ತಿಮರೋಡಿ ಮನೆಯಲ್ಲಿ ಬುರುಡೆ ಬ್ಲೂಪ್ರಿಂಟ್? ಅರೆಸ್ಟ್ ಆಗುತ್ತಾ ಧರ್ಮಸ್ಥಳ ವಿರೋಧಿ ಗ್ಯಾಂಗ್?

ತಿಮರೋಡಿ ಮನೆಯಲ್ಲಿ ಬುರುಡೆ ಬ್ಲೂಪ್ರಿಂಟ್? ಅರೆಸ್ಟ್ ಆಗುತ್ತಾ ಧರ್ಮಸ್ಥಳ ವಿರೋಧಿ ಗ್ಯಾಂಗ್?

Published : Sep 03, 2025, 10:49 AM IST

ಗುಂಡಿ ಪಾಯಿಂಟ್​​ ಮಾಡಲು ಅವರು ಮಾಡಿದ್ದ ತಯಾರಿ ಎಂಥದ್ದು ಅನ್ನೋದೆಲ್ಲಾ ಬಯಲಾಗಿದೆ. ಹಾಗಿದ್ರೆ ಧರ್ಮಸ್ಥಳ ಬುರುಡೆ ಪ್ರಕರಣದ ಲೇಟೆಸ್ಟ್​ ಅಪ್​ಡೇಟ್ಸ್​​ ಏನು.?

ಬಾಯಿಗೆ ಬಂದಂತೆ ಆರೋಪಗಳನ್ನ ಮಾಡಿ. AI ವಿಡಿಯೋಗಳನ್ನ ವೈರಲ್ ಮಾಡಿ ಧರ್ಮಸ್ಥಳ ಅನ್ನೋ ಪವಿತ್ರ ಕ್ಷೇತ್ರದ ವಿರುದ್ಧ ಜನರನ್ನ ಎತ್ತಿಕಟ್ಟಿದ್ದ  ಧರ್ಮಸ್ಥಳ ವಿರೋಧಿ ಗ್ಯಾಂಗ್​​ನ ಅಸಲಿ ಕಹಾನಿ ಈಗ ಬಯಲಾಗ್ತಿದೆ. ಅವರು ಮಾಡಿದ್ದ ಷಡ್ಯಂತ್ರ, ಪಿತೂರಿ ಎಲ್ಲವೂ ಜನರಿಗೆ ಗೊತ್ತಾಗಿಬಿಟ್ಟಿದೆ. ಥ್ಯಾಂಕ್ಸ್​​ ಟು SIT ಟೀಂ. ಆರಂಭದಲ್ಲಿ ಚಿನ್ನಯ ತೋರಿಸಿದ ಜಾಗದಲ್ಲೆಲ್ಲಾ ಭೂಮಿಯನ್ನ ಅಗೆದಿದ್ದ ತಂಡ. ಈಗ ಅದೇ ಚಿನ್ನಯನಿಗೆ ಕ್ಲಾಸ್​​ ತಗೆದುಕೊಳ್ತಿದೆ. ಅಷ್ಟೇ ಅಲ್ಲ ಮಹತ್ವದ ಮಾಹಿತಿಗಳನ್ನ ಕಲೆ ಹಾಕುತ್ತಿದೆ. ಮೊನ್ನೆಯಷ್ಟೇ ಬೆಂಗಳೂರಿನ ಜಯಂತ್​ ಮನೆಯಲ್ಲಿ ಶೋಧ ನಡೆಸಲಾಯ್ತು. ಆಗಲೇ ಚಿನ್ನಯ ತಂದಿದ್ದ ಬುರುಡೆ ಜಯಂತ್​ ಮನೆಯಲ್ಲಿತ್ತು ಅಂತ ಗೊತ್ತಾಗಿತ್ತು. ಈಗ ಚಿನ್ನಯ ಪೊಲೀಸರೆದುರು ಬರೋದಕ್ಕೂ ಮೊದಲು ಈ ಗ್ಯಾಂಗ್​ ಜೊತೆ ಸೇರಿ ಏನೆಲ್ಲಾ ಮಾಡಿದ್ದ.

