ತಿಮರೋಡಿ ಮನೆಯಲ್ಲಿ ಬುರುಡೆ ಬ್ಲೂಪ್ರಿಂಟ್? ಅರೆಸ್ಟ್ ಆಗುತ್ತಾ ಧರ್ಮಸ್ಥಳ ವಿರೋಧಿ ಗ್ಯಾಂಗ್?

ತಿಮರೋಡಿ ಮನೆಯಲ್ಲಿ ಬುರುಡೆ ಬ್ಲೂಪ್ರಿಂಟ್? ಅರೆಸ್ಟ್ ಆಗುತ್ತಾ ಧರ್ಮಸ್ಥಳ ವಿರೋಧಿ ಗ್ಯಾಂಗ್?

Published : Sep 03, 2025, 10:49 AM IST

ಗುಂಡಿ ಪಾಯಿಂಟ್​​ ಮಾಡಲು ಅವರು ಮಾಡಿದ್ದ ತಯಾರಿ ಎಂಥದ್ದು ಅನ್ನೋದೆಲ್ಲಾ ಬಯಲಾಗಿದೆ. ಹಾಗಿದ್ರೆ ಧರ್ಮಸ್ಥಳ ಬುರುಡೆ ಪ್ರಕರಣದ ಲೇಟೆಸ್ಟ್​ ಅಪ್​ಡೇಟ್ಸ್​​ ಏನು.?

ಬಾಯಿಗೆ ಬಂದಂತೆ ಆರೋಪಗಳನ್ನ ಮಾಡಿ. AI ವಿಡಿಯೋಗಳನ್ನ ವೈರಲ್ ಮಾಡಿ ಧರ್ಮಸ್ಥಳ ಅನ್ನೋ ಪವಿತ್ರ ಕ್ಷೇತ್ರದ ವಿರುದ್ಧ ಜನರನ್ನ ಎತ್ತಿಕಟ್ಟಿದ್ದ  ಧರ್ಮಸ್ಥಳ ವಿರೋಧಿ ಗ್ಯಾಂಗ್​​ನ ಅಸಲಿ ಕಹಾನಿ ಈಗ ಬಯಲಾಗ್ತಿದೆ. ಅವರು ಮಾಡಿದ್ದ ಷಡ್ಯಂತ್ರ, ಪಿತೂರಿ ಎಲ್ಲವೂ ಜನರಿಗೆ ಗೊತ್ತಾಗಿಬಿಟ್ಟಿದೆ. ಥ್ಯಾಂಕ್ಸ್​​ ಟು SIT ಟೀಂ. ಆರಂಭದಲ್ಲಿ ಚಿನ್ನಯ ತೋರಿಸಿದ ಜಾಗದಲ್ಲೆಲ್ಲಾ ಭೂಮಿಯನ್ನ ಅಗೆದಿದ್ದ ತಂಡ. ಈಗ ಅದೇ ಚಿನ್ನಯನಿಗೆ ಕ್ಲಾಸ್​​ ತಗೆದುಕೊಳ್ತಿದೆ. ಅಷ್ಟೇ ಅಲ್ಲ ಮಹತ್ವದ ಮಾಹಿತಿಗಳನ್ನ ಕಲೆ ಹಾಕುತ್ತಿದೆ. ಮೊನ್ನೆಯಷ್ಟೇ ಬೆಂಗಳೂರಿನ ಜಯಂತ್​ ಮನೆಯಲ್ಲಿ ಶೋಧ ನಡೆಸಲಾಯ್ತು. ಆಗಲೇ ಚಿನ್ನಯ ತಂದಿದ್ದ ಬುರುಡೆ ಜಯಂತ್​ ಮನೆಯಲ್ಲಿತ್ತು ಅಂತ ಗೊತ್ತಾಗಿತ್ತು. ಈಗ ಚಿನ್ನಯ ಪೊಲೀಸರೆದುರು ಬರೋದಕ್ಕೂ ಮೊದಲು ಈ ಗ್ಯಾಂಗ್​ ಜೊತೆ ಸೇರಿ ಏನೆಲ್ಲಾ ಮಾಡಿದ್ದ.

