ಸಿನಿಮೀಯ ರೀತಿಯಲ್ಲಿ ಕಳ್ಳರನ್ನು ಹಿಡಿದ ಸ್ಯಾಂಡಲ್‌ವುಡ್ ನಟ!

Dec 27, 2019, 12:49 PM IST

'ಅನ್ವೀಷಿ' ಹಾಗೂ 'ಲವ್‌ ಯೂ 2' ಚಿತ್ರಗಳಲ್ಲಿ ನಾಯಕನಾಗಿ ಕಾಣಿಸಿಕೊಂಡಿರುವ ನಟ ರಘು ಭಟ್ ಕಳ್ಳನೋರ್ವನನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಅವನೇ ಶ್ರೀಮನ್ನಾರಾಯಣ ಪ್ರೀಮಿಯರ್ ಶೋ ವೀಕ್ಷಿಸಿ ಪತ್ನಿಯೊಂದಿಗೆ ಮಧ್ಯರಾತ್ರಿ ತೆರಳುವಾಗ ಭಾರತಿನಗರದ ಸೇಂಟ್ ಜಾನ್ಸ್‌ ಶ್ರೀ ಸರ್ಕಲ್‌ ಬಳಿ  ಚಿನ್ನ ಹಾಗೂ ಹಣ ದೋಚಿ ಪರಾರಿಯಾಗುತ್ತಿದ್ದ ದರೋಡೆಕೋರರನ್ನು ಸುಮಾರು 2 ಕಿ.ಮೀ ಬೆನ್ನತ್ತಿ ಹಿಡಿದಿದ್ದಾರೆ.  ಬಳಿಕ ಕಳ್ಳರನ್ನು ಹಲಸೂರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.  ರಘು ಭಟ್  ಕಾರ್ಯಕ್ಕೆ ಇದೀಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಡಿಸೆಂಬರ್ 27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