ಗುಂಡಿ ಪಾಯಿಂಟ್​​ ಮಾಡಲು ಅವರು ಮಾಡಿದ್ದ ತಯಾರಿ ಎಂಥದ್ದು ಅನ್ನೋದೆಲ್ಲಾ ಬಯಲಾಗಿದೆ. ಹಾಗಿದ್ರೆ ಧರ್ಮಸ್ಥಳ ಬುರುಡೆ ಪ್ರಕರಣದ ಲೇಟೆಸ್ಟ್​ ಅಪ್​ಡೇಟ್ಸ್​​ ಏನು.? ತನಿಖೆ ಎಲ್ಲಿವರಗೆ ಬಂದಿದೆ ಅನ್ನೋದ್ರ ಕಂಪ್ಲೀಟ್​​ ಡಿಟೇಲ್ಸ್​​ ಇವತ್ತಿನ ಎಫ್​.ಐ.ಆರ್​​. ಈ ಗ್ಯಾಂಗ್​ ಯಾವಾಗ ಬೇಕಾದ್ರೂ ಅರೆಸ್ಟ್​ ಆಗಬಹುದು.. ಅದಕ್ಕೆ ಎಲ್ಲಾ ತಯಾರಿಯನ್ನ SIT ಮಾಡಿಕೊಳ್ತಿದೆ. ಇನ್ನೂ ಇದೇ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಈ ಬುರುಡೆ ಕಹನಿಗೆ ಪೊಲಿಟಿಕಲ್​​ ಫೈಟ್​​​ ಸೇರಿಕೊಂಡಿದ್ದೇಗೆ..? ಷಡ್ಯಂತ್ರ ಅನ್ನೋ ಪದ ಮೊದಲು ಬಳಸಿದ್ದೇ ಡಿಸಿಎಂ ಡಿಕೆಶಿ.  ನಂತರ ಸದನದಲ್ಲಿ ಮಾತಿಗೆ ಮಾತು. ಗೃಹಸಚಿವರಿಂದ ಸಮಾದಾನದ ಉತ್ತರ. ಇದೆಲ್ಲಾ ಆದ ಮೇಲೆ ಈಗ ಧರ್ಮಸ್ಥಳ ಚಲೋ ಕಾರ್ಯಕ್ರಮಗಳು. ನಿನ್ನೆ ಜೆಡಿಎಸ್​​ ಹೋಗಿ ಬಂದ್ರೆ ಇವತ್ತು ಬಿಜೆಪಿಯ ಸರದಿ.

ಸಮಾವೇಷ ಮಾಡ್ತೀವಿ ಅಂತ ಹೋದ ಬಿಜೆಪಿ ನಾಯಕರ ಮಧ್ಯೆ ಒಳಜಗಳವೂ ನಡೆದು ಹೊಯ್ತು. ಇನ್ನೂ ಇವರುಗಳ ಸಮಾವೇಷಕ್ಕೆ ಕಾಂಗ್ರೆಸ್​​ ಕೌಂಟರ್​​. ಒಟ್ಟಿನಲ್ಲಿ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಧರ್ಮಯುದ್ಧದಲ್ಲಿ ರಾಜಕೀಯದಾಟವೂ ನಡೆಯುತ್ತಿದೆ. ಧರ್ಮಸ್ಥಳದ ವಿರುದ್ಧ ಎನ್​ಐಎ ತನಿಖೆಯಾಗಬೇಕು ಅಂತಾ ಪಟ್ಟುಹಿಡಿದಿರೋ ಬಿಜೆಪಿ ಸರಣಿ ಹೋರಾಟ ನಡೆಸುತ್ತಿದ್ರೆ, ಕಾಂಗ್ರೆಸ್​ ಮಾತ್ರ ಎಸ್​ಐಟಿ ತನಿಖೆಯಿಂದಲೇ ಸತ್ಯ ಹೊರಬರಲಿದೆ ಅಂತಾ ಬಿಗಿನಿಲುವು ತಾಳಿದೆ. ಹೀಗಾಗಿ ಕಾಂಗ್ರೆಸ್​-ಬಿಜೆಪಿ ಮಧ್ಯೆ ಧರ್ಮಯುದ್ಧ ತಾರಕಕ್ಕೇರುತ್ತಲೇ ಇದೆ. ಮುಂದೆ ಇದು ಎಲ್ಲಿಗೆ ಹೋಗಿ ನಿಲ್ಲುತ್ತೆ ನೋಡೋಣ.

20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
Read more