ಮಕ್ಕಳ ಪಾಲಿನ ಜೀವದಾತೆ, ಹಸಿದವರ ಪಾಲಿನ ಅನ್ನದಾತ; ಬಿಗ್ 3 ಹೀರೋಗಳಿವರು

Feb 13, 2021, 1:06 PM IST

ಬೆಂಗಳೂರು (ಫೆ. 13): ನಮ್ಮ ಮಧ್ಯೆಯೇ ಎಲೆಮರೆಯ ಕಾಯಿಯಂತೆ ಎಷ್ಟೋ ಜನ ಸಾಧಕರಿದ್ದಾರೆ. ಅಂತಹ ಸಾಧಕರನ್ನು ಬಿಗ್ 3 ಗುರುತಿಸಿ, ಗೌರವಿಸುತ್ತದೆ. ಇವತ್ತಿನ ಬಿಗ್ 3 ಹೀರೋಗಳು ಶಿವಮೊಗ್ಗದ ಅನಿತಾ ಮೇರಿ, ಚಿಕ್ಕಮಗಳೂರಿನ ಶಶಿ ಪ್ರಸಾದ್, ಚಿಕ್ಕಬಳ್ಳಾಪುರದ ನಗರ ಸಭೆ ಆಯುಕ್ತರು ಲೋಹಿತ್ ಕುಮಾರ್.

ಅನಿತಾ ಮೇರಿ ಮಕ್ಕಳ ಪಾಲಿನ ಜೀವದಾತೆಯಾಗಿದ್ದಾರೆ, ಚಿಕ್ಕಬಳ್ಳಾಪುರದ ಲೋಹಿತ್ ಕುಮಾರ್ ಕಸದಿಂದ ರಸ ಮಾಡಲು ಹೊಸ ಐಡಿಯಾ ಮಾಡಿ ಕಸದ ಸಮಸ್ಯೆಯಿಂದ ಮುಕ್ತಿ ನೀಡಿದ್ದಾರೆ.  ಚಿಕ್ಕಮಗಳೂರಿನ ಶಶಿಪ್ರಸಾದ್ ಹಸಿದವರ ಪಾಲಿನ ಅನ್ನದಾತರಾಗಿದ್ದಾರೆ. ಇವರೆಲ್ಲರ ಸಾಧನೆ ಬಗ್ಗೆ ತಿಳಿಯೋಣ ಬನ್ನಿ...!