Belagavi Riot: ಮರಾಠಿ ಪುಂಡಾಟಿಕೆ ವಿರುದ್ಧ ಕನ್ನಡಿಗರ ಶಕ್ತಿಪ್ರದರ್ಶನ, ಎಂಇಎಸ್ ನಿಷೇಧಕ್ಕೆ ಜನಾಗ್ರಹ.!

Belagavi Riot: ಮರಾಠಿ ಪುಂಡಾಟಿಕೆ ವಿರುದ್ಧ ಕನ್ನಡಿಗರ ಶಕ್ತಿಪ್ರದರ್ಶನ, ಎಂಇಎಸ್ ನಿಷೇಧಕ್ಕೆ ಜನಾಗ್ರಹ.!

Suvarna News   | Asianet News
Published : Dec 21, 2021, 09:59 AM IST

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರಂಥ (Sangolli Rayanna) ಕರ್ನಾಟಕದ ಐತಿಹಾಸಿಕ ವ್ಯಕ್ತಿಗಳಿಗೆ ಅವಮಾನ ಮಾಡಿದ ಎಂಇಎಸ್‌ (MES) ವಿರುದ್ಧ ರಾಜ್ಯಾದ್ಯಂತ ಜನಾಕ್ರೋಶ ಭುಗಿಲೆದ್ದಿದ್ದು, ವ್ಯಾಪಕ ಪ್ರತಿಭಟನೆ ನಡೆದಿದೆ.

 

ಬೆಂಗಳೂರು (ಡಿ. 21): ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರಂಥ (Sangolli Rayanna) ಕರ್ನಾಟಕದ ಐತಿಹಾಸಿಕ ವ್ಯಕ್ತಿಗಳಿಗೆ ಅವಮಾನ ಮಾಡಿದ ಎಂಇಎಸ್‌ (MES) ವಿರುದ್ಧ ರಾಜ್ಯಾದ್ಯಂತ ಜನಾಕ್ರೋಶ ಭುಗಿಲೆದ್ದಿದ್ದು, ವ್ಯಾಪಕ ಪ್ರತಿಭಟನೆ ನಡೆದಿದೆ.ನಾಡದ್ರೋಹಿ ಎಂಇಎಸ್‌ ನಿಷೇಧಕ್ಕೆ ಭಾರೀ ಜನಾಗ್ರಹ ವ್ಯಕ್ತವಾಗಿದೆ.

ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವಿವಿಧ ಬಣಗಳು ಸೇರಿ ಅನೇಕ ಕನ್ನಡಪರ ಸಂಘಟನೆಗಳು  ಬೃಹತ್‌ ಶಕ್ತಿಪ್ರದರ್ಶನ ನಡೆಸಿದ್ದು, ರಾಜ್ಯಾದ್ಯಂತ ವಿವಿಧ ಸಂಘಟನೆಗಳೂ ಪ್ರತಿಭಟನೆ, ರ್ಯಾಲಿಗಳ ಮೂಲಕ ಎಂಇಎಸ್‌ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿವೆ. ಕನ್ನಡಿಗರ ಸ್ವಾಭಿಮಾನ ಕೆಣಕುತ್ತಿರುವ ಎಂಇಎಸ್‌ ಪುಂಡರನ್ನು ಸದೆಬಡಿಯುವಂತೆ ಸರ್ಕಾರವನ್ನು ಒತ್ತಾಯಿಸಿವೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಾರಿಗೆ ಸಚಿವ ಶ್ರೀರಾಮುಲು ಸೇರಿ ಹಲವು ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಮುಖಂಡರು ಬಹಿರಂಗವಾಗಿಯೇ ಎಂಇಎಸ್‌ ನಿಷೇಧದ ಆಗ್ರಹಕ್ಕೆ ದನಿಗೂಡಿಸಿದರೆ, ಕನ್ನಡಪರ ಹೋರಾಟಗಾರರಾದ ನಾರಾಯಣಗೌಡ, ಪ್ರವೀಣ್‌ ಶೆಟ್ಟಿ, ಶಿವರಾಮೇಗೌಡ ಸೇರಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ನಾಡದ್ರೋಹಿಗಳನ್ನು ನಿಷೇಧಿಸದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

 

26:49ಪೆಟ್ರೋಲ್ ಕರಗುತ್ತಿದೆ.. ಗ್ಯಾಸ್ ಉರಿಯುತ್ತಿದೆ.. ಜನರ ಜೇಬು ಖಾಲಿ.. ಖಾಲಿ: ಸಿಲಿಂಡರ್​​ ಬಾಂಬ್!
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
22:16ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?
21:20ಬಂಡೆಯನ್ನೇ ಅಲುಗಾಡಿಸಿದ ಆ ಮಹಾ ಸವಾಲು! ಗೌಡರ ಕುಟುಂಬಕ್ಕೂ ಬಂಡೆಗೂ ಅದೆಂಥಾ ರಣದ್ವೇಷ? ರಣಚರಿತ್ರೆಯ ರಾಜಕಾರಣ!
21:02ರಾಜಕಾರಣ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದ ಹುಡುಗ, ಹಠದಲ್ಲಿ ಗೆದ್ದೇ ಬಿಟ್ಟ ಛಲಗಾರ ಡಿಕೆ ಶಿವಕುಮಾರ್
Read more