ಸರ್ಜರಿ ಅಗತ್ಯ.. ಆಪರೇಷನ್ ಆಗದಿದ್ದರೆ ಭವಿಷ್ಯ ಅಪಾಯ: ದರ್ಶನ್‌ಗೆ ಸೋಮವಾರ ಸಂಕಟ!

ಸರ್ಜರಿ ಅಗತ್ಯ.. ಆಪರೇಷನ್ ಆಗದಿದ್ದರೆ ಭವಿಷ್ಯ ಅಪಾಯ: ದರ್ಶನ್‌ಗೆ ಸೋಮವಾರ ಸಂಕಟ!

Published : Nov 17, 2024, 04:34 PM IST

ದರ್ಶನ್ ದಿಕ್ಕೆಟ್ಟು ಕುಂತಿದ್ದಾನೆ. ಮುಂದೇನು ಕಾದಿದೆ ಎನ್ನುವ ಆತಂಕದಲ್ಲಿದ್ದಾನೆ. ಒಂದೇ ಸಲಕ್ಕೆ ಮೂರು ಮೂರು ಕಂಟಕ ಕಣ್ಣೆದುರಿಗೆ ಕುಣಿಯುತ್ತಿವೆ. ಅಲ್ಲಿಂದ ಪಾರಾದರೆ ಇದು...ಇಲ್ಲಿಂದ ಪಾರಾದರೆ ಅದು... ಮುತ್ತಿಕೊಳ್ಳುತ್ತಿದೆ. 

ದರ್ಶನ್ ದಿಕ್ಕೆಟ್ಟು ಕುಂತಿದ್ದಾನೆ. ಮುಂದೇನು ಕಾದಿದೆ ಎನ್ನುವ ಆತಂಕದಲ್ಲಿದ್ದಾನೆ. ಒಂದೇ ಸಲಕ್ಕೆ ಮೂರು ಮೂರು ಕಂಟಕ ಕಣ್ಣೆದುರಿಗೆ ಕುಣಿಯುತ್ತಿವೆ. ಅಲ್ಲಿಂದ ಪಾರಾದರೆ ಇದು...ಇಲ್ಲಿಂದ ಪಾರಾದರೆ ಅದು... ಮುತ್ತಿಕೊಳ್ಳುತ್ತಿದೆ. ಕಾರಣ ವಕೀಲರು ಹಾಗೂ ಪೊಲೀಸರ ಜಂಟಿ ಕಾರ್ಯಾಚರಣೆ. ಏನಾಗಲಿದೆ ದರ್ಶನ್ ಮಧ್ಯಂತರ ಜಾಮೀನು ? ಸರ್ಜರಿ ಮಾಡಿಸಿಕೊಂಡು ಪಾರಾಗುತ್ತಾನಾ ದಾಸ ? ಸರ್ಜರಿಯಾದರೆ ಭವಿಷ್ಯ ಕರಾಳ ಯಾಕಾಗಲಿದೆ ? ಆ ಸೂಪರ್ ಎಕ್ಸ್ಕ್ಲೂಸಿವ್ ಸ್ಟೋರಿ ನಿಮ್ಮ ಮುಂದೆ. ದನ್ನೇ ನೋಡಿ ವಿಧಿಯಾಟ. ನಾವು ಬಯಸೋದು ಒಂದು...ಆಗೋದೇ ಇನ್ನೊಂದು. ಏನೋ ಮಾಡಲು ಹೋಗಿ ಇನ್ನೇನೊ ಮಾಡಿಕೊಂಡನಾ ದಾಸ ? ಹೇಗಾದರೂ ಜೈಲಿನಿಂದ ಪಾರಾದರೆ ಸಾಕು ಎನ್ನುವ ಹಠದಲ್ಲಿ ಹುದುಲಿಗೆ ಬಿದ್ದನಾ ? 

ಈತನ ನವರಂಗಿ ಆಟಕ್ಕೆ ವಕೀಲರು ಹಾಗೂ ಪೊಲೀಸರು ಯಾವ ರೀತಿ ನಾಕಾಬಂದಿ ಹಾಕುತ್ತಿದ್ದಾರೆ ? ಇದಕ್ಕೆಲ್ಲ ಒಂದೊದೇ ಉತ್ತರ ಸಿಗುತ್ತಿದೆ. ಸದ್ಯಕ್ಕೆ ಬಿಜಿಎಸ್ ಆಸ್ಪತ್ರೆ ಮೇಲೆ ಮಲಗಿರುವ ದಚ್ಚು ಕಣ್ಣಲ್ಲಿ ಕವಡೆ ಹಾಕಿ ಪವಡಿಸಿದ್ದಾನೆ ಶನಿದೇವ. ಮಧ್ಯಂತರ ಜಾಮೀನು. ಹೈ ಕೋರ್ಟ್ ಅಸ್ತು ಎಂದಿತು. ಅದಕ್ಕೆ ಕೊಟ್ಟ ಕಾರಣಗಳನ್ನು ಕೇಳಿ ಒಪ್ಪಿಕೊಂಡಿತು. ಬಳ್ಳಾರಿ ಜೈಲಿನಲ್ಲಿದ್ದ ದರ್ಶನ್‌ಗೆ ಬೆನ್ನು ನೋವು ತೀವ್ರವಾಗಿದೆ. ಅದಕ್ಕೆ ಆಪರೇಶನ್ ಅಗತ್ಯ. ತಕ್ಷಣ ಸರ್ಜರಿ ಮಾಡಿಸಿಕೊಳ್ಳದಿದ್ದರೆ ಆತನ ಭವಿಷ್ಯಕ್ಕೆ ಬರಗಾಲ ಕಾಲಿಡುತ್ತದೆ. ಲಕ್ವಾ ಹೊಡೆದು ಕೊನೇವರೆಗೆ ಹಾಸಿಗೆ ಮೇಲೆ ಅಂಗಾತ ಮಲಗಬೇಕಾಗುತ್ತದೆ. 

