ACB Raid: 28 ಮನೆಗಳು , 16 ಸೈಟ್‌ಗಳು, 31.20 ಕೋಟಿ ಮೌಲ್ಯದ ಆಸ್ತಿ, ನಿವೃತ್ತ ಅಧಿಕಾರಿ ಅರೆಸ್ಟ್‌

ACB Raid: 28 ಮನೆಗಳು , 16 ಸೈಟ್‌ಗಳು, 31.20 ಕೋಟಿ ಮೌಲ್ಯದ ಆಸ್ತಿ, ನಿವೃತ್ತ ಅಧಿಕಾರಿ ಅರೆಸ್ಟ್‌

Suvarna News   | Asianet News
Published : Nov 29, 2021, 05:35 PM IST

- ಅಕ್ರಮವಾಗಿ 28 ಮನೆ, 16 ಸೈಟ್‌ ಸಂಪಾದಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ ನಿರ್ಮಿತಿ ಯೋಜನಾ ಮಾಜಿ ನಿರ್ದೇಶಕ

- ಬೆಂಗಳೂರು ಸುತ್ತಮುತ್ತ ಅಕ್ರಮವಾಗಿ ಆಸ್ತಿ ಸಂಪಾದನೆ

- ನಿವೃತ್ತ ಅಧಿಕಾರಿ ವಾಸುದೇವ್ ಬಂಧನ

ಬೆಂಗಳೂರು (ನ. 29):  ನಗರದ ಸುತ್ತಮುತ್ತ 28 ಮನೆಗಳು ಹಾಗೂ 16 ನಿವೇಶನಗಳು ಸೇರಿದಂತೆ ಅಕ್ರಮವಾಗಿ .31.20 ಕೋಟಿ ಮೌಲ್ಯದ ಆಸ್ತಿ ಸಂಪಾದನೆ ಮಾಡಿ ಸಿಕ್ಕಿಬಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ (Bengaluru Rural) ನಿರ್ಮಿತಿ ಕೇಂದ್ರದ ಮಾಜಿ ಯೋಜನಾ ನಿರ್ದೇಶಕ ಆರ್‌.ಎನ್‌.ವಾಸುದೇವ್‌ (RN Vasudev) ಅವರನ್ನು ಎಸಿಬಿ (ACB) ಬಂಧಿಸಿದೆ. 

ನಾಲ್ಕು ದಿನಗಳ ಹಿಂದೆ ಅವರ ಅಕ್ರಮ ‘ಸಂಪತ್ತಿನ ಗಣಿ’ ಮೇಲೆ ದಾಳಿ ನಡೆಸಿದ್ದ ಎಸಿಬಿ, ವಾಸುದೇವ್‌ ಬಳಿ ಆದಾಯಕ್ಕಿಂತ ಶೇ. 1434 ರಷ್ಟುಅಧಿಕ ಅಕ್ರಮ ಸಂಪತ್ತು ಪತ್ತೆ ಹಚ್ಚಿತ್ತು. ಆ ಬಳಿಕ ವಾಸುದೇವ್‌ ಬಳಿ ಬೆಂಗಳೂರಿನಲ್ಲಿರುವ ಆಸ್ತಿಯಲ್ಲದೆ ರಾಮನಗರ (Ramanagar) ಜಿಲ್ಲೆ ಮಾಗಡಿ ತಾಲೂಕಿನ ಗೊಲ್ಲರಪಾಳ್ಯದಲ್ಲಿ 6.20 ಎಕರೆ ಹಾಗೂ ರಾಮನಗರ ತಾಲೂಕಿನ ಫಾಲಬೋವಿದೊಡ್ಡಿ ಗ್ರಾಮದಲ್ಲಿ 10 ಗುಂಟೆ ಜಾಗ ಪುತ್ರನ ಹೆಸರಿನಲ್ಲಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೆಂಗೇರಿ ಉಪ ನಗರ, ಮಲ್ಲೇಶ್ವರ, ನೆಲಮಂಗಲದ ಸೋಂಪುರ (ದಾಬಸಪೇಟೆ), ಅರ್ಕಾವತಿ ಬಡಾವಣೆ, ಯಲಹಂಕ ಉಪನಗರ, ವಿಶ್ವೇಶ್ವರಯ್ಯ ಬಡಾವಣೆ ಹಾಗೂ ಜ್ಞಾನಭಾರತಿಗಳಲ್ಲಿ ವಾಸುದೇವ್‌ ಅವರು ಸಂಪಾದಿಸಿದ್ದ 16 ನಿವೇಶನಗಳು ಪತ್ತೆಯಾಗಿವೆ. ಅಬ್ಬಬ್ಬಾ...ಕೋಟಿ ಕುಬೇರ ಅಂದ್ರೆ ಇವರೇ ನೋಡಿ. 

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
Read more