Republic Day 2022: ರಾಜ್‌ಪಥ್‌ನಲ್ಲಿ ಸಂಚರಿಸಲಿದೆ ಬೆಂಗಳೂರಲ್ಲೇ ತಯಾರಾದ ಡಿಆರ್‌ಡಿಓ ಸ್ತಬ್ಧಚಿತ್ರ!

Republic Day 2022: ರಾಜ್‌ಪಥ್‌ನಲ್ಲಿ ಸಂಚರಿಸಲಿದೆ ಬೆಂಗಳೂರಲ್ಲೇ ತಯಾರಾದ ಡಿಆರ್‌ಡಿಓ ಸ್ತಬ್ಧಚಿತ್ರ!

Published : Jan 23, 2022, 10:05 AM ISTUpdated : Jan 23, 2022, 01:52 PM IST

*ಬೆಂಗಳೂರಲ್ಲೇ ತಯಾರಾದ ಡಿಆರ್‌ಡಿಒ ಸ್ತಬ್ಧಚಿತ್ರ
*ವಾರ್ತಾ ಇಲಾಖೆಯ ಕರಕುಶಲ ವಸ್ತುಗಳ ಟ್ಯಾಬ್ಲೋ 
*ರಾಜ್‌ಪಥ್‌ನಲ್ಲಿ ಸಂಚರಿಸಲಿವೆ ರಾಜ್ಯದ 2 ಸ್ಥಬ್ಧ ಚಿತ್ರ!

ನವದೆಹಲಿ( ಜ. 23): ಈ ಬಾರಿಯ ಗಣರಾಜ್ಯೋತ್ಸವದಲ್ಲಿ (Republic Day 2022) ಕರ್ನಾಟಕದಿಂದ ಒಂದಲ್ಲ, ಎರಡು ಸ್ತಬ್ಧಚಿತ್ರ ಭಾಗವಹಿಸಲಿವೆ. ವಾರ್ತಾ ಇಲಾಖೆಯ ಕರಕುಶಲ ವಸ್ತುಗಳ ಟ್ಯಾಬ್ಲೋ ಒಂದಾದರೆ, ಬೆಂಗಳೂರಿನ ವಿಜ್ಞಾನಿಗಳೇ ನಿರ್ಮಾಣ ಮಾಡಿರುವ ಮತ್ತೊಂದು ಸ್ತಬ್ಧಚಿತ್ರ ಜ.26ರಂದು ರಾಜಪಥದಲ್ಲಿ ಸಂಚರಿಸಲಿದೆ. ಬೆಂಗಳೂರಲ್ಲೇ ತಯಾರಾದ ತೇಜಸ್‌ ಲಘು ಯುದ್ಧ ವಿಮಾನದಲ್ಲಿ ಬಳಸುವ ರಾಡಾರ್‌, ಸೆನ್ಸರ್‌, ಕ್ಷಿಪಣಿ, ಬಾಂಬ್‌ಗಳನ್ನು ಬಿಂಬಿಸುವ ಡಿಆರ್‌ಡಿಒ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ - DRDO)ದ ಸ್ತಬ್ಧಚಿತ್ರ ಇದಾಗಿದೆ.

ಇದನ್ನೂ ಓದಿ: Republic Day Parade Tableau : ಕೇರಳ ರಾಜ್ಯದ ಸ್ತಬ್ದಚಿತ್ರ ತಿರಸ್ಕೃತ, ಅದಕ್ಕೆ ಇಲ್ಲಿವೆ ಕಾರಣ

ನವದೆಹಲಿಯಲ್ಲಿ ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಲಿರುವ ಡಿಆರ್‌ಡಿಒ(ಡಿಫೆನ್ಸ್‌ ರಿಸಚ್‌ರ್‍ ಆ್ಯಂಡ್‌ ಡೆಲವಪ್‌ಮೆಂಟ್‌ ಆರ್ಗನೈಸೇಶನ್‌)ದ ಟ್ಯಾಬ್ಲೋದಲ್ಲಿ ಬೆಂಗಳೂರಿನ ಕೇಂದ್ರದಲ್ಲಿ ತೇಜಸ್‌ ಲಘು ಯುದ್ಧವಿಮಾನದಲ್ಲಿ ಬಳಸುವ ಸಲುವಾಗಿ ಅಭಿವೃದ್ಧಿಪಡಿಸಿರುವ ರಾಡಾರ್‌, ಸೆನ್ಸಾರ್‌, ಕ್ಷಿಪಣಿ, ಬಾಂಬ್‌ಗಳ ಪ್ರದರ್ಶನವಾಗಲಿದೆ. ಬೆಂಗಳೂರು ಕೇಂದ್ರದ ವಿಜ್ಞಾನಿಗಳೇ ಟ್ಯಾಬ್ಲೋ ನಿರ್ಮಾಣ ಮಾಡಿರುವುದಾಗಿ ಕೇಂದ್ರದ ವಿಜ್ಞಾನಿ ಮಹೇಶ್‌ಬಾಬು ತಿಳಿಸಿದ್ದಾರೆ.

ಇನ್ನು ಕರ್ನಾಟಕ- ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ಎನ್ನುವ ಧ್ಯೇಯದಡಿ ಸಿದ್ಧಗೊಳ್ಳುತ್ತಿರುವ ಸ್ತಬ್ಧಚಿತ್ರ ಗಣರಾಜ್ಯೋತ್ಸವ ದಿನದ ಮೆರವಣಿಗೆಯಲ್ಲಿ ಸಾಗಲಿದ್ದು, ವಿಶ್ವಪ್ರಸಿದ್ಧ ಚನ್ನಪಟ್ಟಣ ಗೊಂಬೆ, ಕಿನ್ನಾಳ ಗೊಂಬೆ, ಇಳಕಲ್‌ ಸೀರೆ, ಉಡುಪಿ ಸೀರೆ, ಮೈಸೂರು ಗಾಂಜೀಫ ಕಲೆಗಳೂ ಸೇರಿದಂತೆ ಜಿಐ ಟ್ಯಾಗ್‌ ಇರುವ 16 ಕರಕುಶಲ ವಸ್ತುಗಳು ಅನಾವರಣಗೊಳ್ಳಲಿವೆ.

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
Read more