ಮಾಜಿ ಸಿಎಂ ಯಡಿಯೂರಪ್ಪ ಪುತ್ರನ ವಿರುದ್ಧ ವಾಮಾಚಾರ: ಪುನುಗುಬೆಕ್ಕು ಕೊಂದು ಹೂತಿಟ್ಟ ಕೊಳ್ಳೇಗಾಲ ಮಾಂತ್ರಿಕರು

ಮಾಜಿ ಸಿಎಂ ಯಡಿಯೂರಪ್ಪ ಪುತ್ರನ ವಿರುದ್ಧ ವಾಮಾಚಾರ: ಪುನುಗುಬೆಕ್ಕು ಕೊಂದು ಹೂತಿಟ್ಟ ಕೊಳ್ಳೇಗಾಲ ಮಾಂತ್ರಿಕರು

Published : May 15, 2023, 06:00 PM IST

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಶಾಸಕರಾಗಿ ಆಯ್ಕೆಯಾಗಬಾರದೆಂದು ಅವರ ವಿರುದ್ಧ ಕೊಳ್ಳೇಗಾಲದಿಂದ ಮಾಂತ್ರಿಕರನ್ನು ಕರೆಸಿ ವಾಮಾಚಾರ ಮಾಡಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.

ಶಿವಮೊಗ್ಗ (ಮೇ 15): ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಶಾಸಕರಾಗಿ ಆಯ್ಕೆಯಾಗಬಾರದೆಂದು ಅವರ ವಿರುದ್ಧ ಕೊಳ್ಳೇಗಾಲದಿಂದ ಮಾಂತ್ರಿಕರನ್ನು ಕರೆಸಿ ವಾಮಾಚಾರ ಮಾಡಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿಕಾರಿಪುರದಲ್ಲಿ ಬಿ.ವೈ. ವಿಜಯೇಂದ್ರ ಗೆಲ್ಲದಂತೆ ದುಷ್ಟ ಶಕ್ತಿಗಳಿಂದ ವಾಮಾಚಾರ ಮಾಡಲಾಗಿದೆ. ನಮ್ಮ ತೋಟದ ಮನೆಯಲ್ಲಿ ಪುನುಗುಬೆಕ್ಕು ಬಳಸಿ ವಾಮಾಚಾರ ಮಾಡಲಾಗಿದೆ. ತೋಟದಲ್ಲಿ ವಾಮಾಚಾರ ನಡೆಸಿ ಪುನುಗು ಬೆಕ್ಕನ್ನ ಹೂತು ಹಾಕಿದ್ದಾರೆ. ಕೊಳ್ಳೆಗಾಲದಂತಹ ಭಾಗಗಳಲ್ಲಿ ಈ ಬೆಕ್ಕುಗಳನ್ನು ವಾಮಾಚಾರಕ್ಕಾಗಿ ಬಳಕೆ ಮಾಡಲಾಗುತ್ತಿದೆ. ವಾಮಾಚಾರ ನಡೆದ ಬಗ್ಗೆ ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೇವೆ. ಶಿಕಾರಿಪುರ ತಾಲೂಕಿನ ಬಂಡಿಬೈರನಹಳ್ಳಿ ಮಜಿರೆ ಸಿದ್ದಾಪುರ ಗ್ರಾಮದಲ್ಲಿರುವ ಸರ್ವೆನಂಬರ್ 36 ರಲ್ಲಿರುವ ಅಡಿಕೆ ತೋಟದಲ್ಲಿ ನಡೆದಿದ್ದ ವಾಮಾಚಾರ ಮಾಡಿದ್ದಾರೆ ಎಂದು ಹೇಳಿದರು.

