ಮಾಜಿ ಮೇಯರ್‌ಗೆ ಬಂಧನ ಭೀತಿ; ಕೊರೊನಾ ಹೆಸರೇಳಿ ಸಿಬಿಐ ವಿಚಾರಣೆಗೆ ಬರಲು ಕಳ್ಳಾಟ!

Oct 10, 2020, 11:58 AM IST

ಬೆಂಗಳೂರು (ಅ. 10):  ಕೊರೊನಾ ಹೇಗೆಲ್ಲಾ ಅಸ್ತ್ರವಾಗುತ್ತದೆ ನೋಡಿ... ಕೋವಿಡ್ ಹೆಸರಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿ ಲಾಭ ಪಡೆಯುತ್ತಿದ್ದಾರೆ. ಮಾಜಿ ಮೇಯರ್‌ ಪೊಲೀಸ್ ವಿಚಾರಣೆಗೆ ಹೆದರಿ ಕೊರೊನಾ ಹೆಸರನ್ನು ಬಳಕೆ ಮಾಡುತ್ತಿದ್ದಾರೆ. 

ಸಿದ್ದರಾಮಯ್ಯಗೆ ದೋಖಾ, ಹಳ್ಳ ಹತ್ತಿತು ಸಾಲಮನ್ನಾ ಯೋಜನೆ; ಕೋಟಿ ಕೋಟಿ ಗುಳುಂ

ಪೊಲೀಸ್ ವಿಚಾರಣೆಗೆ ಹೆದರಿ ಮಾಜಿ ಮೇಯರ್ ಸಂಪತ್ ರಾಜ್ ಕಳ್ಳಾಟವಾಡುತ್ತಿದ್ದಾರೆ. ಕೋವಿಡ್ ನೆಗೆಟಿವ್ ಬಂದು ಒಂದೇ ವಾರಕ್ಕೆ ಪಾಸಿಟಿವ್ ಬಂದಿದೆಯಂತೆ. ಇದೇ ನೆಪ ಇಟ್ಟುಕೊಂಡು ಸಿಬಿಐ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ವಿಚಾರಣೆಗೆ ಬನ್ನಿ ಎಂದಿ ಸಿಬಿಐ ಹೇಳಿದರೆ ಕೊವಿಡ್ ಹೆಸರನ್ನು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಪೊಲೀಸರಿಗೆ ಇದು ತಲೆನೋವಾಗಿದೆ.