ಡಿಸಿಎಂ ಲೈಸೆನ್ಸ್ ನೀಡ್ತೀವಿ ಅಂದ್ರೆ..ಸಿಎಂ NO ಅಂತಾರೆ..! ಕಾಂಗ್ರೆಸ್ ನಡೆಗೆ ವಿಪಕ್ಷಗಳ ಲೇವಡಿ!

ಡಿಸಿಎಂ ಲೈಸೆನ್ಸ್ ನೀಡ್ತೀವಿ ಅಂದ್ರೆ..ಸಿಎಂ NO ಅಂತಾರೆ..! ಕಾಂಗ್ರೆಸ್ ನಡೆಗೆ ವಿಪಕ್ಷಗಳ ಲೇವಡಿ!

Published : Oct 08, 2023, 02:20 PM IST

ಒಂದು ಕಡೆ ಕೊಡ್ತಾರೆ.. ಇನ್ನೊಂದು ಕಡೆ ಕಿತ್ಕೊತಾರೆ!
ಉದ್ಯೋಗ ಸೃಷ್ಟಿಗೆ ಬಾರ್ ತೆಗೆಯೋದು ಬೇಕಿಲ್ಲವೆಂದ ಜನ!
ಸರ್ಕಾರದ ದ್ವಂದ್ವ ನಿಲುವು.. ಯಾವುದರ ಸುಳಿವು..?

ಮದ್ಯದಂಗಡಿ ತೆರೆಯೋದಕ್ಕೆ ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಉತ್ಸುಕರಾದ ಹಾಗೆ ಕಾಣ್ತಾ ಇದೆ. ಆದ್ರೆ ಸಿಎಂ ಸಾಹೇಬರು ಮಾತ್ರ, ಈ ನಿರ್ಧಾರಕ್ಕೆ ವಿರೋಧ ದಿಕ್ಕಲ್ಲಿ ಯೋಚಿಸ್ತಾ ಇದಾರೆ. ಜನಕ್ಕೆ ಯಾವ್ದು ಅನುಕೂಲನೋ, ಯಾವ್ದು ಶಾಪಾನೋ, ಜನರೇ ಡಿಸೈಡ್ ಮಾಡ್ತಾರೆ ಅಂತಿದ್ದಾರೆ. ಸಿದ್ದರಾಮಯ್ಯ(Siddaramaiah) ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಭಾಗ್ಯಗಳನ್ನ ಕೊಟ್ಟು, ಜನಮನ ಗೆದ್ದಿದೆ. ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳಂತೂ ಜನರ ಕಣ್ಣಿಗೆ ಎದ್ದು ಕಾಣ್ತಿದ್ದಾವೆ. ಆದ್ರೆ, ಈಗಷ್ಟೇ ಅಧಿಕಾರಕ್ಕೆ ಬಂದಿರೋ ಕಾಂಗ್ರೆಸ್‌ಗೆ ಸಾಲು ಸಾಲು ಸವಾಲುಗಳು ಸಹ ಎದುರಾಗ್ತಾ ಇದಾವೆ. ಅಂಥಾ ಸವಾಲಿನ ಪಟ್ಟಿಗೆ ಈಗ ಹೊಸದೊಂದು ಗೊಂದಲ ಸೇರ್ಪಡೆಯಾಗಿದೆ. ಅದೇ ಮದ್ಯದ ಲೈಸೆನ್ಸ್ ವಿಚಾರ. ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕಳೆದ 30 ವರ್ಷಗಳಿಂದ ಬಾರ್ ಲೈಸೆನ್ಸ್(Bar license) ಕೊಟ್ಟೇ ಇಲ್ಲ. ಹಾಗಾಗಿ, ಈಗ ಮತ್ತೆ ಲೈಸೆನ್ಸ್ ಕೊಟ್ರೆ ಒಳ್ಳೇದು ಅನ್ನೋ ಮಾತಾಡ್ತಾ ಇದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಗೂ ಸೂಪರ್ ಮಾರ್ಕೆಟ್‌ಗಳಲ್ಲೂ ಮದ್ಯದಂಗಡಿ ಓಪನ್ ಮಾಡೋಕೆ ಅವಕಾಶ ಕೊಡೋಕೆ ಸರ್ಕಾರ ಸಿದ್ಧವಾಗಿತ್ತಂತೆ. ಹೊಸದಾಗಿ 389 ಮದ್ಯದಂಗಡಿ ತೆರೆಯೋದಕ್ಕೆ ರಾಜ್ಯ ಸರ್ಕಾರದ ಪ್ಲಾನ್ ಮಾಡ್ಕೊಂಡಿದೆ ಅನ್ನೋ ಮಾತು ಕೇಳಿಬಂದಿತ್ತು. ಆದ್ರೆ ಈ ಮಾತೇ ಭಾರಿ ವಿರೋಧಕ್ಕೆ ಕಾರಣವಾಗಿತ್ತು. ಜಿಲ್ಲೆ ಜಿಲ್ಲೆಯಲ್ಲೂ ಮಹಿಳೆಯರು ದಂಗೆ ಎದ್ದಿದ್ರು. ಪ್ರತಿಭಟನೆ ಕಹಳೆ ಮೊಳಗಿಸಿ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುವಂತೆ ಆಗ್ರಹಿಸಿದ್ದರು. ಈ ಹೋರಾಟ, ಆಕ್ರೋಶಗಳ ಮಧ್ಯೆನೇ ಸಿಎಂ ಸಿದ್ದರಾಮಯ್ಯ ಹೊಸದಾಗಿ ಯಾವುದೇ ಬಾರ್ ತೆರೆಯಲ್ಲ ಅನ್ನೋ ಭರವಸೆ ನೀಡಿದ್ದಾರೆ. 

ಇದನ್ನೂ ವೀಕ್ಷಿಸಿ:  ಅನೇಕಲ್‌ ಪಟಾಕಿ ದುರಂತಕ್ಕೆ ಕಾರಣವೇನು ? ಬಾಕ್ಸ್‌ ಶಿಫ್ಟ್‌ ಮಾಡುವಾಗಲೇ ಆಯಿತಾ ಯಡವಟ್ಟು ?

03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
Read more