ಕರುನಾಡಿಗೆ ಕಾದಿದೆಯಾ ಕಗ್ಗತ್ತಲ ಶಾಕ್‌..?

Oct 8, 2021, 11:14 AM IST

ರಾಯಚೂರು(ಅ.08):  ಕಲ್ಲಿದ್ದಲಿಗೆ ಬರ ಎದುರಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಕಗ್ಗತ್ತಲು ಕಾಡುವ ಆತಂಕ ಎದುರಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ರಾಜ್ಯ ಕತ್ತಲಲ್ಲಿ ಕಳೆಯಬೇಕಾಗುತ್ತದೆ. ದೇಶಾದ್ಯಂತ ಕಲ್ಲಿದ್ದಲಿಗೆ ಅಭಾವ ಸೃಷ್ಟಿಯಾಗಿದೆ. ರಾಜ್ಯದಲ್ಲೂ ಶಾಖೋತ್ಪನ್ನ ಘಟಕಗಳಿಗೆ ಕಲ್ಲಿದ್ದಲಿನ ಕೊರತೆ ಎದುರಾಗಿದೆ. ಹೀಗಾಗಿ ರಾಜ್ಯದಲ್ಲಿ ವಿದ್ಯುತ್‌ ಕ್ಷಾಮ ಉಂಟಾಗುವ ಆತಂಕ ಎದುರಾಗಿದೆ. ಶಾಖೋತ್ಪನ್ನ ವಿದ್ಯುತ್‌ ಉತ್ಪಾದನೆ ಶೇ. 67ರಷ್ಟು ಕುಸಿತವಾಗಿದೆ. ಒಂದು ವಾರ ದಾಸ್ತಾನು ಇರುವ ಕಡೆ ಕೇವಲ ಒಂದು ದಿನದ ದಾಸ್ತಾನು ಇದೆ. ಕಲ್ಲಿದ್ದಲು ಎಫೆಕ್ಟ್‌ನಿಂದ ವಿದ್ಯುತ್‌ ಪೂರೈಕೆ ಕಡಿತವಾಗುವ ಸಾದ್ಯತೆ ಇದೆ. 

ಸಿಂದಗಿ ಬೈಎಲೆಕ್ಷನ್‌: ಜೆಡಿಎಸ್‌ ಪಕ್ಷದಿಂದ ದೂರವಾದ ಮನಗೂಳಿ ಕುಟುಂಬ