ಈರುಳ್ಳಿ ಬೆಲೆ ಗಗನಕ್ಕೆ, ದಲ್ಲಾಳಿಗೆ ಬಂಪರ್, ರೈತ ಪಾಪರ್..!

Oct 28, 2020, 11:25 AM IST

ಬೆಂಗಳೂರು (ಅ. 28): ಈರುಳ್ಳಿ ಬೆಲೆ ಕೆಜಿಗೆ 100- 128 ಕ್ಕೆ ಏರಿದೆ. ಆದರೆ ಆ ಬೆಲೆ ರೈತರಿಗೆ ತಲುಪುತ್ತಿಲ್ಲ. ದಲ್ಲಾಳಿಗಳು ರೈತರಿಂದ ಕ್ವಿಂಟಾಲ್‌ಗೆ 3 ಸಾವಿರದಿಂದ 4 ಸಾವಿರದ ಒಳಗೆ ಖರೀದಿ ಮಾಡುತ್ತಿದ್ದಾರೆ. ಅಂದರೆ ರೈತನಿಗೆ ಕೆಜಿಗೆ 30-40 ರೂಪಾಯಿ ಸಿಗುತ್ತಿದೆ. 

'RR ನಗರಕ್ಕೆ ಕನಕಪುರ ದೊಡ್ಡ ಬಂಡೆ, ಚಿಕ್ಕ ಬಂಡೆ ಏನ್ರಿ ಕೊಟ್ಟಿದ್ದಾರೆ? ನಾಚಿಕೆ ಆಗಲ್ವೇನ್ರಿ'?

ರೈತರು ನೇರವಾಗಿ ಮಾರುಕಟ್ಟೆಗೆ ತಂದು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ದಲ್ಲಾಳಿಗಳು ಕಡಿಮೆ ಬೆಲೆಗೆ ಕೊಂಡು 100 ರೂ.ನಂತೆ ಮಾರಾಟ ಮಾಡಿ ಹಣ ಗಳಿಸಿಕೊಳ್ಳುತ್ತಿದ್ದಾರೆ. ರೈತನಿಗೆ ಹಾಕಿದ ಬಂಡವಾಳವೂ ಸಿಗದ ಸ್ಥಿತಿ ನಿರ್ಮಾಣವಾಗಿದೆ.