ಸಾಹುಕಾರ್ ಸೀಡಿ ಬಾಂಬ್; ನಿಷ್ಪಕ್ಷಪಾತ ತನಿಖೆ ನಡೆಯಲಿದೆ: ಗೃಹ ಸಚಿವ

Mar 3, 2021, 12:24 PM IST

ಬೆಂಗಳೂರು (ಮಾ. 03): ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು ಹೀಗೆ. 

ಸಂತ್ರಸ್ಥೆ ಬರದೇ ಇದ್ದರೆ 'ಸೀಡಿ' ಪ್ರಕರಣವೇ ಠುಸ್ ಆಗುತ್ತಾ.?

'ಪಕ್ಷದ ಹಿರಿಯರು, ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಅವರು ಇದರ ಬಗ್ಗೆ ಸೂಕ್ತ ನಿರ್ಧಾರ ತೆಗೆದು ಕೊಳ್ತಾರೆ. ಪಕ್ಷದ ನಿಲುವನ್ನು ಹಿರಿಯರೇ ಪ್ರಕಟಿಸುತ್ತಾರೆ. ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತದೆ. ಇದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ಹಾಗಾಗಿ ಹೆಚ್ಚು ಮಾತನಾಡುವುದಿಲ್ಲ' ಎಂದಿದ್ದಾರೆ.