ವಿಜಯಪುರದಲ್ಲಿ ಮಗುವಿನ ಜೀವದ ಜೊತೆ ಚೆಲ್ಲಾಟ: ನಿಷೇಧಿತ ಆಚರಣೆಗೆ ಆಕ್ರೋಶ

ವಿಜಯಪುರದಲ್ಲಿ ಮಗುವಿನ ಜೀವದ ಜೊತೆ ಚೆಲ್ಲಾಟ: ನಿಷೇಧಿತ ಆಚರಣೆಗೆ ಆಕ್ರೋಶ

Published : Dec 25, 2024, 08:01 PM IST

ವಿಜಯಪುರ ಜಿಲ್ಲೆಯ ದೇವರ ಜಾತ್ರೆಯಲ್ಲಿ ಪೂಜಾರಿಯೊಬ್ಬರು ಮಗುವನ್ನು ಎತ್ತರದಿಂದ ಎಸೆಯುವ ನಿಷೇಧಿತ ಆಚರಣೆ ನಡೆಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ಯಂಭತ್ತಾಳದ ಗೌರಿಶಂಕರ ದೇವಾಲಯದಲ್ಲಿ ನಡೆದಿದ್ದು, ಮಗುವಿನ ಜೀವಕ್ಕೆ ಅಪಾಯವೊಡ್ಡುವ ಈ ಆಚರಣೆಯನ್ನು ನಿಷೇಧಿಸಬೇಕೆಂದು ಜನರು ಆಗ್ರಹಿಸಿದ್ದಾರೆ.

ವಿಜಯಪುರ ಜಿಲ್ಲೆಯ ದೇವರ ಜಾತ್ರೆಯಲ್ಲಿ ಪೂಜಾರಿಯೊಬ್ಬರು ನಿಷೇಧಿತ ಆಚರಣೆಯನ್ನು ಮಾಡಿದ್ದಾರೆ. ಪೂಜಾರಿ ದೇವಸ್ಥಾನದ ಜಗುಲಿಯ ಮೇಲೆ ದೇವರ ಮೂರ್ತಿಯ ಪಕ್ಕದಲ್ಲಿ ಮಗುವನ್ನು ನೀವಾಳಿಸಿ, ಮೇಲಕ್ಕೆ ಎತ್ತಿ ಮಗುವನ್ನು ಕೆಳಗೆ ಬಿಡುತ್ತಾರೆ. ಆಗ ಪೋಷಕರು ಕೆಳಗೆ ಜೋಳಿಗೆ ಹಿಡಿದು ಮಗು ಬೀಳುವಂತೆ ಕಾಯುತ್ತಿರುತ್ತಾರೆ. ಮಗುವನ್ನು ಜೋಳಿಗೆಯಲ್ಲಿ ಹಿಡಿದುಕೊಳ್ಳಬೇಕು. ಒಂದು ವೇಳೆ ಮಗು ಜೋಳಿಗೆಯಲ್ಲಿ ಬೀಳದೆ ತಪ್ಪಿದರೆ ಮಗುವಿನ ಜೀವಕ್ಕೆ ಅಪಾಯವಾಗುತ್ತದೆ. ಇನ್ನು ಮಗುವನ್ನು ಮೇಲಿನಿಂದ ಕೆಳಗೆ ಎಸೆಯುವಾಗ ಮಗುವಿಗೆ ಉಸಿರಾಟ ಸಮಸ್ಯೆ ಎದುರಾಗಿ ಪ್ರಾಣಕ್ಕೂ ಅಪಾಯ ಬರಬಹುದು. ಆದ್ದರಿಂದ ರಾಜ್ಯದಲ್ಲಿ ಇದನ್ನು ನಿಷೇಧ ಮಾಡಿದ್ದರೂ, ಆಚರಣೆ ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಈ ಘಟನೆ ವಿಜಯಪುರ ಯಂಭತ್ತಾಳದ ಗೌರಿಶಂಕರ ದೇವಾಲಯದಲ್ಲಿ ಈ ಮೌಢ್ಯಾಚರಣೆ ಮಾಡಲಾಗಿದರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಂಥಹ ಮೌಢ್ಯ ಆಚರಣೆಗಳನ್ನು ಸರ್ಕಾರದಿಂದ ಕಷ್ಟುನಿಟ್ಟಾಗಿ ನಿಷೇಧಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಮೇಲಿಂದ ಪುಟ್ಟ ಮಕ್ಕಳನ್ನು ಪೂಜಾರಿ ಎಸೆಯುವುದನ್ನು ತಪ್ಪಿಸಿ, ಏನೂ ಅರಿಯದ ಮಕ್ಕಳು ಪಾಯಕ್ಕೆ ಸಿಲುಕುವುದನ್ನು ತಪ್ಪಿಸಬೇಕು ಎಂದು ಆಗ್ರಹ ಮಾಡಿದ್ದಾರೆ. 

22:35ಮಿಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡ ಕನ್ನಡತಿ: ಮಗಳ ಸಕ್ಸಸ್.. ಎಂಎಲ್ಎ ಅಪ್ಪ ಫುಲ್ ಖುಷ್!
27:23ಕುಲಕರ್ಣಿಯೇ ಕೊಲೆಗಾರ: ಅಧಿಕಾರದ ಅಹಂಕಾರಕ್ಕೆ ನ್ಯಾಯದ ಹೊಡೆತ; ಸುವರ್ಣ ನ್ಯೂಸ್ ಬೆನ್ನತ್ತಿ ಬೇಟೆಯಾಡಿದ ಪ್ರಕರಣ...
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
24:25ಮೂಡಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ 'ಕಾಮಲೀಲೆ' ಭಾಗ-2: ಬಗೆದಷ್ಟು ಬಯಲಾಗ್ತಿದೆ ‘ಪೋಲಿ’ಸ್ ಮಾಮನ ಲೀಲೆ
24:18ಗಂಡನ ಮೇಲೆ ಕೇಸ್ ಹಾಕಿ ಹೆಂಡತಿಯರನ್ನ ಮಂಚಕ್ಕೆ ಕರೆಯೋ ಇನ್ಸ್‌ಪೆಕ್ಟರ್ ಸಂದೇಶ್; ಖಾಕಿ ಕಾಮಕಾಂಡ ಬಟಾಬಯಲು
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