ಮೂರು ಲಕ್ಷ ಹಣ ಕೈ ಸೇರಿಲ್ಲ, ಜನರಿಂದ ನಾನು ದೂರ ಹೋಗುತ್ತೀನಿ ಬಿಟ್ಟುಬಿಡಿ: ವಿಜಯಲಕ್ಷ್ಮಿ

Oct 3, 2021, 4:45 PM IST

ಕೆಲವು ದಿನಗಳ ಹಿಂದೆ ಕರ್ನಾಟಕ ಫಿಲಂ ಚೇಂಬರ್‌ನಲ್ಲಿ ನಟಿ ವಿಜಯಲಕ್ಷ್ಮಿ ಸುದ್ದಿಗೋಷ್ಠಿ ಮಾಡಿದ್ದರು. ಈ ವೇಳೆ ಅವರಿಗೆ ಜನರು ಕಳುಹಿಸಿದ 3 ಲಕ್ಷ ಹಣವನ್ನು ಕೈಗೆ ತಲುಪಿಸುವ ಕೆಲಸ ನಡೆದಿತ್ತು. 'ನನ್ನ ಕಷ್ಟಕ್ಕೆ ಜನರು ಸ್ಪಂದಿಸಿ ಹಾಕಿದ ಹಣ ಇನ್ನೂ ನನ್ನ ಕೈಗೆ ಸೇರಿಲ್ಲ ನಮಗೆ ಸಹಾಯ ಮಾಡಿದ ಯೋಗೇಶ್ ಅವರು ಕಿರುಕುಳ ನೀಡುತ್ತಿದ್ದಾರೆ. ನನ್ನ ಖಾತೆಗೆ ಎಷ್ಟು ದುಡ್ಡು ಬಂದಿದೆ ಅದು ಸಾಕು, ನನಗೆ ನೆಮ್ಮದಿ ಬೇಕು. ಹಾಗಾಗಿ ಅಕ್ಕನನ್ನು ಕರೆದುಕೊಂಡು ನಾನು ಎಲ್ಲಾದರೂ ಹೊರಟು ಹೋಗುತ್ತೇನೆ' ಎಂದು ನಟಿ ವಿಜಯಲಕ್ಷ್ಮಿ ಹೊಸ ವಿಡಿಯೋದಲ್ಲಿ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment