ಚಿಕ್ಕಬಳ್ಳಾಪುರದಲ್ಲಿದೆ ಶ್ರೀರಾಮನ ಹೆಜ್ಜೆ ಗುರುತುಗಳು..! ರಾಮಲಿಂಗೇಶ್ವರ ಬೆಟ್ಟದಲ್ಲಿ ನೆಲೆಸಿದ್ರಂತೆ ರಾಮಸೀತೆ..!

ಚಿಕ್ಕಬಳ್ಳಾಪುರದಲ್ಲಿದೆ ಶ್ರೀರಾಮನ ಹೆಜ್ಜೆ ಗುರುತುಗಳು..! ರಾಮಲಿಂಗೇಶ್ವರ ಬೆಟ್ಟದಲ್ಲಿ ನೆಲೆಸಿದ್ರಂತೆ ರಾಮಸೀತೆ..!

Published : Jan 20, 2024, 09:01 AM IST

ಅಯೋಧ್ಯೆಯ ಶ್ರೀರಾಮನಿಗೂ ಚಿಕ್ಕಬಳ್ಳಾಪುರಕ್ಕೂ ನಂಟಿದೆ. ಮಂಡಿಕಲ್ಲು ಗ್ರಾಮದ ರಾಮಬಾಣ ಬೆಟ್ಟದಲ್ಲಿ ಶ್ರೀರಾಮನ ಕುರುಹುಗಳಿವೆ. ಅಷ್ಟೇ ಅಲ್ಲದೇ ರಾಮನಗರದ ರಾಮದೇವರ ಬೆಟ್ಟದಲ್ಲಿ ಶ್ರೀರಾಮ ಸೀತಾ ಮಾತೆಗಾಗಿ ಕೊಳ ನಿರ್ಮಿಸಿದ್ರಂತೆ. ಹಾಗಾದ್ರೆ ಚಿಕ್ಕಬಳ್ಳಾಪುರ ಹಾಗೂ ರಾಮನಗರದಲ್ಲಿ ಶ್ರೀರಾಮನ ಪಯಣ ಹೇಗಿತ್ತು ಗೊತ್ತಾ ?
 

ದೇಶದಾದ್ಯಂತ ಈಗ ಎಲ್ಲೆಡೆ ಶ್ರೀರಾಮಾನ ಜಪ ನಡೆಯುತ್ತಿದೆ. ಇನ್ನೂ ನಮ್ಮ ರಾಜ್ಯದಲ್ಲೂ ಶ್ರೀರಾಮನ(Shri Ram) ಹೆಜ್ಜೆ ಗುರುತುಗಳು ಇವೆ ಎಂಬ ಪ್ರತೀತಿ ಇದೆ. ಚಿಕ್ಕಬಳ್ಳಾಪುರ(Chikkaballapur) ತಾಲೂಕಿನ ಮಂಡಿಕಲ್ಲು ಗ್ರಾಮದ ರಾಮಬಾಣ ಬೆಟ್ಟದಲ್ಲಿ ಕೂಡ ಶ್ರೀರಾಮನ ನೆನಪುಗಳಿವೆ. ಶ್ರೀರಾಮ ಹಾಗೂ ಸೀತೆ ವನವಾಸ ಹೋದಂತಹ ವೇಳೆ ಸೀತೆಯ ತೊಡೆಯ ಮೇಲೆ ಶ್ರೀರಾಮ ಮಲಗಿರುತ್ತಾನೆ. ಆಗ ಬಂದ ಕಾಕಾಸುರ ಸೀತೆಯ ತೊಡೆಗೆ ಕುಕ್ಕುತ್ತಾನೆ. ಈ ವೇಳೆ ರಕ್ತ ಸೋರುತ್ತದೆ. ಆಗ ಶ್ರೀರಾಮನ ನಿದ್ರೆಗೆ ಭಂಗ ಬರಬಾರದೆಂಬ ಕಾರಣಕ್ಕೆ ಸೀತೆ ನೋವನ್ನು ಸಹಿಸಿಕೊಂಡು ಇರ್ತಾಳೆ. ಆದ್ರೆ ರಕ್ತ ರಾಮನ ಕಿವಿಗೆ ತಾಕಿದಾಗ ಎಚ್ಚೆತ್ತ ರಾಮ ಏನೆಂದು ನೋಡಿದಾಗ ಕಾಕಾಸುರ ಕುಟುಕಿದ್ದಾನೆಂದು ತಿಳಿದು ಕಾಕಾಸುರನ ಮೇಲೆ ಬಾಣ ಬಿಡುತ್ತಾನೆ. ಕಾಕಾಸುರ ಬಂದು ಕ್ಷೆಮೆ ಕೋರಿದಾಗ ಸುಮ್ಮನಾದ ರಾಮ ಬಾಣವನ್ನು ಎರಡು ತುಂಡು ಮಾಡಿ ಬಿಸಾಡುತ್ತಾನೆ.

