15 ಮತ್ತು 16ರಂದು ಬೆಂಗಳೂರಿನಲ್ಲಿ ದಕ್ಷಿಣ ಭಾರತ್ ಉತ್ಸವ
20:41 ಲಕ್ಷದ್ವೀಪದಲ್ಲಿ ಮಾತ್ರವಲ್ಲ, ಕರುನಾಡಿನಲ್ಲೂ ಇದೆ ಅತ್ಯದ್ಭುತವಾದ ದ್ವೀಪ
04:32ಸರ್ಕಾರದ ಕಾಶಿಯಾತ್ರೆ ಕಾರ್ಯಕ್ರಮಕ್ಕೆ ಭರ್ಜರಿ ರೆಸ್ಪಾನ್ಸ್
01:06Bengaluru: ಟ್ರಾಫಿಕ್‌ ಪೊಲೀಸರ ಶ್ರಮದಾನ, ವಾಹನ ಸವಾರರಿಗೆ ವರದಾನ!
04:33ಭಟ್ಕಳ-ಮಾಜಾಳಿ ಕಡಲಿನಲ್ಲಿ ಅಲೆಗಳ ಅಬ್ಬರ: ಪ್ರವಾಸಿಗರ ಹುಚ್ಚಾಟ
03:58ಮಹಿಳೆಯರಿಗೆ ಸಾರಿಗೆ ಇಲಾಖೆ ಶಾಕ್‌! 3 ತಿಂಗಳ ನಂತರ ಬದಲಾಗುತ್ತಾ ಉಚಿತ ಪ್ರಯಾಣ ಸ್ಕೀಂ?
06:20ಬೆಂಗಳೂರು ರಸ್ತೆಗಿಳಿದ ಕ್ಯೂಟ್‌ ಟ್ಯಾಕ್ಸಿ, ಸಾರಿಗೆ ಇಲಾಖೆಯಿಂದಲೂ ಗ್ರೀನ್‌ ಸಿಗ್ನಲ್‌!
25:34ಕರ್ನಾಟಕದ ಏಳು ಅದ್ಭುತಗಳ ಪಟ್ಟಿಯಲ್ಲಿ ಶ್ರವಣಬೆಳಗೊಳದ ಗೊಮ್ಮಟೇಶ್ವರ...
Read more