Weekend Curfew: ಜೀವ, ಜೀವನ ಎರಡೂ ಮುಖ್ಯ, ನೋಡಿಕೊಂಡು ನಿರ್ಧಾರ: ಡಾ. ಸುಧಾಕರ್

Jan 21, 2022, 1:32 PM IST

ಬೆಂಗಳೂರು (ಜ. 21): ಕೋವಿಡ್‌ ಸೋಂಕು ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ವಿಧಿಸಲಾಗಿರುವ ವಾರಾಂತ್ಯ ಕರ್ಫ್ಯೂ (Weekend Curfew) ರಾತ್ರಿ ಕರ್ಫ್ಯೂ (Night Curfew) ಸಡಿಲಿಕೆ ಸಂಬಂಧ ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿರುವ ಉನ್ನತ ಮಟ್ಟದ ಸಭೆಯು ಮಹತ್ವದ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ.

Weekend Curfew: ಎಲ್ಲಾ ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ಕ್ರಮ: ಸಿಎಂ ಭರವಸೆ

'ಇಲಾಖೆಗಳ ಮುಖ್ಯಸ್ಥರು, ತಜ್ಞರು, ಸಾರ್ವಜನಿಕ ವಲಯದಿಂದ ಅಭಿಪ್ರಾಯಗಳು ಬಂದಿದೆ. ಸರ್ಕಾರಕ್ಕೆ ಜನರ ಜೀವ ಹಾಗೂ ಜೀವನ ಎರಡೂ ಮುಖ್ಯ. ಎಲ್ಲವನ್ನೂ ವಿಶ್ಲೇಷಿಸಿ ವೀಕೆಂಡ್ ಕರ್ಫ್ಯೂ ಬೇಕೇ, ಬೇಡವೇ ಎಂದು ಸರ್ಕಾರ ನಿರ್ಧರಿಸುತ್ತದೆ' ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ. 

ವೀಕೆಂಡ್ ಕರ್ಫ್ಯೂ ಮುಂದುವರೆಸಬೇಡಿ ನಮಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಮಾಡಿಕೊಡಿ ಎಂದು ವ್ಯಾಪಾರಿಗಳ ಸಂಘ, ಸಿಎಂಗೆ ಮನವಿ ಮಾಡಿದೆ.