Jul 3, 2020, 1:25 PM IST
ಬೆಂಗಳೂರು(ಜು.03): ಆರಂಭದಲ್ಲಿ ಇದ್ದ ಉತ್ಸಾಹ ಇದೀಗ ಇಲ್ಲವಾಗಿದೆ. ಹೌದು, ನಗರದ ಜನತೆ ಬಸ್ ಹತ್ತುವ ಮುನ್ನ ಎಚ್ಚರ ಇರದಿದ್ದರೆ ಮಹಾಮಾರಿ ಕೊರೋನಾ ವೈರಸ್ ತಗುಲುವುದು ಪಕ್ಕಾ ಎಂಬ ವಾತಾವರಣ ನಿರ್ಮಾಣವಾಗಿದೆ. ಬಿಎಂಟಿಸಿ ಬಸ್ನಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಮಾಯವಾಗಿದೆ.
ಕೊರೋನಾತಂಕದ ನಡುವೆಯೇ ಪ್ರತಿಭಟನೆಗಿಳಿದ ಕೊರೋನಾ ವಾರಿಯರ್ಸ್..!
ನಗರದಲ್ಲಿ ದಿನದಿಂದ ಕೋವಿಡ್ ಸೋಂಕು ಏರಿಕೆಯಾಗುತ್ತಲೇ ಇದ್ದರೂ ಅಧಿಕಾರಿಗಳು ಬೇಜವಾಬ್ದಾರಿ ಮೆರೆಯುತ್ತಿದ್ದಾರೆ. ಇದರಿಂದ ಬಸ್ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸುರಕ್ಷತೆಯೇ ಇಲ್ಲವಾಗಿದೆ.