ಬಳ್ಳಾರಿ ಆಸ್ಪತ್ರೆಯಲ್ಲಿ ಅದು ಸಾಧ್ಯ ಇಲ್ಲ. ಹೀಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕಳಿಸಿ...ದಚ್ಚು ವಕೀಲರು ಮನವಿ ಮಾಡಿಕೊಂಡಿದ್ದರು. ಹೈ ಕೋರ್ಟ್ ತಥಾಸ್ತು ಎಂದಿತು. ಆ ಕ್ಷಣ ದಾಸ ಬುಳುಬುಳು ನಕ್ಕುಬಿಡಬೇಕಾ?. ಬೆಂಗಳೂರಿಗೆ ಕಾಲಿಟ್ಟು ಹನ್ನೆರಡು ದಿನ. ಬಿಜಿಎಸ್ ಆಸ್ಪತ್ರೆಯಲ್ಲಿ ಮಲಗಿದ್ದಾನೆ. ಹತ್ತು ದಿನದಿಂದ ಫಿಸಿಯೋಥೆರಪಿ ನಡೆಯುತ್ತಿದೆ. ಆದರೆ ಸರ್ಜರಿ ಮಾತೇ ಆಡುತ್ತಿಲ್ಲ ವೈದ್ಯರು. ಫಿಸಿಯೋಥೆರಪಿ ಹಾಗೂ ಮಾತ್ರೆಗಳಿಂದ ಗುಣ ಪಡಿಸಿ ಅನ್ನೋದು ದಾಸನ ವಾದ. ಒತ್ತಡಕ್ಕೆ ಮಣಿದೋ...ಇನ್ಯಾವುದಕ್ಕೋ ಕುಣಿದೋ...ವೈದ್ಯರು ಹತ್ತು ದಿನಗಳಿಂದ ಅದೇ ರಾಗ ಅದೇ ಹಾಡಿಗೆ ಕೋರಸ್ ಬಾರಿಸುತ್ತಿದ್ದಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸಮಯವನ್ನು ಕೊಲ್ಲುತ್ತಾ...ದಿನ ಕಳೆಯೋದು.

ಕೊನೆಗೆ ಖಾಯಂ ಜಾಮೀನು ಪಡೆದು ಶೆಡ್‌ನಲ್ಲಿ ಮತ್ತೆ ಟೆಂಟ್ ಹಾಕೋದು..ಇದು ಅಸಲಿ ಅಜೆಂಡಾನಾ? ಇಷ್ಟು ದಿನ ಆಡಿದ ನವರಂಗಿ ಆಟಕ್ಕೆ ಫುಲ್‌ಸ್ಟಾಪ್ ಬೀಳಲಿದೆ. ಕಾರಣ ಖಾಕಿ ಪಡೆ ಮೈ ಕೊಡವಿ ಎದ್ದು ನಿಂತಿದೆ. ಜಾಮೀನು ಸಿಕ್ಕ ದಿನವೇ ಪೊಲೀಸ್ ಇಲಾಖೆ ಗೃಹ ಇಲಾಖೆಗೆ ಪತ್ರ ಬರೆದಿತ್ತು. `ಈ ಜಾಮೀನಿನ ವಿರುದ್ಧ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಲು ಕೇಳಿಕೊಂಡಿತ್ತು. ಆದರೆ ಅಲ್ಲಿಂದ ಕೆಮ್ಮುವ ಸದ್ದು ಕೇಳಿರಲಿಲ್ಲ. ಎರಡು ದಿನದ ಹಿಂದೆ ಕೊನೆಗೂ ಗೃಹ ಮಂತ್ರಿ ಪರಮೇಶ್ವರ್ ಗುಡುಗಿದರು. ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ನಮ್ಮದೇನೂ ಅಭ್ಯಂತರ ಇಲ್ಲ. 

24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್