ಜೊತೆಗಿದ್ದ ಹುಡುಗನ ತಂದೆಯ ಕೊಲೆ ಮಾಡಿದ್ರಾ ತಿಮರೋಡಿ? ಬುಡಕ್ಕೆ ಬಂತಾ ಬುರುಡೆ ಕೇಸ್​?

ಜೊತೆಗಿದ್ದ ಹುಡುಗನ ತಂದೆಯ ಕೊಲೆ ಮಾಡಿದ್ರಾ ತಿಮರೋಡಿ? ಬುಡಕ್ಕೆ ಬಂತಾ ಬುರುಡೆ ಕೇಸ್​?

Published : Aug 22, 2025, 12:42 PM IST

ಒಬ್ಬ ನಾಲಿಗೆ ಇದೆ ಅಂತ್ಹೇಳಿ ಬಾಯಿಗೆ ಬಂದ್ಹಾಗೆ ಮಾತನಾಡ್ತಿದ್ದ.. ಇನ್ನೊಬ್ಬ ಸಾಕ್ಷಿ, ದಾಖಲೆ ಏನು ಇಲ್ಲದೆಯೂ ಕಟ್ಟು ಕಥೆಗಳನ್ನೇ ಸತ್ಯದ ತಲೆ ಮೇಲೆ ಹೊಡೆದ ಹಾಗೆ ಹೇಳ್ತಿದ್ದ. ಆದ್ರೆ ಇಬ್ಬರ ಗ್ರಹಚಾರ ಹೇಗಿತ್ತು ಅಂದ್ರೆ.

ಬುಡಕ್ಕೆ ಬಂತಾ ಬರುಡೆ ಕೇಸ್​..? ತಿಮರೋಡಿ ಅರೆಸ್ಟ್​​..! ಇವರು.. ಅವರು.. ಯಾರನ್ನೂ ಬಿಟ್ಟಿಲ್ಲ ಹೊಲಸು ನಾಲಿಗೆ..! ಖಾಕಿ ಕಾಣ್ತಿದ್ದಂತೆ ಶುರುವಾಗಿತ್ತು ಹೈಡ್ರಾಮ..! AI ವೀರ.. ಸುಳ್ಳು ಸಮೀರನಿಗೂ ಶುರು ಸಂಕಷ್ಟ..! ಇದುವೇ ಇವತ್ತಿನ ಸುವರ್ಣ ಸ್ಪೆಷಲ್ ಶಿವತಾಂಡವ.. ಕರ್ಮಫಲ. ಒಬ್ಬ ನಾಲಿಗೆ ಇದೆ ಅಂತ್ಹೇಳಿ ಬಾಯಿಗೆ ಬಂದ್ಹಾಗೆ ಮಾತನಾಡ್ತಿದ್ದ.. ಇನ್ನೊಬ್ಬ ಸಾಕ್ಷಿ, ದಾಖಲೆ ಏನು ಇಲ್ಲದೆಯೂ ಕಟ್ಟು ಕಥೆಗಳನ್ನೇ ಸತ್ಯದ ತಲೆ ಮೇಲೆ ಹೊಡೆದ ಹಾಗೆ ಹೇಳ್ತಿದ್ದ. ಆದ್ರೆ ಇಬ್ಬರ ಗ್ರಹಚಾರ ಹೇಗಿತ್ತು ಅಂದ್ರೆ, ಇಬ್ಬರನ್ನೂ ಒಂದೇ ದಿನ ಹುಡುಕಿ ಬಂದಿತ್ತು ಖಾಕಿ.

ಅದ್ರಲ್ಲಿ ಒಬ್ಬ ಅರೆಸ್ಟ್ ಆದ್ರೆ, ಇನ್ನೊಬ್ಬ ನಿರೀಕ್ಷಣಾ ಜಾಮೀನು ತಗೊಂಡು ಜಸ್ಟ್ ಬಚಾವ್ ಆದ. ಹಾಗಿದ್ರೆ ಈ ಇಬ್ಬರಿಗೂ ಈಗ ಖಾಕಿ ಕೇಡುಗಾಲ ಶುರುವಾಗಿದ್ದು ಯಾಕೆ.? ಅರೆಸ್ಟ್ ಆಗಿದ್ದಾನಲ್ಲಾ ಅವನ ಕೇಸ್​​​ನಿಂದಲೇ ಶುರುಮಾಡೋಣ ಬನ್ನಿ. ಮಹೇಶ್ ಶೆಟ್ಟಿ ತಿಮರೋಡಿಯೇ ಒಂದು ಕೊಲೆ ಮಾಡಿ, ಆ ಶವವನ್ನ ಹೂತು ಹಾಕಿದ್ದಾರಾ..? ಸದ್ಯ ಇಂಥದ್ದೊಂದು ಆರೋಪ ಅವರ ಮೇಲೆ ಕೇಳಿ ಬರ್ತಿದೆ. ಹಾಗಿದ್ರೆ, ಈ ಆರೋಪ ಮಾಡ್ತಿರೋದು ಯಾರು..? ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕೊಲೆ ಹಾಗೇನೆ, ಕೊಲೆಯಾದ ಆ ಶವವನ್ನು ಹೂತು ಹಾಕಿರೋ ಆರೋಪ ಕೇಳಿ ಬರ್ತಿದೆ.

ಆ ಆರೋಪವೀಗ ಎಸ್​ಐಟಿ ಅಂಗಳವನ್ನೂ ತಲುಪಿದೆ. ಇನ್ನು ತಿಮರೋಡಿ ಅರೆಸ್ಟ್ ಆದ ದಿನವೇ ಎಐ ವೀರ ಸಮೀರನಿಗೂ ಖಾಕಿ ಬಲೆ ಬೀಸಿತ್ತು. ಆದ್ರಾತ ನಿರೀಕ್ಷಣಾ ಜಾಮೀನು ಪಡೆದುಕೊಂಡು ಬಚಾವ್ ಆಗಿದ್ದಾನೆ. ಇಷ್ಟೆಲ್ಲದರ ಮಧ್ಯೆ ಮುಸುಕುಧಾರಿ ವ್ಯಕ್ತಿಯ ಮೊಲದ ಪತ್ನಿ, ಒಂದಿಷ್ಟು ಸ್ಫೋಟಕ ಹೇಳಿಕೆಯನ್ನ ಕೊಟ್ಟಿದ್ದಾರೆ. ಹಾಗಿದ್ರೆ, ಅನಾಮಿಕ ವ್ಯಕ್ತಿಯ ಬಗ್ಗೆ ಅವರು ಹೇಳಿದ್ದೇನು. ಮುಸುಕುಧಾರಿ ವ್ಯಕ್ತಿಯ ನಿಜ ಬಣ್ಣ ಬಯಲಾಗ್ತಿದೆ. ಮೊದಲು ಅನಾಮಿಕನ ಸ್ನೇಹಿತ ಆತನ ಬಗ್ಗೆ ಸ್ಪೋಟಕ ಸಂಗತಿಗಳನ್ನ ಹೊರಹಾಕಿದ್ದ.. ಇದೀಗ ಮುಸುಕುಧಾರಿ ವ್ಯಕ್ತಿಯ ಮೊದಲ ಪತ್ನಿಯೇ, ಅನಾಮಿಕನ ಬಗ್ಗೆ ಮತ್ತಷ್ಟು ವಿಚಾರಗಳನ್ನ ಹೊರಹಾಕಿದ್ದಾರೆ.

21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
Read more