ವಿಜಯಪುರದಲ್ಲಿ ಮಗುವಿನ ಜೀವದ ಜೊತೆ ಚೆಲ್ಲಾಟ: ನಿಷೇಧಿತ ಆಚರಣೆಗೆ ಆಕ್ರೋಶ

ವಿಜಯಪುರದಲ್ಲಿ ಮಗುವಿನ ಜೀವದ ಜೊತೆ ಚೆಲ್ಲಾಟ: ನಿಷೇಧಿತ ಆಚರಣೆಗೆ ಆಕ್ರೋಶ

Published : Dec 25, 2024, 08:01 PM IST

ವಿಜಯಪುರ ಜಿಲ್ಲೆಯ ದೇವರ ಜಾತ್ರೆಯಲ್ಲಿ ಪೂಜಾರಿಯೊಬ್ಬರು ಮಗುವನ್ನು ಎತ್ತರದಿಂದ ಎಸೆಯುವ ನಿಷೇಧಿತ ಆಚರಣೆ ನಡೆಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ಯಂಭತ್ತಾಳದ ಗೌರಿಶಂಕರ ದೇವಾಲಯದಲ್ಲಿ ನಡೆದಿದ್ದು, ಮಗುವಿನ ಜೀವಕ್ಕೆ ಅಪಾಯವೊಡ್ಡುವ ಈ ಆಚರಣೆಯನ್ನು ನಿಷೇಧಿಸಬೇಕೆಂದು ಜನರು ಆಗ್ರಹಿಸಿದ್ದಾರೆ.

ವಿಜಯಪುರ ಜಿಲ್ಲೆಯ ದೇವರ ಜಾತ್ರೆಯಲ್ಲಿ ಪೂಜಾರಿಯೊಬ್ಬರು ನಿಷೇಧಿತ ಆಚರಣೆಯನ್ನು ಮಾಡಿದ್ದಾರೆ. ಪೂಜಾರಿ ದೇವಸ್ಥಾನದ ಜಗುಲಿಯ ಮೇಲೆ ದೇವರ ಮೂರ್ತಿಯ ಪಕ್ಕದಲ್ಲಿ ಮಗುವನ್ನು ನೀವಾಳಿಸಿ, ಮೇಲಕ್ಕೆ ಎತ್ತಿ ಮಗುವನ್ನು ಕೆಳಗೆ ಬಿಡುತ್ತಾರೆ. ಆಗ ಪೋಷಕರು ಕೆಳಗೆ ಜೋಳಿಗೆ ಹಿಡಿದು ಮಗು ಬೀಳುವಂತೆ ಕಾಯುತ್ತಿರುತ್ತಾರೆ. ಮಗುವನ್ನು ಜೋಳಿಗೆಯಲ್ಲಿ ಹಿಡಿದುಕೊಳ್ಳಬೇಕು. ಒಂದು ವೇಳೆ ಮಗು ಜೋಳಿಗೆಯಲ್ಲಿ ಬೀಳದೆ ತಪ್ಪಿದರೆ ಮಗುವಿನ ಜೀವಕ್ಕೆ ಅಪಾಯವಾಗುತ್ತದೆ. ಇನ್ನು ಮಗುವನ್ನು ಮೇಲಿನಿಂದ ಕೆಳಗೆ ಎಸೆಯುವಾಗ ಮಗುವಿಗೆ ಉಸಿರಾಟ ಸಮಸ್ಯೆ ಎದುರಾಗಿ ಪ್ರಾಣಕ್ಕೂ ಅಪಾಯ ಬರಬಹುದು. ಆದ್ದರಿಂದ ರಾಜ್ಯದಲ್ಲಿ ಇದನ್ನು ನಿಷೇಧ ಮಾಡಿದ್ದರೂ, ಆಚರಣೆ ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಈ ಘಟನೆ ವಿಜಯಪುರ ಯಂಭತ್ತಾಳದ ಗೌರಿಶಂಕರ ದೇವಾಲಯದಲ್ಲಿ ಈ ಮೌಢ್ಯಾಚರಣೆ ಮಾಡಲಾಗಿದರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಂಥಹ ಮೌಢ್ಯ ಆಚರಣೆಗಳನ್ನು ಸರ್ಕಾರದಿಂದ ಕಷ್ಟುನಿಟ್ಟಾಗಿ ನಿಷೇಧಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಮೇಲಿಂದ ಪುಟ್ಟ ಮಕ್ಕಳನ್ನು ಪೂಜಾರಿ ಎಸೆಯುವುದನ್ನು ತಪ್ಪಿಸಿ, ಏನೂ ಅರಿಯದ ಮಕ್ಕಳು ಪಾಯಕ್ಕೆ ಸಿಲುಕುವುದನ್ನು ತಪ್ಪಿಸಬೇಕು ಎಂದು ಆಗ್ರಹ ಮಾಡಿದ್ದಾರೆ. 

19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