ರಾಜಧಾನಿಯಲ್ಲಿ ರೈತ ಕ್ರಾಂತಿ; 125 ಟ್ರಾಕ್ಟರ್‌ ಬಳಕೆಗೆ ಮಾತ್ರ ಅವಕಾಶ, ಷರತ್ತು ಅನ್ವಯ!

Jan 26, 2021, 12:15 PM IST

ಬೆಂಗಳೂರು (ಜ. 26): ಕೇಂದ್ರ ಕೃಷಿಕಾಯ್ದೆಯನ್ನು ವಿರೋಧಿಸಿ, ರಾಜಧಾನಿಯಲ್ಲಿ ರೈತರು ಟ್ರಾಕ್ಟರ್ ಪರೇಡ್ ನಡೆಸಲು ಮುಂದಾಗಿದ್ದಾರೆ. ಪರೇಡ್‌ಗೆ  ಟ್ರಾಲಿ ಇಲ್ಲದ 125 ಟ್ರಾಕ್ಟರ್‌ಗಳನ್ನು ಬಳಸಲು ಮಾತ್ರ ಅವಕಾಶ ಕೊಡಲಾಗಿದೆ. ಪೊಲೀಸ್‌ ಬಂದೋಬಸ್ತ್‌ನಲ್ಲಿ ರ್ಯಾಲಿ ಸಾಗಲಿದೆ. 

ರೈತರ ಟ್ರಾಕ್ಟರ್‌ಗಳನ್ನು ಪೊಲೀಸರು ತಡೆಯುತ್ತಿದ್ದಾರೆ, ನಾವಿದಕ್ಕೆ ಬಗ್ಗಲ್ಲ: ಕೋಡಿಹಳ್ಳಿ

ಈಗಾಗಲೇ ರಾಜ್ಯದ ಬೇರೆ ಬೇರೆ ಭಾಗಗಳಿಂದ ರೈತರು ಆಗಮಿಸಿದ್ದಾರೆ. ಧ್ವಜಾರೋಹಣದ ಬಳಿಕ ಪರೇಡ್ ಶುರುವಾಗಿದೆ. ಈ ಪರೇಡ್‌ಗೆ ಇನ್ನಷ್ಟು ರೈತರು ಸೇರಿಕೊಳ್ಳುವ ನಿರೀಕ್ಷೆ ಇದೆ.