ಕೇರಳ ಸಂಸದನ ಅಖಾಡದಲ್ಲಿ ಬುರುಡೆಯಾಟ: ಕಮ್ಯುನಿಸ್ಟ್ ಸಂಸದ, ಸೂತ್ರಧಾರಿನಾ? ಪಾತ್ರಧಾರಿನಾ?

ಕೇರಳ ಸಂಸದನ ಅಖಾಡದಲ್ಲಿ ಬುರುಡೆಯಾಟ: ಕಮ್ಯುನಿಸ್ಟ್ ಸಂಸದ, ಸೂತ್ರಧಾರಿನಾ? ಪಾತ್ರಧಾರಿನಾ?

Published : Sep 08, 2025, 12:08 PM IST

ಧರ್ಮಸ್ಥಳ ಷಡ್ಯಂತ್ರದಲ್ಲಿ ಇನ್ನಷ್ಟು ಕೇರಳ ಮೂಲದ ಸಂಚುಗಳಿವೆ. ಹಾಗಿದ್ರೆ ಏನಾ ಪಿತೂರಿ.? ಯಾರ್ಯಾರ ಮೇಲೀಗ ಆರೋಪ, ಅನುಮಾನಗಳು ವ್ಯಕ್ತವಾಗ್ತಿವೆ. ಒಂದ್ಕಡೆ ಕೇರಳದ ಸಂಸದರೊಬ್ಬರಿಗೆ ಸಂಕಷ್ಟ ಶುರುವಾಗಿದೆ.

ಧರ್ಮಸ್ಥಳ ವಿರುದ್ಧ ಕೇರಳದಲ್ಲಿ ಷಡ್ಯಂತ್ರ. ಸಿಕ್ಕಿತು ಸಾಕ್ಷಿ.! ಕೇರಳ  ಸಂಸದನ ಅಖಾಡದಲ್ಲಿ ಬುರುಡೆಯಾಟ.! ಅಮಿತ್ ಶಾ ಅಂಗಳ ತಲುಪಿತ್ತು ಪಿತೂರಿ ಪತ್ರ.! ಕಮ್ಯುನಿಸ್ಟ್ ಸಂಸದ. ಸೂತ್ರಧಾರಿನಾ.? ಪಾತ್ರಧಾರಿನಾ.? ಇದುವೇ ಇವತ್ತಿನ ಸುವರ್ಣ ಸ್ಪೆಷಲ್  ಬಡಾಯಿ ಬುರುಡೆ ಕೇರಳ ಫೈಲ್ಸ್​​. ಷಡ್ಯಂತ್ರವಲ್ಲ. ಮಹಾ ಷಡ್ಯಂತ್ರ. ಬರೀ ಸಂಚಲ್ಲ. ಮಹಾ ಸಂಚು. ಧರ್ಮಸ್ಥಳ ಕ್ಷೇತ್ರದ ವಿರುದ್ಧ ಎಷ್ಟು ಸಾಧ್ಯವೋ ಅಷ್ಟು ಅಪಪ್ರಚಾರ ನಡೆಸೋಕೆ ನಡೆದಿತ್ತು ಒಂದು ಪಿತೂರಿ. ಇದ್ರ ವ್ಯಾಪ್ತಿ ಬಹಳ ದೊಡ್ಡದ್ದು. ಕೇರಳಕ್ಕೂ ಇದು ಹಬ್ಬಿದೆ. ಇದೀಗ ಅಲ್ಲಿನ ಸಂಸದರೊಬ್ಬರಿಗೂ ಬುರುಡೆ ಗ್ಯಾಂಗ್​​ಗೂ ನಂಟಿದ್ದ ವಿಚಾರ ಹೊರಬಿದ್ದಿದೆ. ಹಾಗಿದ್ರೆ, ಕೇರಳದ ಆ ಸಂಸದರಿಗೂ. ಧರ್ಮಸ್ಥಳ ವಿರುದ್ಧದ ಷಡ್ಯಂತ್ರಕ್ಕೂ ಏನ್ ಸಂಬಂದ.? ಇದ್ರಲ್ಲಿ ಅವರ ಪಾತ್ರ ಎಷ್ಟಿತ್ತು.?

ಇಷ್ಟೇ ಅಲ್ಲಾ. ಧರ್ಮಸ್ಥಳ ಷಡ್ಯಂತ್ರದಲ್ಲಿ ಇನ್ನಷ್ಟು ಕೇರಳ ಮೂಲದ ಸಂಚುಗಳಿವೆ. ಹಾಗಿದ್ರೆ ಏನಾ ಪಿತೂರಿ.? ಯಾರ್ಯಾರ ಮೇಲೀಗ ಆರೋಪ, ಅನುಮಾನಗಳು ವ್ಯಕ್ತವಾಗ್ತಿವೆ. ಒಂದ್ಕಡೆ ಕೇರಳದ ಸಂಸದರೊಬ್ಬರಿಗೆ ಸಂಕಷ್ಟ ಶುರುವಾಗಿದ್ರೆ, ಇನ್ನೊಂದು ಕಡೆ ಕೇರಳದ ಯೂಟ್ಯೂಬರ್​​ ಒಬ್ಬನನ್ನ ವಿಚಾರಣೆಗೆ ಕರೆದಿದೆ ಎಸ್​ಐಟಿ. ಹಾಗಿದ್ರೆ ಯಾರಾತ.?  ಆತನ ಹಿನ್ನೆಲೆ ಏನು.? ಧರ್ಮಸ್ಥಳ ಪ್ರಕರಣದಲ್ಲಿ ಆತನ ಪಾತ್ರವೇನು.? ಧರ್ಮಸ್ಥಳದ ಹೆಸರು ಕೆಡಿಸಲು ಹಠಕ್ಕೆ ಬಿದ್ದಿದ್ದ ಬುರುಡೆ ಗ್ಯಾಂಗ್, ಕೊಡಗಿನಲ್ಲೂ ಸಂಚು ನಡೆಸಿರೋ ಸಂಗತಿ ಈಗ ಬಯಲಾಗಿದೆ. ಹಾಗಿದ್ರೆ ಏನೀ ಸಂಚು. ಬುರುಡೆ ಕಥೆ ಕಟ್ಟಿ, ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಹೆಣೆಯೋದ್ರ ಜೊತೆಗೆ, ಈ ಬುರುಡೆ ಗ್ಯಾಂಗ್ ಮತ್ತೊಂದು ಪಿತೂರಿಯನ್ನ ಸಹ ಮಾಡಿತ್ತು. ಹಾಗಿದ್ರೆ ಏನಾ ಪಿತೂರಿ.? ಕೊಡಗಿನಲ್ಲಿ ಈ ಬುರುಡೆ ಗ್ಯಾಂಗ್​ ಏನ್ ಮಾಡೋಕೆ ಹೊರಟಿತ್ತು.? 

23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
19:20Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ
47:03RSS ನೋಂದಣಿ ಯಾವಾಗ..? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಯಿಂದ ಶುರುವಾದ ಚರ್ಚೆ
25:24ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಥ್ ಕೊಟ್ಟವರ ₹200 ಕೋಟಿ ಷಡ್ಯಂತ್ರ ಬಿಚ್ಚಿಟ್ಟ ಮಾಸ್ಕ್‌ ಮ್ಯಾನ್!
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
Read more