ಅದ್ರಲ್ಲಿ ಒಂದು ಬಾಣ ಮಂಡಿಕಲ್ಲು ಗ್ರಾಮದ ಬೆಟ್ಟದ ಮೇಲೆ ಬೀಳುತ್ತದೆ. ಮತ್ತೊಂದು ತುಂಡು ಮಹರಾಷ್ಟ್ರದ ನಾಸಿಕ್ ನಲ್ಲಿ ಬಿದ್ದಿದೆ ಎಂಬ ಪ್ರತೀತಿ ಇದೆ.ಈಗಲು ಈ ಬಾಣವನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ ಗ್ರಾಮಸ್ಥರು.ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ನಲ್ಲರಾಳಹಲ್ಳಿ ಗ್ರಾಮದ ರಾಮಲಿಂಗೇಶ್ವರ ಬೆಟ್ಟದಲ್ಲಿ(Ramalingeswara Betta) ಕೂಡ ಶ್ರೀರಾಮನ ನೆನಪಪುಗಳಿವೆ. ರಾಮನ ಹೆಸರಿನ ಜಿಲ್ಲೆಯಾದ ರಾಮನಗರದ(Ramanagara) ರಾಮದೇವರ ಬೆಟ್ಟದಲ್ಲಿ ಪ್ರಭು ಶ್ರೀರಾಮಚಂದ್ರ ವನವಾಸವಾದ ಸಂದರ್ಭದಲ್ಲಿ ತಂಗಿದ್ದ ಎಂಬ ಪುರಾಣದ ಕಥೆ ಇದೆ. ಇನ್ನು ರಾಮನಗರಕ್ಕೆ ರಾಮನಗರ ಎಂಬ ಹೆಸರು ಬರಲು ಈ ಬೆಟ್ಟವೇ ಕಾರಣ ಎಂದು ಹೇಳಲಾಗುತ್ತಿದೆ. ಪುರಾಣದಲ್ಲಿ ರಾಮನಗರಕ್ಕೆ  ಶಿವರಾಮಗಿರಿ ಎಂಬ ಹೆಸರಿತ್ತು. ರಾಮದೇವರ ಬೆಟ್ಟದಲ್ಲಿ ಶ್ರೀರಾಮ ವನವಾಸದ ಕಾಲದಲ್ಲಿ ವಿಶ್ರಾಂತಿಗೆಂದು ಇಲ್ಲಿಗೆ ಬಂದು ನೆಲೆಸಿದ್ದರು ಎಂದು ಪುರಾಣಗಳಲ್ಲಿ ಹೇಳಲಾಗ್ತಿದೆ.

ಇದನ್ನೂ ವೀಕ್ಷಿಸಿ: Today Horoscope: ಸಂಕಷ್ಟಗಳ ವಿಮೋಚನೆಗೆ ಇಂದು ಶನಿ ದೇವರಿಗೆ ಕಬ್ಬಿಣ ದಾನ ಮಾಡಿ..

23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
19:20Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ
47:03RSS ನೋಂದಣಿ ಯಾವಾಗ..? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಯಿಂದ ಶುರುವಾದ ಚರ್ಚೆ
25:24ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಥ್ ಕೊಟ್ಟವರ ₹200 ಕೋಟಿ ಷಡ್ಯಂತ್ರ ಬಿಚ್ಚಿಟ್ಟ ಮಾಸ್ಕ್‌ ಮ್ಯಾನ್!
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
Read more