ದರ್ಶನ್ ಜಾಮೀನು ನಿರಾಕರಣೆಗೆ ಇಲ್ಲಿವೆ 3 ಕಾರಣಗಳು! ದಾಸನ ಪ್ಲಾನ್ ಬಿ ಏನು?

ದರ್ಶನ್ ಜಾಮೀನು ನಿರಾಕರಣೆಗೆ ಇಲ್ಲಿವೆ 3 ಕಾರಣಗಳು! ದಾಸನ ಪ್ಲಾನ್ ಬಿ ಏನು?

Published : Oct 15, 2024, 08:30 PM IST

ದರ್ಶನ್‌ಗೆ ಜಾಮೀನು ಸಿಕ್ಕಿಲ್ಲ, ಬಳ್ಳಾರಿ ಜೈಲಿನಲ್ಲೇ ಸೆರೆವಾಸ ಮುಂದುವರಿಯಲಿದೆ. ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ವಾಪಾಸ್ ಹೋಗಲು ಪ್ರಯತ್ನ ನಡೆದಿದೆ. ದರ್ಶನ್ ಅಭಿಮಾನಿಗಳು ಪ್ಲಾನ್ ಬಿ ಬಗ್ಗೆ ಚರ್ಚೆ ನಡೆಸಿದ್ದಾರೆ.

ರೇಣುಕಾಸ್ವಾಮಿ ಮರ್ಡರ್ ಕೇಸ್ ಬಗ್ಗೆ ಇಡಿ ರಾಷ್ಟ್ರವೇ ಕಣ್ಣರಳಿಸಿ ನೋಡ್ತಾ ಇದೆ. ಅಂಥದ್ರಲ್ಲಿ ರಾಜ್ಯದ ಬಗ್ಗೆ ಕೇಳ್ಬೇಕಾ? ಅದರಲ್ಲೂ ದರ್ಶನ್ ಅಭಿಮಾನಿಗಳ ಪಾಡು ಹೇಳ್ಬೇಕಾ? ಇಂಥದ್ದೊಂದು ಶಾಕಿಂಗ್ ನ್ಯೂಸ್ ಎದುರಾಗ್ಬೋದು ಅಂತ ದರ್ಶನ್ ಫ್ಯಾನ್ಸ್ ಊಹಿಸಿರ್ಲಿಲ್ಲ. ಆದರೆ, ಒಂದು ವೇಳೆ ಬೇಲ್ ಕನಸು ನನಸಾಗದೇ ಹೋದ್ರೆ, ಏನ್ ಮಾಡ್ಬೇಕು ಅನ್ನೋದರ ಬಗ್ಗೆಯೂ ಒಂದು ಚರ್ಚೆ ನಡೀದೆಯಂತೆ. ದರ್ಶನ್‌ಗೆ ಜಾಮೀನಂತೂ  ಸಿಗಲಿಲ್ಲ. ಆದ್ರೆ ಈಗ, ಆರೋಗ್ಯ ಸಮಸ್ಯೆ ಇದೆ ಅನ್ನೋ ಕಾರಣ ಕೊಟ್ಟು, ಬಳ್ಳಾರಿ ಜೈಲಿಂದ ಬೆಂಗಳೂರಿಗಾದ್ರೂ ವಾಪಾಸ್ ಹೋಗೋಕೆ ಸಾಧ್ಯವಾಗುತ್ತಾ ಅಂತ ಪ್ರಯತ್ನ ಮಾಡ್ತಾ ಇದಾರಂತೆ..

ಡೆವಿಲ್ ಹೀರೋ ದರ್ಶನ್, ಯಾವುದು ಆಗಬಾರದು ಅಂತ ಕಾಯ್ತಾ ಇದ್ನೋ, ಕಡೆಗೂ ಅದೇ ಆಗಿದೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ದಾಸನಿಗೆ, ಬಳ್ಳಾರಿಯಲ್ಲಿ ಸೆರೆವಾಸವೇ ಮುಂದುವರೆದಿದೆ. ಇದು ಇಷ್ಟು ಸುಲಭವಾಗಿ ಮುಗಿಯೋ ಕತೆ ಅಲ್ಲ. ಹಾಗಂತ ಎಲ್ಲಿ ಮುಗಿದ ಹಾಗೆ ಕಾಣ್ತಾ ಇದೆಯೋ, ಅಲ್ಲೇ ಮುಗಿಯುವಂಥದ್ದೂ ಅಲ್ಲ. ಇದರ ಗುಟ್ಟೇನು ಅಂತ ಗೊತ್ತಾಗಬೇಕಿದ್ದರೆ, ನೀವು ಪ್ಲಾನ್ ಬಿ ಬಗ್ಗೆ ತಿಳ್ಕೊಬೇಕು. 

ಜಾಮೀನು ಬೇಕು ಅಂತ ಕಾದು ಕೂತಿದ್ದ ಸಾರಥಿಗೆ, ಕೋರ್ಟ್ ಕೊಟ್ಟಿರೋದು ಅಗಾಧವಾದ ನಿರಾಸೆ. ಕಳೆದ ರಾತ್ರಿಯಂದಲೇ ನಿದ್ದೆಗೆಟ್ಟು ಅದೇ ಯೋಚನೇಲಿದ್ದ ದರ್ಶನ್ಗೆ ಬಿಗ್ ಶಾಕ್ ಎದಿರಾಗಿದೆ. ಬಳ್ಳಾರಿ ಜೈಲಿನಲ್ಲೇ ದಾಸನ ಸೆರೆವಾಸ ಮುಂದುವರಿಯಲಿದೆ. ಒಟ್ಟಾರೆ, ಡೆವಿಲ್ ಹೀರೋ ದರ್ಶನ್ ಹೆಗಲೇರಿರೋ ಕಂಟಕ, ಸುಲಭವಾಗಿ ನಿವಾರಣೆಯಾಗೋ ಲಕ್ಷಣವಂತೂ ಕಾಣ್ತಿಲ್ಲ. ಮುಂದೇನಾಗುತ್ತೋ ಕಾದು ನೋಡೋಣ.

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
Read more