ಡಿಕೆಶಿಗೆ ಶಕ್ತಿಯಿದ್ರೆ ಸಿದ್ದರಾಮಯ್ಯರನ್ನು ವಜಾಗೊಳಿಸಲಿ: ಈಶ್ವರಪ್ಪ ಸವಾಲು

Mar 27, 2022, 5:19 PM IST

ಸ್ವಾಮೀಜಿಗಳ ಶಿರವಸ್ತ್ರ ಕೆಣಕಿದ ಸಿದ್ದು ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದರು. 'ಮಹಾಭಾರತದ ಶಿಶುಪಾಲ 100 ತಪ್ಪು ಮಾಡಿ ಬಲಿಯಾದ. ಹಾಗೆಯೇ ಸಿದ್ದರಾಮಯ್ಯ 100 ತಪ್ಪುಗಳನ್ನು ಮಾಡಿದ್ದಾರೆ. ಇನ್ನೂ ಅವರಿಗೆ ರಾಜಕೀಯ ಉಳಿಗಾಲವಿಲ್ಲ. ಡಿಕೆಶಿಗೆ ಶಕ್ತಿಯಿದ್ದರೆ ಸಿದ್ದರಾಮಯ್ಯರನ್ನು ವಜಾಗೊಳಿಸಲಿ' ಎಂದು ಈಶ್ವರಪ್ಪ ಸವಾಲು ಹಾಕಿದ್ದಾರೆ. 

ಕಾಂಗ್ರೆಸ್ ಕೋಟೆಯಲ್ಲಿ ಒಬ್ಬಂಟಿಯಾದ್ರಾ ಸಿದ್ದರಾಮಯ್ಯ, ಸೈಲೆಂಟಾಗಿದ್ಹೇಕೆ ಪಕ್ಷ..?

ಹಿಜಾಬ್‌ ಅನ್ನು ಸಮ​ರ್ಥಿ​ಸಿ​ಕೊ​ಳ್ಳುವ ಬರ​ದಲ್ಲಿ ಪ್ರತಿ​ಪಕ್ಷ ನಾಯಕ ಸಿದ್ದ​ರಾ​ಮಯ್ಯ ಅವರು ನೀಡಿದ ಹೇಳಿಕೆ ವಿವಾದ ಸ್ವರೂಪ ಪಡೆದುಕೊಂಡಿದೆ. ‘ಮುಸ್ಲಿಂ ಹೆಣ್ಣು ಮಕ್ಕಳು ತಲೆ ಮೇಲೆ ದುಪ್ಪಟ ಹಾಕಿದರೆ ತಪ್ಪೇನಿದೆ? ಹಿಂದೂ ಹೆಣ್ಣುಮಕ್ಕಳು ಮತ್ತು ಸ್ವಾಮೀಜಿಗಳು ತಲೆ ಮೇಲೆ ಬಟ್ಟೆಹಾಕಿಕೊಂಡರೆ ಅದನ್ನೂ ಪ್ರಶ್ನಿಸುತ್ತೀರಾ’ ಎಂದು ಸಿದ್ದರಾಮಯ್ಯ ಅವರು ಹೇಳಿದ್ದು ಇದಕ್ಕೆ ಬಿಜೆಪಿ ನಾಯಕರು ಮತ್ತು ರಾಜ್ಯದ ಹಲವು ಸ್ವಾಮೀಜಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.