ಬಿಗ್ 3 ಸಾರ್ಥಕತೆ, ಅಜ್ಜಿಯರಿಗೆ ಸಿಕ್ತು ಸೂರು, ಇದರ ಹಿಂದಿರುವವರು ಇವರು..!

ಬಿಗ್ 3 ಸಾರ್ಥಕತೆ, ಅಜ್ಜಿಯರಿಗೆ ಸಿಕ್ತು ಸೂರು, ಇದರ ಹಿಂದಿರುವವರು ಇವರು..!

Published : May 09, 2022, 02:38 PM ISTUpdated : May 09, 2022, 02:45 PM IST

ಹುನಗುಂದ (Hunagunda) ಪಟ್ಟಣದ ಅಂಬೇಡ್ಕರ್ ಕಾಲೋನಿಯಲ್ಲಿ ಸಾಬವ್ವ ಮತ್ತು ಗಂಗವ್ವ ಎನ್ನು ವೃದ್ಧ ಸಹೋದರಿಯರು ಸೂರಿಲ್ಲದೇ ಪರದಾಡುತ್ತಿದ್ದರು. ಭಾರೀ ಮಳೆಯಿಂದಾಗಿ (Flood) ಇರುವ ಮನೆಯೂ ಕುಸಿದು ಬಿದ್ದು, ಶೆಡ್‌ನಲ್ಲಿ ಪರದಾಡುತ್ತಿದ್ದರು. ಕುಟುಂಬಸ್ಥರು, ನೋಡಿಕೊಳ್ಳುವವರಿಲ್ಲ, ಮನೆ ಕಟ್ಟಿಕೊಳ್ಳೋಕೆ ಹಣ ಇಲ್ಲದೇ ಅಸಹಾಯಕರಾಗಿದ್ದರು.

ಬಾಗಲಕೋಟೆ (ಮೇ. 09): ಹುನಗುಂದ (Hunagunda) ಪಟ್ಟಣದ ಅಂಬೇಡ್ಕರ್ ಕಾಲೋನಿಯಲ್ಲಿ ಸಾಬವ್ವ ಮತ್ತು ಗಂಗವ್ವ ಎನ್ನು ವೃದ್ಧ ಸಹೋದರಿಯರು ಸೂರಿಲ್ಲದೇ ಪರದಾಡುತ್ತಿದ್ದರು. ಭಾರೀ ಮಳೆಯಿಂದಾಗಿ (Flood) ಇರುವ ಮನೆಯೂ ಕುಸಿದು ಬಿದ್ದು, ಶೆಡ್‌ನಲ್ಲಿ ಪರದಾಡುತ್ತಿದ್ದರು. ಕುಟುಂಬಸ್ಥರು, ನೋಡಿಕೊಳ್ಳುವವರಿಲ್ಲ, ಮನೆ ಕಟ್ಟಿಕೊಳ್ಳೋಕೆ ಹಣ ಇಲ್ಲದೇ ಅಸಹಾಯಕರಾಗಿದ್ದರು. ಇವರ ಕಷ್ಟವನ್ನು ಗುರುತಿಸಿ ಆ ಆ ವೃದ್ಧ ಸಹೋದರಿಯರ ಜೊತೆ ಅಂದು ಏಷ್ಯಾನೆಟ್ ಸುವರ್ಣ ನ್ಯೂಸ್ ನಿಂತಿತ್ತು. ಬಿಗ್ 3 (Big 3) ವರದಿ ಪ್ರಸಾರ ಮಾಡಿತ್ತು. 

ಕೂಡಲೇ ಸ್ಥಳೀಯ ಪುರಸಭೆ ಅಧಿಕಾರಗಳು ದೌಡಾಯಿಸಿ ತಾತ್ಕಾಲಿಕವಾಗಿ ಇರುವುದಕ್ಕೆ ವ್ಯವಸ್ಥೆ ಮಾಡಿಕೊಟ್ಟರು. ಮುಂದಿನ ದಿನಗಳಲ್ಲಿ ಮನೆ ಕಟ್ಟಿಕೊಡುವ ಭರವಸೆ ನೀಡಿದರು. ಅಜ್ಜಿಯರಿಗೆ ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಇರುವುದಕ್ಕೆ ವ್ಯವಸ್ಥೆ ಮಾಡಿಕೊಡಲಾಗಿತ್ತು. ಪುರಸಭೆ ಅಧ್ಯಕ್ಷ ಶರಣು ಬೆಲ್ಲದ್ ನೇತೃತ್ವದಲ್ಲಿ ಅಜ್ಜಿಯರಿಗೆ ಮನೆ ನಿರ್ಮಾಣ ಮಾಡಿ ಕೊಡಲಾಯಿತು. ಆಸ್ಪತ್ರೆಯಿಂದ ಬಂದ ಅಜ್ಜಿಯರು ನೂತನ ಮನೆ ನೋಡಿ ಭಾವುಕರಾದರು. ಪುರಸಭೆ ಸಿಬ್ಬಂದಿಗಳಿಗೆ ಅಜ್ಜಿಯರು ಕೈ ಮುಗಿದು, ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಆಶೀರ್ವದಿಸಿದರು. ಬಿಗ್‌3 ಯ ಈ ಸಾರ್ಥಕ ಕೆಲಸದ ಹಿಂದೆ ಹತ್ತಾರು ಕೈಗಳಿವೆ. ಅವರೆಲ್ಲರಿಗೂ ವಿಶೇಷ ಧನ್ಯವಾದಗಳು..!

20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!