ಕರ್ನಾಟಕದಲ್ಲೂ ಹರ್‌ ಘರ್ ತಿರಂಗಾ ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ

Aug 13, 2022, 12:16 PM IST

ಬೆಂಗಳೂರು(ಆ.13):  ರಾಜ್ಯದಲ್ಲೂ ಹರ್‌ ಘರ್ ತಿರಂಗಾ ಅಭಿಯಾನಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಇಂದು(ಶನಿವಾರ) ಚಾಲನೆ ನೀಡಿದ್ದಾರೆ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಿಎಂ ಬೊಮ್ಮಾಯಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ತ್ರಿವರ್ಣ ಧ್ವಜ ಹಿಡಿದು ಸಾವಿರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಸ್ಪೀಕರ್‌ ಕಾಗೇರಿ, ಸಚಿವ ಸುನಿಲ್‌ ಕುಮಾರ್‌ ಭಾಗಿಯಾಗಿದ್ದರು. ಇಂದಿನಿಂದ ಆ.15 ರವರೆಗೆ ಹರ್‌ ಘರ್ ತಿರಂಗಾ ಅಭಿಯಾನ ನಡೆಯಲಿದೆ. ರಾಷ್ಟ್ರಧ್ವಜ ಹಾರಾಟದ ಆಂದೋಲನಕ್ಕೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

India@75: ಕಾಂಗ್ರೆಸ್‌ ನಾಯಕಿಯಾಗಿ ಬ್ರಿಟಿಷರಿಗೆ ಸೆಡ್ಡು ಹೊಡೆದ ಚುನಾಂಘಾಟ್ ಕುಂಞಕಾವಮ್ಮ