ಜಮೀರ್ ವಿರುದ್ಧ ಹಿಂದೂ ಸಂಘಟನೆಗಳ ಅಭಿಯಾನ: ಅಪ್ಪನಿಗೆ ಚುನಾವಣೆ ಭಯ, ಮಗನಿಗೆ ಸಿನಿಮಾ ಭಯ

Sep 9, 2022, 5:52 PM IST

ಬೆಂಗಳೂರು (ಸೆಪ್ಟೆಂಬರ್ 9): ಮಳೆ ನಿಂತರೂ ಮಳೆ ಹನಿ ನಿಂತಿಲ್ಲ ಅನ್ನೋ ಹಾಗಾಗಿದೆ ಚಾಮರಾಜಪೇಟೆ ಆಟದ ಮೈದಾನದ ವಿಚಾರ. ಯಾಕಂದ್ರೆ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ  ಗಣೇಶೋತ್ಸವ ಗಲಾಟೆ ಮುಗಿದಿದ್ರೂ, ಮೈದಾನದ ಫೈಟ್ ಮಾತ್ರ ಇನ್ನೂ ಅಂತ್ಯ ಕಂಡಿರುವ ಲಕ್ಷಣ ಕಾಣಿಸ್ತಿಲ್ಲ. ಮೇಲ್ನೋಟಕ್ಕೆ ಎಲ್ಲವೂ ಬಗೆಹರಿದಿದೆ ಅನ್ನಿಸಿದ್ರೂ ಶೀತಲ ಸಮರ ಮುಂದುವರೆದಿದ್ದು, ಇದೀಗ ಹಿಂದೂಪರ ಸಂಘಟನೆಗಳು ಶಾಸಕ ಜಮೀರ್​ ಹಾಗೂ ಪುತ್ರ ಜಾಯಿದ್​ ಖಾನ್​ ವಿರುದ್ಧ ಅಭಿಯಾನಕ್ಕೆ ಮುಂದಾಗಿದ್ದಾರೆ. 

ತಮ್ಮ ಕಚೇರಿಯಲ್ಲೇ ಗಣಪತಿ ಕೂಡಿಸಿ ಪೂಜೆ ಮಾಡಿ ಮಂತ್ರ ಪಠಿಸಿದ ಶಾಸಕ ಜಮೀರ್

ಜಮೀರ್ ವಿರುದ್ಧ  ಚಾಮರಾಜಪೇಟೆ ನಾಗರೀಕ ಒಕ್ಕೂಟ ಮನೆ ಮನೆಗೆ ಕರಪತ್ರ ಹಂಚಿ ಅಭಿಯಾನ ಶುರುಮಾಡಿದೆ.ಅಪ್ಪನಿಗೆ ಚುನಾವಣೆ ಭಯ - ಮಗನಿಗೆ ಸಿನಿಮಾ ಬ್ಯಾನ್ ಭಯ!  ಈದ್ಗಾದಲ್ಲಿ ವಿರೋಧ ಕಚೇರಿಯಲ್ಲಿ ಗಣೇಶೋತ್ಸವ..? ಏಕಾಏಕಿ ಗಣೇಶೋತ್ಸವಕ್ಕೆ ಮನಸ್ಸು ಮಾಡಿದ್ದೇಕೆ ಜಮೀರ್..? ಜಮೀರ್ ವಿರುದ್ಧ ಶುರುವಾಗಿದೆ ಸ್ಥಳೀಯರ ಅಭಿಯಾನ..!