ನೈಟ್‌ ಕರ್ಫ್ಯೂನಿಂದ ಕೊರೋನಾ ನಿಯಂತ್ರಣಕ್ಕೆ ಬರುತ್ತೆ ಎಂದ ಆರೋಗ್ಯ ಸಚಿವ

Dec 24, 2020, 2:29 PM IST

ಮಂಡ್ಯ(ಡಿ.24): ರಾತ್ರಿ 8 ಗಂಟೆಯಿಂದಲೇ ನೈಟ್‌ ಕರ್ಫ್ಯೂಗೆ ಸಲಹೆ ಬಂದಿತ್ತು.ಆರ್ಥಿಕ ಹಿತದೃಷ್ಟಿಯಿಂದ 11 ಗಂಟೆಯಿಂದ ನೈಟ್‌ ಕರ್ಫ್ಯೂ ಜಾರಿಗೊಳಿಸಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ. 

ಮಂಡ್ಯಕ್ಕೂ ವಕ್ಕರಿಸುತ್ತಾ ಹೊಸ ಮಾರಿ? ಬ್ರಿಟನ್‌ನಿಂದ ಬಂದವರಿಂದ ಫುಲ್‌ ಟೆನ್ಷನ್‌

ರಾತ್ರಿ ಕರ್ಫ್ಯೂನಿಂದ ಕೊರೋನಾ ನಿಯಂತ್ರಣಕ್ಕೆ ಬರುತ್ತೆ, ಪಾರ್ಟಿ, ಪಬ್‌ಗಳಲ್ಲಿ ಸೋಂಕು ಹರುಡುವುನ್ನ ತಪ್ಪಿಸಬಹಹುದು. ಇಂಗ್ಲೆಂಡಿನಲ್ಲಿ ನೈಟ್‌ ಕರ್ಫ್ಯೂ ಮಾಡುವಲ್ಲಿ ಸೋತಿದ್ದಾರೆ. ನಾವು ಮಾಡುತ್ತೇವೆ ಎಂದು ಸಚಿವ ಸುಧಾಕರ್ ನೈಟ್‌ ಕರ್ಫ್ಯೂ ಸಮರ್ಥಿಸಿಕೊಂಡಿದ್ದಾರೆ.