ಆರೈಕೆ ಮಾಡುವವರಿಲ್ಲದೇ ಅನ್ನ ನೀರು ಬಿಟ್ಟ ಕಾಮೇಗೌಡ್ರು..!

Jul 25, 2020, 2:27 PM IST

ಬೆಂಗಳೂರು (ಜು. 25): ಪ್ರಧಾನಿ ಮೋದಿ ಅವರ ಶ್ಲಾಘನೆಗೆ ಪಾತ್ರರಾದ ಮಂಡ್ಯದ ದಾಸನದೊಡ್ಡಿ ಕಾಮೇಗೌಡ್ರು ಕೊರೊನಾ ಸೋಂಕಿತರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗೆ ತೀವ್ರ ಕಾಲು ನೋವಿನಿಂದ ಬಳಲುತ್ತಿದ್ದಾರೆ. ಆಸ್ಪತ್ರೆಯಲ್ಲಿ ಆರೈಕೆ ಮಾಡುವವರಿಲ್ಲದೇ ಅನ್ನ ನೀರು ಬಿಟ್ಟಿದ್ದಾರೆ. ಮನೆಯಲ್ಲಿ ಆರೈಕೆಗಾಗಿ ಮಕ್ಕಳನ್ನೇ ಅವಲಂಬಿಸಿದ್ದರು. ತೀವ್ರ ಕಾಲು ನೋವು ಇರುವುದರಿಂದ ಎದ್ದು ನಡೆಯಲು ಆಗುತ್ತಿಲ್ಲ. ಸುವರ್ಣ ನ್ಯೂಸ್ ಜೊತೆ ಅಳಲು ತೋಡಿಕೊಂಡಿದ್ದಾರೆ. 

ಕಾಮೇಗೌಡರ ಆರೋಗ್ಯ ಬಗ್ಗೆ ಎಚ್‌ಡಿಕೆ ಆತಂಕ..! ಅಗತ್ಯ ಕ್ರಮ ಕೈಗೊಂಡಿದ್ದೇನೆ ಎಂದ ಸಚಿವ ಸುಧಾಕರ್