777 ಚಾರ್ಲಿಗೆ ಸಿಕ್ತು ಮುಖ್ಯಮಂತ್ರಿಗಳ ಬಲ: ರಕ್ಷಿತ್-ಚಾರ್ಲಿಗೆ ಜೈ ಎಂದ ಸಿಎಂ, ಸಚಿವರು!

777 ಚಾರ್ಲಿಗೆ ಸಿಕ್ತು ಮುಖ್ಯಮಂತ್ರಿಗಳ ಬಲ: ರಕ್ಷಿತ್-ಚಾರ್ಲಿಗೆ ಜೈ ಎಂದ ಸಿಎಂ, ಸಚಿವರು!

Published : Jun 15, 2022, 06:06 PM ISTUpdated : Jun 15, 2022, 06:17 PM IST

'777 ಚಾರ್ಲಿ' ಸಿನಿಮಾ ಪ್ರತಿಯೊಬ್ಬ ಸಿನಿ ಪ್ರೇಕ್ಷಕರ ಮನ ಮುಟ್ಟುತ್ತಿದೆ. ರಕ್ಷಿತ್ ಶೆಟ್ಟಿಯ ನಾಯಿ ಕಥೆ ನೋಡಿ ನಕ್ಕು-ಅತ್ತು ಥಿಯೇಟರ್ನಿಂದ ಹೊರ ಬರುತ್ತಿದ್ದಾರೆ. ಈ ಸಿನಿಮಾ ನೋಡ್ಲೇಬೇಕು ಅಂತ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡ ಥಿಯೇಟರ್ಗೆ ಓಡೋಡಿ ಬಂದಿದ್ರು.

'777 ಚಾರ್ಲಿ' (777 Charlie) ಸಿನಿಮಾ ಪ್ರತಿಯೊಬ್ಬ ಸಿನಿ ಪ್ರೇಕ್ಷಕರ ಮನ ಮುಟ್ಟುತ್ತಿದೆ. ರಕ್ಷಿತ್ ಶೆಟ್ಟಿಯ (Rakshit Shetty) ನಾಯಿ ಕಥೆ ನೋಡಿ ನಕ್ಕು-ಅತ್ತು ಥಿಯೇಟರ್ನಿಂದ ಹೊರ ಬರುತ್ತಿದ್ದಾರೆ. ಈ ಸಿನಿಮಾ ನೋಡ್ಲೇಬೇಕು ಅಂತ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಕೂಡ ಥಿಯೇಟರ್ಗೆ ಓಡೋಡಿ ಬಂದಿದ್ರು. ಖುದ್ದು ಸಿಎಂ ಬೊಮ್ಮಾಯಿ ಅವರೇ ನಾನು ಚಾರ್ಲಿ ಸಿನಿಮಾ ನೋಡ್ಬೇಕು ಅಂತ ನಟ ರಕ್ಷತ್ ಶೆಟ್ಟಿಗೆ ಕೇಳಿದ್ದಕ್ಕೆ ಸ್ಪೆಷಲ್ ಶೋ ಅರೇಂಜ್ ಮಾಡಿತ್ತು ಚಿತ್ರತಂಡ. ಹೀಗಾಗಿ ಮಾಲ್ ನಲ್ಲಿ ಸಿಎಂ ಬೊಮ್ಮಾಮಿ, ಸಚಿವ ಆರ್ ಅಶೋಕ್, ನಾಗೇಶ್ ಕುಮಾರ್, ಸುಧಾಕರ್, ನಟ ಜಗ್ಗೇಶ್ ಒಟ್ಟಿಗೆ ಕೂತು 777 ಚಾರ್ಲಿಯನ್ನ ನೋಡಿದ್ದಾರೆ.

ಸಿಎಂ ಬೊಮ್ಮಾಯಿ ಶ್ವಾನ ಪ್ರಿಯರು. ಇವ್ರ ಮನೆಯಲ್ಲಿ ಸನ್ನಿ ಅನ್ನೋ ನಾಯಿ ಇತ್ತು. ಅದು ತೀರಿಕೊಂಡಾಗ ಕಣ್ಣೀರಿಟ್ಟಿದ್ದ ಬೊಮ್ಮಾಯಿಆ ನಾಯಿಯನ್ನ ಸಂಪ್ರದಾಯ ಬದ್ಧವಾಗಿ ಅಂತ್ಯಕ್ರಿಯೆ ಮಾಡಿದ್ರು. ಈಗ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯ ಚಾರ್ಲಿ ಕಥೆ ಸಿಎಂ ಬೊಮ್ಮಾಯಿ ಅವರ ಮನಸ್ಸು ಮುಟ್ಟಿದೆ. ಈ ಸಿನಿಮಾ ನೋಡಿ ಸಿಎಂ ಭಾವುಕರಾಗಿದ್ರು. ಬಳಿಕ ಮಾತನಾಡಿದ ಸಿಎಂ, ನಾನು ಶ್ವಾನ ಪ್ರಿಯ. ಮನುಷ್ಯನನ್ನ ಹೆಚ್ಚು ಪ್ರೀತಿ ಮಾಡೋ ಪ್ರಾಣಿ ನಾಯಿ. ನಾಯಿ ಮತ್ತು ಮನುಷ್ಯನ ಸಂಬಂಧವನ್ನ ಸೂಕ್ಷವಾಗಿ ತೋರಿಸಿದ್ದಾರೆ ಎಂದರು. 

ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದಾಗ ನಿಮ್ಮ ನೆಚ್ಚಿನ ಏಷ್ಯಾನೆಟ್ ಸುವರ್ಣ ನ್ಯೂಸ್ ಸ್ಟುಡಿಯೋಗೆ ಕರೆಸಿ ಸಂದರ್ಶನ ಮಾಡಿತ್ತು. ಆಗ ಸಿಎಂಗೆ ನೆನಪಿನ ಕಾಣಿಕೆಯಾಗಿ ಹೆಣ್ಣು ನಾಯಿ ಮರಿಯನ್ನ ಗಿಫ್ಟ್ ಆಗಿ ಕೊಟ್ಟಿದ್ರು. ಏಷ್ಯಾನೆಟ್ ಸುವರ್ಣ ನ್ಯೂಸ್ ಕೊಟ್ಟ ನಾಯಿ ಮರಿಯನ್ನ ಸಿಎಂ ಅತ್ಯಂತ ಪ್ರೀತಿಯಿಂದ ಸಾಕುತ್ತಿದ್ದಾರೆ. ಈ ಬಗ್ಗೆಯೂ ಸಿಎಂ ಹೇಳಿದ್ದಾರೆ.

22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
04:33Cine Express: '8' ಗ್ಲಿಂಪ್ಸ್‌ನಿಂದ 'ಊರಬ್ಬ' ಟ್ರೇಲರ್‌ವರೆಗೆ: ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಹವಾ
04:30Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?
04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?
Read more