BIG 3: ಮಾಜಿ ಪೈಲ್ವಾನರಿಗಿಲ್ಲ ಮಾಶಾಸನ, ಕೇಳೋರಿಲ್ಲ ಅವ್ರ ಗೋಳನ್ನ!

BIG 3: ಮಾಜಿ ಪೈಲ್ವಾನರಿಗಿಲ್ಲ ಮಾಶಾಸನ, ಕೇಳೋರಿಲ್ಲ ಅವ್ರ ಗೋಳನ್ನ!

Published : Jan 05, 2023, 03:52 PM IST

ಗದಗ ಜಿಲ್ಲೆಯ ಅಂದಾಜು 120 ಮಾಜಿ ಪೈಲ್ವಾನರಿಗೆ 6 ತಿಂಗ ಳಿಂದ ಮಾಸಾಶನ ನೀಡಿಲ್ಲ. ಕೆಲ ಕಬ್ಬಡ್ಡಿ ಆಟಗಾರರಿಗೂ ಬರಬೇಕಾಗಿರೋ ಹಣ ಬಂದಿಲ್ಲ.. ಹೀಗಾಗಿ ಭಾರತೀಯ ಶೈಲಿ ಕುಸ್ತಿ ಪೈಲ್ವಾನರ ಸಂಘದ ಸದಸ್ಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸ್ತಿದಾರೆ.

ಗದಗ(ಜ.05) ಅವರೆಲ್ಲಾ ಯೌವ್ವನದಲ್ಲಿ ಜಟ್ಟಿಗಳನ್ನ ಚಿತ್ ಮಾಡಿದವರು. ಕುಸ್ತಿ ಕಣದಲ್ಲಿ ತೊಡೆತಟ್ಟಿ ಸೈ ಎನಿಸಿಕೊಂಡವರು. ಚಿನ್ನ, ಬೆಳ್ಳಿ, ಕಂಚು ಪದಕಗಳನ್ನ ಮುಡಿಗೇರಿಸಿಕೊಂಡವರು.ಕುದಿ ಯೌವ್ವನದಲ್ಲಿ ಅಬ್ಬರಿಸಿದ್ದ ತೋಳುಗಳು ಈಗ ದುರ್ಬಲವಾಗಿವೆ. ನಾವು ಇದ್ದೀವಿ ಅಂತಾ ಭರವಸೆ ನೀಡಿದ್ದ ಸರ್ಕಾರವೂ ಈಗ ಸೈಲೆಂಟ್ ಆಗಿದೆ.. ಭವಿಷ್ಯದ ಭರವಸೆಯೇ ಇಲ್ಲದೇ ಆ ಜಟ್ಟಿಗಳು ಬೀದಿ ಅಲಿಯುವ ಪರಿಸ್ಥಿತಿ ಎದುರಾಗಿದೆ. ಏನ್ ಕಾರಣ ಗೊತ್ತಾ..? ಈ ರಿಪೋರ್ಟ್ ನೋಡಿ.... 

ಹೀಗೇ ತಲೆಗೆ ಪೇಟ. ಮುಖದಲ್ಲಿ ನೋವು, ಆಕ್ರೋಶ.. ತೋಳಲ್ಲಿ ಮೊದಲಿನ ಬಲ ಇಲ್ಲದಿದ್ರೂ ಜೀವನ ಉತ್ಸಾಹ ಕುಂದಿಲ್ಲ.. ನಮ್ಮ ಹಕ್ಕು ನಮಗೆ ಕೊಡಿ ಅನ್ನೋ ಹೋರಾಟ ಬಿಟ್ಟಿಲ್ಲ. ಯೆಸ್, ಹೀಗೆ ಬೀದಿಯಲ್ಲಿ ಕುಸ್ತಿ ಆಡ್ತಿರೋ ಇವ್ರೆಲ್ಲ ಮಾಜಿ ಪೈಲ್ವಾನರು..ತಮಗೆ ಬರಬೇಕಿದ್ದ ಮಾಸಾಸನ ಬಂದಿಲ್ಲ ಅಂತಾ ರೊಚ್ಚಿಗೆದ್ದಿರೋ ಇವ್ರೆಲ್ಲ ಜಿಲ್ಲಾಧಿಕಾರಿಗಳ ಕಚೇರಿ ಅಂಗಳದಲ್ಲೇ ಕುಸ್ತಿಗೆ ಇಳಿದಿದಾರೆ.ಕೈಯಲ್ಲಿ ಶಕ್ತಿ ಇದ್ದಾಗ ಕುಸ್ತಿ ಆಡಿ ಜನರನ್ನ ರಂಜಿಸಿದ್ವಿ.ಈಗ ಸರ್ಕಾರದೊಂದಿಗೆ ಕುಸ್ತಿ ಆಡಿ,ಮಾಶಾಸನ ಪಡೀಬೇಕು ಅನ್ನೋ ಅಳಲು ಪೈಲ್ವಾನರನ್ನ ಕಾಡ್ತಿದೆ.

