ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಅಂತ್ಯಕ್ರಿಯೆ ಸವಾಲಾಗಿದೆ. ಇದೀಗ ಹರಿಶ್ಚಂದ್ರ ಚಿತಾಗಾರದಲ್ಲೂ ಅಂತ್ಯಕ್ರಿಯೆ ಮಾಡುವುದಕ್ಕೆ ಅಕ್ಕಪಕ್ಕದವರು ತಕರಾರು ತೆಗೆದಿದ್ದಾರೆ.
ಬೆಂಗಳೂರು (ಏ. 28): ರಾಜಧಾನಿಯಲ್ಲಿ ಕೊರೊನಾ ಸೋಂಕಿತರ ಅಂತ್ಯಕ್ರಿಯೆ ಸವಾಲಾಗಿದೆ. ಇದೀಗ ಹರಿಶ್ಚಂದ್ರ ಚಿತಾಗಾರದಲ್ಲೂ ಅಂತ್ಯಕ್ರಿಯೆ ಮಾಡುವುದಕ್ಕೆ ಅಕ್ಕಪಕ್ಕದವರು ತಕರಾರು ತೆಗೆದಿದ್ದಾರೆ. ದಯವಿಟ್ಟು ಇಲ್ಲಿ ಅಂತ್ಯಕ್ರಿಯೆ ಮಾಡಬೇಡಿ. ಮೃತದೇಹ ಸುಟ್ಟು ಹೊಗೆ ಬೂದಿ ಮನೆ ಮೇಲೆ ಬೀಳುತ್ತದೆ. ನಮಗೆ ಆರೋಗ್ಯದ ಸಮಸ್ಯೆಯಾಗುತ್ತದೆ ಎಂದು ಹರಿಶ್ಚಂದ್ರ ಘಾಟ್ ಸುತ್ತಲಿನ ನಿವಾಸಿಗಳು ಧರಣಿ ನಡೆಸಿದ್ಧಾರೆ. ಸ್ಥಳಕ್ಕೆ ಪಿಎಸ್ಐ ವಿನೋದ್ ಆಗಮಿಸಿ, ಜನರ ಮನವೊಲಿಸಲು ಪ್ರಯತ್ನಿಸಿದ್ದಾರೆ.