ಗುಂಬಜ್‌ ಮೇಲೆ ಕಳಸ ಹಾಕಿದ್ದು ನಾನಾ, ನೀನಾ? ಪ್ರತಾಪ್‌ ಸಿಂಹ-ರಾಮದಾಸ್‌ ಶೀತಲ ಸಮರ!

ಗುಂಬಜ್‌ ಮೇಲೆ ಕಳಸ ಹಾಕಿದ್ದು ನಾನಾ, ನೀನಾ? ಪ್ರತಾಪ್‌ ಸಿಂಹ-ರಾಮದಾಸ್‌ ಶೀತಲ ಸಮರ!

Published : Nov 16, 2022, 02:57 PM IST

ಸಾಕಷ್ಟು ವಿವಾದದಕ್ಕೆ ಕಾರಣವಾಗಿರುವ ಗುಂಬಜ್‌ ಮಾದರಿಯ ಮೈಸೂರು ಬಸ್‌ ಸ್ಟ್ಯಾಂಡ್‌ನ ವಿವಾದವೀಗ ಬಿಜೆಪಿ ನಾಯಕರ ನಡುವೆಯೇ ಶೀತಲ ಸಮರಕ್ಕೆ ಕಾರಣವಾಗಿದೆ. ಗುಂಬಜ್‌ ಮೇಲೆ 10 ದಿನಗಳ ಹಿಂದೆಯೇ ಕಳಸ ಅಳವಡಿಸಲಾಗಿತ್ತು ಎಂದು ರಾಮದಾಸ್‌ ಹೇಳಿದ್ದಾರೆ.
 

ಮೈಸೂರು (ನ.16): ಗುಂಬಜ್‌ ವಿವಾದ ಮೈಸೂರಿನಲ್ಲಿ ತಾರಕಕ್ಕೇರಿದೆ. ಈ ಕುರಿತಾಗಿ ಸಂಸದ ಪ್ರತಾಪ್‌ ಸಿಂಹ ಹಾಗೂ ಶಾಸಕ ರಾಮ್‌ದಾಸ್‌ ನಡುವೆ ಶೀತಲ ಸಮರ ಆರಂಭವಾಗಿದೆ. ಶೆಲ್ಟರ್‌ ವಿನ್ಯಾಸದ ಮಾದರಿಯನ್ನು ರಾಮದಾಸ್‌ ಬಿಡುಗಡೆ ಮಾಡಿದ್ದಾರೆ. 10 ದಿನಗಳ ಹಿಂದೆಯೇ ಕಳಸವನ್ನು ಅಳವಡಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಪ್ರತಾಪ್‌ ಸಿಂಹ ಹೇಳಿದ ಬಳಿಕ ಕಳಸ ಅಳವಡಿಸಿದ್ದಲ್ಲ. ಇದು ಶುದ್ದ ಸುಳ್ಳು ಎಂದು ರಾಮದಾಸ್‌ ಹೇಳಿದ್ದಾರೆ. ಆ ಮೂಲಕ ಗುಂಬಜ್‌ ವಿವಾದಕ್ಕೆ ಶಾಸಕ ರಾಮದಾಸ್‌ ಹೇಳಿಕೆ ಸ್ಫೋಟಕ ತಿರುವು ನೀಡಿದೆ. ಇದರೊಂದಿಗೆ ಸಂಸದ ಪ್ರತಾಪ್‌ ಸಿಂಹ ಹಾಗೂ ಶಾಸಕ ರಾಮದಾಸ್‌ ನಡುವೆ ಶೀತಲ ಸಮರ ಆರಂಭವಾಗಿರುವ ಸ್ಪಷ್ಟ ಸುಳಿವು ಕೂಡ ಸಿಕ್ಕಿದೆ.

ಗುತ್ತಿಗೆದಾರ ಮುಸ್ಲಿಮ್, ಮಸೀದಿ ಮಾದರಿಯಲ್ಲಿ ನಿರ್ಮಾಣ ಎಂಬುದು ಸುಳ್ಳು: ರಾಮದಾಸ್ ಕಿಡಿ

ಪ್ರತಾಪ್‌ ಸಿಂಹ ಹೇಳಿದ ಬಳಿಕ ಕಳಸ ಅಳವಡಿಕೆ ಮಾಡಲಾಗಿದೆ ಎಂದು ವರದಿಯಾಗಿರುವುದು ಸುಳ್ಳು. 10 ದಿನಗಳ ಹಿಂದೆಯೇ ಈ ಕೆಲಸ ಮಾಡಲಾಗಿದೆ. ಜಾಲತಾಣದಲ್ಲಿ ವದಂತಿ ಹಬ್ಬಿಸುವ ಹುನ್ನಾರ ನಡೆದಿದೆ. ಮೈಸೂರಿನ ಮಹಾದೇವ್‌ ಎನ್ನುವವರು ಇದರ ಗುತ್ತಿಗೆ ಪಡೆದಿದ್ದರು.
 

40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
Read more