ತಿಮರೋಡಿ ಮನೆಯಲ್ಲಿ ಬುರುಡೆ ಬ್ಲೂಪ್ರಿಂಟ್? ಅರೆಸ್ಟ್ ಆಗುತ್ತಾ ಧರ್ಮಸ್ಥಳ ವಿರೋಧಿ ಗ್ಯಾಂಗ್?

ತಿಮರೋಡಿ ಮನೆಯಲ್ಲಿ ಬುರುಡೆ ಬ್ಲೂಪ್ರಿಂಟ್? ಅರೆಸ್ಟ್ ಆಗುತ್ತಾ ಧರ್ಮಸ್ಥಳ ವಿರೋಧಿ ಗ್ಯಾಂಗ್?

Published : Sep 03, 2025, 10:49 AM IST

ಗುಂಡಿ ಪಾಯಿಂಟ್​​ ಮಾಡಲು ಅವರು ಮಾಡಿದ್ದ ತಯಾರಿ ಎಂಥದ್ದು ಅನ್ನೋದೆಲ್ಲಾ ಬಯಲಾಗಿದೆ. ಹಾಗಿದ್ರೆ ಧರ್ಮಸ್ಥಳ ಬುರುಡೆ ಪ್ರಕರಣದ ಲೇಟೆಸ್ಟ್​ ಅಪ್​ಡೇಟ್ಸ್​​ ಏನು.?

ಬಾಯಿಗೆ ಬಂದಂತೆ ಆರೋಪಗಳನ್ನ ಮಾಡಿ. AI ವಿಡಿಯೋಗಳನ್ನ ವೈರಲ್ ಮಾಡಿ ಧರ್ಮಸ್ಥಳ ಅನ್ನೋ ಪವಿತ್ರ ಕ್ಷೇತ್ರದ ವಿರುದ್ಧ ಜನರನ್ನ ಎತ್ತಿಕಟ್ಟಿದ್ದ  ಧರ್ಮಸ್ಥಳ ವಿರೋಧಿ ಗ್ಯಾಂಗ್​​ನ ಅಸಲಿ ಕಹಾನಿ ಈಗ ಬಯಲಾಗ್ತಿದೆ. ಅವರು ಮಾಡಿದ್ದ ಷಡ್ಯಂತ್ರ, ಪಿತೂರಿ ಎಲ್ಲವೂ ಜನರಿಗೆ ಗೊತ್ತಾಗಿಬಿಟ್ಟಿದೆ. ಥ್ಯಾಂಕ್ಸ್​​ ಟು SIT ಟೀಂ. ಆರಂಭದಲ್ಲಿ ಚಿನ್ನಯ ತೋರಿಸಿದ ಜಾಗದಲ್ಲೆಲ್ಲಾ ಭೂಮಿಯನ್ನ ಅಗೆದಿದ್ದ ತಂಡ. ಈಗ ಅದೇ ಚಿನ್ನಯನಿಗೆ ಕ್ಲಾಸ್​​ ತಗೆದುಕೊಳ್ತಿದೆ. ಅಷ್ಟೇ ಅಲ್ಲ ಮಹತ್ವದ ಮಾಹಿತಿಗಳನ್ನ ಕಲೆ ಹಾಕುತ್ತಿದೆ. ಮೊನ್ನೆಯಷ್ಟೇ ಬೆಂಗಳೂರಿನ ಜಯಂತ್​ ಮನೆಯಲ್ಲಿ ಶೋಧ ನಡೆಸಲಾಯ್ತು. ಆಗಲೇ ಚಿನ್ನಯ ತಂದಿದ್ದ ಬುರುಡೆ ಜಯಂತ್​ ಮನೆಯಲ್ಲಿತ್ತು ಅಂತ ಗೊತ್ತಾಗಿತ್ತು. ಈಗ ಚಿನ್ನಯ ಪೊಲೀಸರೆದುರು ಬರೋದಕ್ಕೂ ಮೊದಲು ಈ ಗ್ಯಾಂಗ್​ ಜೊತೆ ಸೇರಿ ಏನೆಲ್ಲಾ ಮಾಡಿದ್ದ.