ಅಷ್ಟಕ್ಕೂ, ಈ ದೃಶ್ಯ ಕಂಡು  ಬಂದಿದ್ದು ಗದಗ ಜಿಲ್ಲೆಯಲ್ಲಿ. ಗದಗ ಜಿಲ್ಲೆಯ ಅಂದಾಜು 120 ಮಾಜಿ ಪೈಲ್ವಾನರಿಗೆ 6 ತಿಂಗ ಳಿಂದ ಮಾಸಾಶನ ನೀಡಿಲ್ಲ. ಕೆಲ ಕಬ್ಬಡ್ಡಿ ಆಟಗಾರರಿಗೂ ಬರಬೇಕಾಗಿರೋ ಹಣ ಬಂದಿಲ್ಲ.. ಹೀಗಾಗಿ ಭಾರತೀಯ ಶೈಲಿ ಕುಸ್ತಿ ಪೈಲ್ವಾನರ ಸಂಘದ ಸದಸ್ಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸ್ತಿದಾರೆ.

ಈ ವಿಚಾರವನ್ನು ಕೈಗೆತ್ತಿಕೊಂಡ ಬಿಗ್ 3 ತಂಡವು ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಬಿಗ್‌ 3 ವರದಿ ಬೆನ್ನಲ್ಲೇ ಗದಗ ಜಿಲ್ಲಾಡಳಿತ ಕೂಡಾ ಎಚ್ಚೆತ್ತುಕೊಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
 

01:50ಟ್ರೋಫಿ ಕೊಡಲು ಹಟ ಹಿಡಿದ ನಖ್ವಿಗೆ ಶಾಕ್ ಕೊಡಲು ಬಿಸಿಸಿಐ ಮಾಸ್ಟರ್ ಪ್ಲಾನ್
01:58ಮುಂದುವರಿದ ಏಷ್ಯಾ ಕಪ್‌ ಟ್ರೋಫಿ ಹಸ್ತಾಂತರ ರಗಳೆ! ಕ್ಷಮೆ ಕೇಳಿದ ನಖ್ವಿ ಹೊಸ ಕ್ಯಾತೆ
02:08ಪಾಕ್‌ಗೆ ಏಷ್ಯಾಕಪ್‌ನಲ್ಲಿ ಭಾರೀ ಮುಖಭಂಗ! ಐಸಿಸಿ ವಾರ್ನಿಂಗ್‌ಗೆ ಪಾಕ್ ಕಂಗಾಲು
03:5611 ವರ್ಷದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಉತ್ತೇಜನ: ಮೋದಿ ಸರ್ಕಾರ ಮಾಡಿದ್ದೇನು?
02:18ದುಬೈನಲ್ಲಿಂದು ಪಾಕ್ ಮೇಲೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
02:04Asia Cup 2025: ಎಂಟು ತಂಡಗಳ ಪೈಕಿ ಮೂವರು ಟೀಂ ಔಟ್, ಸೂಪರ್ 4 ಹಂತಕ್ಕೇರೋರು ಯಾರು?
03:08Asia Cup 2025: ಹಲವು ಗಾಸಿಪ್‌ಗೆ ಬ್ರೇಕ್ ಹಾಕಿದ ಸೂರ್ಯಕುಮಾರ್ ಯಾದವ್!
03:12ಯುಎಇ ಎದುರಿನ ಪಂದ್ಯಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಯಾರು?
03:25ಹಲವು ಅಪರೂಪದ ವಿಶೇಷಗಳಿಗೆ ಸಾಕ್ಷಿಯಾಗ್ತಿದೆ ಈ ಬಾರಿಯ ಏಷ್ಯಾಕಪ್!
03:26ಏಷ್ಯಾಕಪ್ 2025 ಟೂರ್ನಿಗೂ ಮುನ್ನ ಸಾಲು ಸಾಲು ಕಾಂಟ್ರೋವರ್ಸಿ!
Read more