ಗುಂಡಿ ಪಾಯಿಂಟ್​​ ಮಾಡಲು ಅವರು ಮಾಡಿದ್ದ ತಯಾರಿ ಎಂಥದ್ದು ಅನ್ನೋದೆಲ್ಲಾ ಬಯಲಾಗಿದೆ. ಹಾಗಿದ್ರೆ ಧರ್ಮಸ್ಥಳ ಬುರುಡೆ ಪ್ರಕರಣದ ಲೇಟೆಸ್ಟ್​ ಅಪ್​ಡೇಟ್ಸ್​​ ಏನು.? ತನಿಖೆ ಎಲ್ಲಿವರಗೆ ಬಂದಿದೆ ಅನ್ನೋದ್ರ ಕಂಪ್ಲೀಟ್​​ ಡಿಟೇಲ್ಸ್​​ ಇವತ್ತಿನ ಎಫ್​.ಐ.ಆರ್​​. ಈ ಗ್ಯಾಂಗ್​ ಯಾವಾಗ ಬೇಕಾದ್ರೂ ಅರೆಸ್ಟ್​ ಆಗಬಹುದು.. ಅದಕ್ಕೆ ಎಲ್ಲಾ ತಯಾರಿಯನ್ನ SIT ಮಾಡಿಕೊಳ್ತಿದೆ. ಇನ್ನೂ ಇದೇ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಈ ಬುರುಡೆ ಕಹನಿಗೆ ಪೊಲಿಟಿಕಲ್​​ ಫೈಟ್​​​ ಸೇರಿಕೊಂಡಿದ್ದೇಗೆ..? ಷಡ್ಯಂತ್ರ ಅನ್ನೋ ಪದ ಮೊದಲು ಬಳಸಿದ್ದೇ ಡಿಸಿಎಂ ಡಿಕೆಶಿ.  ನಂತರ ಸದನದಲ್ಲಿ ಮಾತಿಗೆ ಮಾತು. ಗೃಹಸಚಿವರಿಂದ ಸಮಾದಾನದ ಉತ್ತರ. ಇದೆಲ್ಲಾ ಆದ ಮೇಲೆ ಈಗ ಧರ್ಮಸ್ಥಳ ಚಲೋ ಕಾರ್ಯಕ್ರಮಗಳು. ನಿನ್ನೆ ಜೆಡಿಎಸ್​​ ಹೋಗಿ ಬಂದ್ರೆ ಇವತ್ತು ಬಿಜೆಪಿಯ ಸರದಿ.

ಸಮಾವೇಷ ಮಾಡ್ತೀವಿ ಅಂತ ಹೋದ ಬಿಜೆಪಿ ನಾಯಕರ ಮಧ್ಯೆ ಒಳಜಗಳವೂ ನಡೆದು ಹೊಯ್ತು. ಇನ್ನೂ ಇವರುಗಳ ಸಮಾವೇಷಕ್ಕೆ ಕಾಂಗ್ರೆಸ್​​ ಕೌಂಟರ್​​. ಒಟ್ಟಿನಲ್ಲಿ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಧರ್ಮಯುದ್ಧದಲ್ಲಿ ರಾಜಕೀಯದಾಟವೂ ನಡೆಯುತ್ತಿದೆ. ಧರ್ಮಸ್ಥಳದ ವಿರುದ್ಧ ಎನ್​ಐಎ ತನಿಖೆಯಾಗಬೇಕು ಅಂತಾ ಪಟ್ಟುಹಿಡಿದಿರೋ ಬಿಜೆಪಿ ಸರಣಿ ಹೋರಾಟ ನಡೆಸುತ್ತಿದ್ರೆ, ಕಾಂಗ್ರೆಸ್​ ಮಾತ್ರ ಎಸ್​ಐಟಿ ತನಿಖೆಯಿಂದಲೇ ಸತ್ಯ ಹೊರಬರಲಿದೆ ಅಂತಾ ಬಿಗಿನಿಲುವು ತಾಳಿದೆ. ಹೀಗಾಗಿ ಕಾಂಗ್ರೆಸ್​-ಬಿಜೆಪಿ ಮಧ್ಯೆ ಧರ್ಮಯುದ್ಧ ತಾರಕಕ್ಕೇರುತ್ತಲೇ ಇದೆ. ಮುಂದೆ ಇದು ಎಲ್ಲಿಗೆ ಹೋಗಿ ನಿಲ್ಲುತ್ತೆ ನೋಡೋಣ.

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
Read more