ಕುಂತಲ್ಲೆ ಖಾತೆಗೆ ಹಣ, ಉಚಿತ ಬಸ್ ಪ್ರಯಾಣ: ಕಾಂಗ್ರೆಸ್ 5 ಗ್ಯಾರೆಂಟಿ ಯೋಜನೆ ಜಾರಿ!

Jun 2, 2023, 10:53 PM IST

ಕಾಂಗ್ರೆಸ್ ಘೋಷಿಸಿದ ಐದು ಉಚಿತ ಗ್ಯಾರೆಂಟಿ ಯೋಜನೆಯನ್ನು ಹೆಚ್ಚಿನ ಯಾವುದೇ ಷರತ್ತುಗಳಿಲ್ಲದೆ ಸರ್ಕಾರ ಜಾರಿಗೊಳಿಸಿದೆ. ಜೂನ್ 11 ರಿಂದ ಕಾಂಗ್ರೆಸ್ ಉಚಿತ ಯೋಜನೆ ಜಾರಿಗೊಳ್ಳುತ್ತಿದೆ. ಕಾಂಗ್ರೆಸ್ ಉಚಿತ ಗ್ಯಾರೆಂಟಿಗಳ ಪೈಕಿ 10 ಕೆಜಿ ಅನ್ನಭಾಗ್ಯ ಯೋಜನೆ ಜುಲೈ 1 ರಿಂದ ಜಾರಿಯಾಗುತ್ತಿದೆ. ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ 10 ಕೆಜಿ ಉಚಿತ ಅಕ್ಕಿ ಸಿಗಲಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ವಿವರಣೆ ನೀಡಿದ್ದಾರೆ.ಕರ್ನಾಟಕ ವಿಳಾಸದ ಆಧಾರ್ ಕಾರ್ಡ್ ಇದ್ದರೆ ಸಾಕು ಸಾಮಾನ್ಯ ಸಾರಿಗೆ ಬಸ್‌ನಲ್ಲಿ ಮಹಿಳೆಯರಿಗೆ ಸಂಪೂರ್ಣ ಉಚಿತ. ಈ ಯೋಜನೆ ಜೂನ್ 11 ರಿಂದ ಜಾರಿಯಾಗಲಿದೆ. ಎಲ್ಲಾ ಮಹಿಳೆಯರಿಗೆ ಇದು ಅನ್ವಯವಾಗಲಿದೆ.ಕಾಲೇಜು ಮುಗಿಸಿ ಹೊರಬಂದ ಬೆನ್ನಲ್ಲೇ ಅರ್ಜಿ ಹಾಕಲು ಪದವೀಧರರು, ಡಿಪ್ಲೋಮಾ ಕೋರ್ಸ್ ಮುಗಿಸಿದವರಿಗೆ ಅರ್ಹರಾಗಿದ್ದಾರೆ. 2 ವರ್ಷಗಳ ಕಾಲ ನಿರುದ್ಯೋಗಿಗಳಿಗೆ ಈ ಯೋಜನೆಯ ಲಾಭ ಸಿಗಲಿದೆ. ಕಾಂಗ್ರೆಸ್ ಪಂಚ ಗ್ಯಾರೆಂಟಿ ಯೋಜನೆ ಕುರಿತು ವಿವರ ಇಲ್ಲಿದೆ.