ತೋಟದಲ್ಲಿ ವಾಮಾಚಾರ ಮಾಡಿದವರ ವಿರುದ್ಧ ದೂರು: ರಾಜ್ಯದಲ್ಲಿ ಕಾಡುಪ್ರಾಣಿಗಳನ್ನು ಕೊಲ್ಲುವುದಕ್ಕೆ ಅವಕಾಶವಿಲ್ಲ. ಕಾಡು ಪ್ರಾಣಿಯನ್ನ ಕೊಂದು ವಾಮಾಚಾರ ನಡೆಸಲಾಗಿದೆ ಎಂದು ತೋಟ ನೋಡಿಕೊಳ್ಳುವ ಎಸ್.ಕೆ. ರಮೇಶ್ ಅವರು ದೂರು ದಾಖಲು ಮಾಡಿದ್ದಾರೆ. ಶಿಕಾರಿಪುರ ಕ್ಷೇತ್ರದ ಚುನಾವಣೆ ಹಿನ್ನಲೆಯಲ್ಲಿ ಮತದಾನ ನಡೆದ ನಡೆದ ಮೇ 11 ರಂದು ವಾಮಾಚಾರ ನಡೆದಿರುವ ಬಗ್ಗೆ ರಮೇಶ್ ಗಮನಕ್ಕೆ ಬಂದಿದೆ. ಮೇ 12 ರಂದು ದೂರು ದಾಖಲಿಸಿ ತನಿಖೆ ಮಾಡಲು ಕೋರಿದ್ದಾರೆ. 

06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
25:08ಕಾಲೇಜಿಗೆ ಹೋದ ಚಂದನದ ಗೊಂಬೆಯಂಥಾ ಮಗಳು ಶವವಾಗಿ ಪತ್ತೆ! ಕೈ-ಹಿಡಿದು ಕಾಲುವೆಗೆ ಹಾರಿದವ ಬದುಕಿಬಂದ!
05:40ಶಿವಮೊಗ್ಗದಲ್ಲಿ ಅಮಾನವೀಯ ಘಟನೆ: 67 ವರ್ಷದ ವೃದ್ಧೆಯನ್ನು ಮರಕ್ಕೆ ಕಟ್ಟಿ ಹಲ್ಲೆ
03:03ಭದ್ರಾವತಿಯಲ್ಲಿ ರೌಡಿಗಳ ಮಚ್ಚಿನ ಆರ್ಭಟ: ದೇವಾಲಯದಲ್ಲಿ ಮಚ್ಚಿಗೆ ಪೂಜೆ ಮಾಡಿಸಿ ಕೊಲೆಗೆ ಸ್ಕೆಚ್!
03:58ರಿಪಬ್ಲಿಕ್ ಆಫ್ ಭದ್ರಾವತಿಯ ಭಾಗ-3: ಅಮಾಯಕರ ಮೇಲೆ ಪೊಲೀಸರ ಕ್ರೌರ್ಯ
04:40ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅಧೋಗತಿಗಿಳಿದಿದ್ಯಾ! ನಡುರಸ್ತೆಯಲ್ಲೇ ಕಾನೂನಿನ ಅಪಹಾಸ್ಯ!
41:28ಶಾಸಕನ ಮಗನ ದರ್ಬಾರ್, ಅಕ್ರಮ ಮರಳು ದಂಧೆ ತಡೆಯಲು ಹೋದ ಮಹಿಳಾ ಅಧಿಕಾರಿಗೆ ನಿಂದನೆ
04:34ಶಿವಮೊಗ್ಗದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಗೆ ಬೇಸತ್ತ ಆಟೋ ಚಾಲಕನಿಂದ ಆತ್ಮಹತ್ಯೆ ಯತ್ನ!
02:10Uttara Kannada:ಸಿದ್ಧಾಪುರದಲ್ಲಿ ಹಿಟ್ ಆ್ಯಂಡ್ ರನ್; ಅಯ್ಯಪ್ಪ ಭಕ್ತರ ಮೇಲೆ ಹರಿದ ಕಾರು, ಓರ್ವ ಮಹಿಳೆ ಸಾವು
Read more