17 ವರ್ಷದಿಂದ 'ಆತನ' ಪರಿಚಯ...! ಯುವರಾಜ್, ರಾಧಿಕಾ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್!

Jan 7, 2021, 10:53 AM IST

ಬೆಂಗಳೂರು(ಜ.07)ಯುವರಾಜ್, ರಾಧಿಕಾ ಪ್ರಕರಣದಲ್ಲಿ ಕಂಡೂ ಕೇಳರಿಯದ ಟ್ವಿಸ್ಟ್ ಬಂದೆರಗಿದೆ. ನಿನ್ನೆ ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಯಾದವ್ ಹೆಸರು ಕೇಳಿ ದಂಗಾಗಿದ್ದರು. ಅಷ್ಟಕ್ಕೂ ಯಾರು ಈ ಯಾದವ್? ಆತನಿಗೂ ಸ್ವಾಮಿಗೂ ಏನು ನಂಟು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ.

ನ್ಯೂಸ್ ಅವರ್; ರಾಧಿಕಾ ಖಾತೆ ಹಕೀಕತ್ತು... ಸಂಪುಟ ವಿಸ್ತರಣೆ ಯಾವತ್ತು?

ಹಲವರನ್ನು ದಾಳವಾಗಿಸಿಕೊಂಡಿದ್ದ ಯುವರಾಜ್, ವ್ಯವಸ್ಥಿತವಾಗಿ ಪ್ಲಾನ್ ಮಾಡಿ ಪ್ರತಿಷ್ಠಿತ ವ್ಯಕ್ತಿಗಳ ಭೇಟಿಯಾಗುತ್ತಿದ್ದ. ಆದರೆ ಯುವರಾಜನ ಈ ಎಲ್ಲಾ ಪ್ಲಾನ್‌ಗಳನ್ನು ಕಾರ್ಯ ರೂಪಕ್ಕೆ ತರುತ್ತಿದ್ದದ್ದೇ ಯಾದವ್ ಎಂಬುವುದು ಉಲ್ಲೇಖನೀಯ. ಇದೇ ಯಾದವ್ 17 ವರ್ಷಗಳಿಂದ ರಾಧಿಕಾ ಕುಮಾರಸ್ವಾಮಿಗೂ ಅತೀ ಆಪ್ತನಾಗಿದ್ದ. 

ಕಳ್ಳ ಸ್ವಾಮಿ ಯುವರಾಜ್ ಜೊತೆ ರಾಧಿಕಾ ಕುಮಾರಸ್ವಾಮಿ ನಂಟು: ಮಹತ್ವದ ಸುದ್ದಿಗೋಷ್ಠಿ!

ಇನ್ನು ಯುವರಾಜನಿಂದ ಅತೀ ಹೆಚ್ಚು ಕರೆಗತಳು ಹೋಗುತ್ತಿದ್ದದ್ದೇ ಯಾದವ್‌ಗೆ. ನಟಿ, ರಾಜಕಾರಣಿಗಳನ್ನು ಭೇಟಿಯಾಗುವುದಕ್ಕೂ ಮೊದಲು ಕೂಡಾ ಯುವರಾಜ್ ಯಾದವ್‌ಗೆ ಕರೆ ಮಾಡುತ್ತಿದ್ದ. ಈ ಕುರಿತಾದ ಇನ್ನೂ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