Karnataka Rain: ಅಕಾಲಿಕ ಮಳೆಗೆ ಮನೆಗೆ ಬರಲಿಲ್ಲ ಬೆಳೆ, ರೈತ ಕಂಗಾಲು, ರಾಜ್ಯ ತತ್ತರ

Nov 21, 2021, 10:29 AM IST

ಬೆಂಗಳೂರು (ನ. 21): ರಾಜ್ಯದಲ್ಲಿ ಹಿಂಗಾರು ಅಬ್ಬರದಿಂದ ಅಕಾಲಿಕ ಮಳೆ ( Untimely Rain) ಮುಂದುವರೆದಿದೆ. ಕಟಾವಾಗಿ ಮನೆ ಸೇರಬೇಕಿದ್ದ ಫಸಲು (Crop)  ಸಂಪೂರ್ಣ ನಾಶವಾಗಿದೆ. ರಾಜ್ಯಾದ್ಯಂತ 92 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ. 1400 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

News Hour: ಎಲ್ಲಾ ಕಡೆ ಅಕಾಲಿಕ ಮಳೆ ಅಬ್ಬರ, ಕೃಷಿ ಮಸೂದೆ ಹಿಂದಕ್ಕೆ ಪಡೆಯಲು ಅಸಲಿ ಕಾರಣ

30 ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ. 59 ಕುಟುಂಬಗಳ 413 ಕ್ಕೂ ಹೆಚ್ಚು ಮಂದಿ ಪರಿಹಾರ ಕೇಂದ್ರಕ್ಕೆ ಶಿಫ್ಟ್ ಅಗಿದ್ದಾರೆ. ಹಾವೇರಿಯಲ್ಲಿ 6 ಸಾವಿರಕ್ಕೂ ಹೆಚ್ಚು ಕೋಳಿಗಳು ಜಲಸಮಾಧಿಯಾಗಿವೆ. ಚಿತ್ರದುರ್ಗದಲ್ಲಿ 60 ಎಕರೆಯಲ್ಲಿ ಬೆಳೆದಿದ್ದ ಕಡಲೆ ಬೆಳೆ ನಾಶವಾಗಿದೆ. ನದಿ, ಕೆರೆಗಳು ತುಂಬಿ ಜಮೀನಿಗೆ ನೀರು ನುಗ್ಗಿದೆ.