ಗುಂಡಿ ಪಾಯಿಂಟ್​​ ಮಾಡಲು ಅವರು ಮಾಡಿದ್ದ ತಯಾರಿ ಎಂಥದ್ದು ಅನ್ನೋದೆಲ್ಲಾ ಬಯಲಾಗಿದೆ. ಹಾಗಿದ್ರೆ ಧರ್ಮಸ್ಥಳ ಬುರುಡೆ ಪ್ರಕರಣದ ಲೇಟೆಸ್ಟ್​ ಅಪ್​ಡೇಟ್ಸ್​​ ಏನು.? ತನಿಖೆ ಎಲ್ಲಿವರಗೆ ಬಂದಿದೆ ಅನ್ನೋದ್ರ ಕಂಪ್ಲೀಟ್​​ ಡಿಟೇಲ್ಸ್​​ ಇವತ್ತಿನ ಎಫ್​.ಐ.ಆರ್​​. ಈ ಗ್ಯಾಂಗ್​ ಯಾವಾಗ ಬೇಕಾದ್ರೂ ಅರೆಸ್ಟ್​ ಆಗಬಹುದು.. ಅದಕ್ಕೆ ಎಲ್ಲಾ ತಯಾರಿಯನ್ನ SIT ಮಾಡಿಕೊಳ್ತಿದೆ. ಇನ್ನೂ ಇದೇ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಈ ಬುರುಡೆ ಕಹನಿಗೆ ಪೊಲಿಟಿಕಲ್​​ ಫೈಟ್​​​ ಸೇರಿಕೊಂಡಿದ್ದೇಗೆ..? ಷಡ್ಯಂತ್ರ ಅನ್ನೋ ಪದ ಮೊದಲು ಬಳಸಿದ್ದೇ ಡಿಸಿಎಂ ಡಿಕೆಶಿ.  ನಂತರ ಸದನದಲ್ಲಿ ಮಾತಿಗೆ ಮಾತು. ಗೃಹಸಚಿವರಿಂದ ಸಮಾದಾನದ ಉತ್ತರ. ಇದೆಲ್ಲಾ ಆದ ಮೇಲೆ ಈಗ ಧರ್ಮಸ್ಥಳ ಚಲೋ ಕಾರ್ಯಕ್ರಮಗಳು. ನಿನ್ನೆ ಜೆಡಿಎಸ್​​ ಹೋಗಿ ಬಂದ್ರೆ ಇವತ್ತು ಬಿಜೆಪಿಯ ಸರದಿ.

ಸಮಾವೇಷ ಮಾಡ್ತೀವಿ ಅಂತ ಹೋದ ಬಿಜೆಪಿ ನಾಯಕರ ಮಧ್ಯೆ ಒಳಜಗಳವೂ ನಡೆದು ಹೊಯ್ತು. ಇನ್ನೂ ಇವರುಗಳ ಸಮಾವೇಷಕ್ಕೆ ಕಾಂಗ್ರೆಸ್​​ ಕೌಂಟರ್​​. ಒಟ್ಟಿನಲ್ಲಿ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಧರ್ಮಯುದ್ಧದಲ್ಲಿ ರಾಜಕೀಯದಾಟವೂ ನಡೆಯುತ್ತಿದೆ. ಧರ್ಮಸ್ಥಳದ ವಿರುದ್ಧ ಎನ್​ಐಎ ತನಿಖೆಯಾಗಬೇಕು ಅಂತಾ ಪಟ್ಟುಹಿಡಿದಿರೋ ಬಿಜೆಪಿ ಸರಣಿ ಹೋರಾಟ ನಡೆಸುತ್ತಿದ್ರೆ, ಕಾಂಗ್ರೆಸ್​ ಮಾತ್ರ ಎಸ್​ಐಟಿ ತನಿಖೆಯಿಂದಲೇ ಸತ್ಯ ಹೊರಬರಲಿದೆ ಅಂತಾ ಬಿಗಿನಿಲುವು ತಾಳಿದೆ. ಹೀಗಾಗಿ ಕಾಂಗ್ರೆಸ್​-ಬಿಜೆಪಿ ಮಧ್ಯೆ ಧರ್ಮಯುದ್ಧ ತಾರಕಕ್ಕೇರುತ್ತಲೇ ಇದೆ. ಮುಂದೆ ಇದು ಎಲ್ಲಿಗೆ ಹೋಗಿ ನಿಲ್ಲುತ್ತೆ ನೋಡೋಣ.

21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
Read more