Shivamogga Riots:ಶಾಂತಿ, ಸುವ್ಯವಸ್ಥೆ ಕದಡಲು ಬಿಜೆಪಿ, ಆರ್‌ಎಸ್ಎಸ್‌ ಕಾರಣ: ಸಿದ್ದರಾಮಯ್ಯ

Feb 22, 2022, 3:22 PM IST

ಶಿವಮೊಗ್ಗ (ಫೆ. 22): ನಿಷೇಧಾಜ್ಞೆ ಮಧ್ಯೆಯೇ ಮೆರವಣಿಗೆಗೆ ಅವಕಾಶ ಕೊಟ್ಟಿದ್ದೇಕೆ..? ಗಲಾಟೆಗೆ ರಾಜ್ಯ ಸರ್ಕಾರವೇ ನೇರ ಹೊಣೆ. ಶಿವಮೊಗ್ಗದಲ್ಲಿ ಶಾಂತಿ, ಸುವ್ಯವಸ್ಥೆ ಕದಡಲು ಬಿಜೆಪಿ, ಆರ್‌ಎಸ್ಎಸ್‌ ಕಾರಣ' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. 

Shivamogga: ಸೆಕ್ಷನ್ 144 ಉಲ್ಲಂಘಿಸಿದ್ರೂ ಈಶ್ವರಪ್ಪ ಮೇಲೆ ಯಾಕ್ರೀ ಕ್ರಮ ಇಲ್ಲ.? ಡಿಕೆಶಿ

ಈಶ್ವರಪ್ಪ, ರಾಘವೇಂದ್ರ ಎದುರು ಕಾರ್ಯಕರ್ತರು ಗಲಭೆ ಮಾಡುತ್ತಾರೆ, ಕಲ್ಲು ತೂರಾಟ ಮಾಡ್ತಾರೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುತ್ತಾರೆ ಅಂದ್ರೆ ಕಾನೂನು ಎಲ್ಲಿದೇ ರೀ..? ಸರ್ಕಾರ ಏನು ಮಾಡುತ್ತಿದೆ.? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಸದ್ಯ ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಮುಂದುವರೆದಿದೆ. 2 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದೆ.