ತವರು ಮನೆಗೆ ಹೋಗ್ತೀನೆಂದ ಹೆಂಡತಿಯನ್ನು ಶಿವನಪಾದ ಸೇರಿಸಿದ ಗಂಡ; ಬೋರ್‌ವೆಲ್‌ನಲ್ಲಿ ಹೂತು ಹಾಕಿ ನಾಪತ್ತೆ ನಾಟಕವಾಡಿದ!

ತವರು ಮನೆಗೆ ಹೋಗ್ತೀನೆಂದ ಹೆಂಡತಿಯನ್ನು ಶಿವನಪಾದ ಸೇರಿಸಿದ ಗಂಡ; ಬೋರ್‌ವೆಲ್‌ನಲ್ಲಿ ಹೂತು ಹಾಕಿ ನಾಪತ್ತೆ ನಾಟಕವಾಡಿದ!

Published : Oct 15, 2025, 07:24 PM IST
ತವರಿಗೆ ಹೋಗುವುದಾಗಿ ಹೇಳಿದ ಕಾರಣಕ್ಕೆ ಪತಿಯೇ ಪತ್ನಿಯನ್ನು ಕೊಲೆ ಮಾಡಿ, ಶವವನ್ನು ಜಮೀನಿನ ಬೋರ್‌ವೆಲ್‌ನಲ್ಲಿ ಮುಚ್ಚಿಹಾಕಿದ್ದಾನೆ. ನಂತರ ಪತ್ನಿ ಕಾಣೆಯಾಗಿದ್ದಾಳೆಂದು ನಾಟಕವಾಡಿ ದೂರು ನೀಡಿದ್ದ. ಪೊಲೀಸರ ತೀವ್ರ ವಿಚಾರಣೆ ವೇಳೆ ಈ ಕೊಲೆಯ ರಹಸ್ಯ ಬಯಲಾಗಿದ್ದು, ಆರೋಪಿ ಪತಿಯನ್ನು ಬಂಧಿಸಲಾಗಿದೆ.

ತವರಿಗೆ ಹೋಗಿ ಬರುವುದಾಗಿ ಹೇಳಿದ ಕಾರಣಕ್ಕೆ ಕೋಪಗೊಂಡ ಕ್ರೂರಿ ಪತಿಯೊಬ್ಬ ತನ್ನ ಪತ್ನಿಯನ್ನೇ ಕೊಲೆ ಮಾಡಿ, ಆಕೆಯ ಶವವನ್ನು ತಮ್ಮ ಜಮೀನಿನಲ್ಲಿದ್ದ ಬೋರ್‌ವೆಲ್‌ನೊಳಗೆ ಹಾಕಿ ಮುಚ್ಚಿಹಾಕಿ, ಬಳಿಕ ನಾಪತ್ತೆ ದೂರು ನೀಡಿ ನಾಟಕವಾಡಿದ್ದ ಹೃದಯ ಕಲಕುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರು ಪತಿಯ ಮೇಲೆ ಅನುಮಾನಗೊಂಡು ತೀವ್ರ ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದ್ದು, ಆತನನ್ನು ಬಂಧಿಸಲಾಗಿದೆ.

ಸಂಸಾರದಲ್ಲಿ ವೈಲೆಂಟ್‌ ಆದ ಪತಿ:

ಇದು ಗಂಡ, ಹೆಂಡತಿ ಮತ್ತು ಪುಟ್ಟ ಹೆಣ್ಣುಮಗು, ಅಜ್ಜ-ಅಜ್ಜಿಯನ್ನು ಒಳಗೊಂಡ ಒಂದು ಪುಟ್ಟ ಕುಟುಂಬದ ಕಥೆ. ಮೂರು ಎಕರೆ ತೆಂಗಿನ ತೋಟ ಮತ್ತು ಹೊಲಗಳನ್ನು ಹೊಂದಿದ್ದ ಈ ಸುಖೀ ಸಂಸಾರದಲ್ಲಿ ಮಗುವಾದ ನಂತರ ಪತಿಯ ವರ್ತನೆ ಸಂಪೂರ್ಣ ಬದಲಾಯಿತು. ಮಗು ಜನಿಸಿದ ಬಳಿಕ ಪತಿ ತನ್ನ ಪತ್ನಿಗೆ ಕಾಟ ಕೊಡಲು ಶುರು ಮಾಡಿದ್ದ. ಈತನಿಗೆ ಆತನ ಹೆತ್ತವರು ಕೂಡ ಸಹಕಾರ ನೀಡಿದ್ದರು ಎನ್ನಲಾಗಿದೆ. ಮೂವರು ಸೇರಿಕೊಂಡು ಆಕೆಯನ್ನು ಇನ್ನಿಲ್ಲದಂತೆ ಕಾಡುತ್ತಿದ್ದರು. ಆದರೂ ಆ ಹೆಣ್ಣುಮಗಳು ಯಾವುದನ್ನೂ ತನ್ನ ತವರಿಗೆ ಹೇಳಿರಲಿಲ್ಲ. ಈ ಹಿಂದೆ ಒಮ್ಮೆ ಗಂಡ ಹೊಡೆದು ಕಾಲನ್ನೂ ಮುರಿದಿದ್ದರೂ ಸಹ ಆಕೆ ತವರಿಗೆ ಬಿದ್ದುಬಿಟ್ಟೆ ಎಂದು ಹೇಳುವ ಮೂಲಕ ಸಂಸಾರ ಉಳಿಸಲು ಪ್ರಯತ್ನಿಸಿದ್ದಳು.

ಕೊಲೆ ನಡೆದ ಆ ರಾತ್ರಿ:

ಸದಾ ಹಿಂಸೆ ಅನುಭವಿಸುತ್ತಿದ್ದ ಆ ಹೆಂಡತಿ, ಆವತ್ತು ತವರಿಗೆ ಹೋಗಿ ಬರುತ್ತೇನೆ ಎಂದು ಗಂಡನ ಬಳಿ ಹೇಳಿದ್ದಳು. ಈ ಮಾತಿಗೆ ಉದ್ರೇಕಗೊಂಡ ಪತಿ, ಪತ್ನಿಗೆ ಬಲವಾಗಿ ಕಪಾಳಕ್ಕೆ ಹೊಡೆದಿದ್ದಾನೆ. ಪತಿಯ ಬಲವಾದ ಪೆಟ್ಟಿಗೆ ಆಕೆ ಅಲ್ಲೇ ಕುಸಿದುಬಿದ್ದು ತಕ್ಷಣವೇ ಪ್ರಾಣ ಬಿಟ್ಟಿದ್ದಾಳೆ. ಪತ್ನಿ ಸಾವನ್ನಪ್ಪಿದ ನಂತರ ದಾರಿ ತೋಚದೇ ಹೋದ ಆ ಕ್ರೂರಿ ಗಂಡ, ತನ್ನ ಪಾಪದ ಕೃತ್ಯವನ್ನು ಮುಚ್ಚಿಹಾಕಲು ನಿರ್ಧರಿಸುತ್ತಾನೆ. ಆತ ತಕ್ಷಣವೇ ಶವವನ್ನು ತನ್ನ ಜಮೀನಿನಲ್ಲಿದ್ದ ಬೋರ್‌ವೆಲ್‌ ಒಳಗೆ ಹಾಕಿ, ಅದನ್ನು ಮುಚ್ಚಿಹಾಕುತ್ತಾನೆ.

ಪತಿಯ ನಾಟಕೀಯ ದೂರು:

ಪತ್ನಿಯ ಶವವನ್ನು ಬೋರ್‌ವೆಲ್‌ ಒಳಗೆ ಹೂತ ನಂತರ ನಾಟಕ ಶುರು ಮಾಡಿದ ಆತ, ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ದೂರು ದಾಖಲಿಸಿದ್ದಾನೆ. "ತನ್ನ ಅಜ್ಜಿಗೆ ಹುಷಾರಿಲ್ಲ, ಆಸ್ಪತ್ರೆಯಲ್ಲಿದ್ದಾಳೆ ಎಂದು ಹೇಳಿ ಹೆಂಡತಿ ಮನೆಯಿಂದ ಹೊರಟು ಹೋಗಿದ್ದಾಳೆ, ಆದರೆ ವಾಪಸ್ ಬಂದಿಲ್ಲ" ಎಂದು ದೂರಿನಲ್ಲಿ ತಿಳಿಸಿದ್ದ. ಅಷ್ಟೇ ಅಲ್ಲದೆ, ಪತ್ನಿ ಮರಳಿ ಬರಲಿ ಎಂದು ಕಂಡ ಕಂಡ ದೇವರುಗಳಿಗೆ ಹರಕೆ ಕಟ್ಟಿಕೊಂಡು ಜನರನ್ನು ನಂಬಿಸಲು ಪ್ರಯತ್ನಿಸಿದ್ದ.

ತನಿಖೆಯಲ್ಲಿ ಬಯಲಾಯ್ತು ಸತ್ಯ:

ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದರೂ ಯಾವುದೇ ಸುಳಿವು ಸಿಗಲಿಲ್ಲ. ಆದರೆ, ಕೊನೆಗೆ ಪೊಲೀಸರಿಗೆ ಗಂಡನ ಮೇಲೆ ಅನುಮಾನ ಬಂತು. ಅನುಮಾನದ ಮೇಲೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ತಾನೇ ಕೊಲೆ ಮಾಡಿ ಬೋರ್‌ವೆಲ್‌ನಲ್ಲಿ ಮುಚ್ಚಿಹಾಕಿರುವುದನ್ನು ಒಪ್ಪಿಕೊಂಡಿದ್ದಾನೆ. ಈ ಮೂಲಕ ಒಂದು ಮಿಸ್ಸಿಂಗ್ ಕೇಸ್‌ನ ರೋಚಕ ರಹಸ್ಯ ಬಯಲಾಗಿದೆ.

ಮಗುವಿನ ಭವಿಷ್ಯ ಅತಂತ್ರ:

ಈ ಭೀಕರ ಕೊಲೆಯ ನಂತರ ಆ ಪುಟ್ಟ ಮಗುವಿನ ಭವಿಷ್ಯ ನಿಜಕ್ಕೂ ಯಕ್ಷಪ್ರಶ್ನೆಯಾಗಿದೆ. ಅಪ್ಪ ಜೈಲು ಪಾಲಾದರೆ, ಅಮ್ಮ ಸಾವಿನ ಮನೆ ಸೇರಿದಳು. ಆ ಮಗುವಿಗೆ ಈಗ ಅಜ್ಜಿಯ ಮನೆಯೇ ಆಸರೆಯಾಗಿದೆ. ಆದರೆ, ಆ ಮಗು ದೊಡ್ಡದಾದ ಮೇಲೆ ತನ್ನ ಹೆತ್ತವರ ಕಥೆಯನ್ನು ಹೇಗೆ ತಿಳಿದುಕೊಳ್ಳಬಹುದು ಎಂಬುದು ಎಲ್ಲರನ್ನೂ ಕಾಡುವ ಪ್ರಶ್ನೆಯಾಗಿದೆ. ಈಡೀ ಪ್ರಕರಣದ ಬಗ್ಗೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

22:45DK Shivakumar: ಜ್ಯೋತಿಷಿ ಹೇಳಿದ್ದ ಭವಿಷ್ಯ; ಮನಮೆಚ್ಚಿದ ಮಡದಿಯಾಗಿ DKS ಬಾಳಿಗೆ ಬಂದಿದ್ದು ಹೇಗೆ ಉಷಾ?
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
24:12Wife escape: ಜಿಮ್ ಬಾಡಿ ಗಂಡನಿಂದ ಸುಖವಿಲ್ಲವೆಂದು, ಸ್ಲಿಮ್ ಬಾಡಿ ಹುಡುಗನ ಹಿಂದೆ ಹೆಂಡತಿ ಪರಾರಿ!
24:18ಮನಸ್ಸಿಲ್ಲದೆ ಮದುವೆಯಾದ ಗಂಡನ ಬಿಟ್ಟು ಪ್ರೇಮಿಯೊಂದಿಗೆ ಹೋದ ಮಗಳು; ವಾಪಸ್ ಕರೆತಂದು ವಿಷವುಣಿಸಿ ಸುಟ್ಟು ಹಾಕಿದ ಅಪ್ಪ!
25:00ಅವಳಿಗೆ 57.. ಅವನಿಗೆ 27, ಇಬ್ಬರಿಗೂ ಆಗಿತ್ತು ಕುಚ್​​..ಕುಚ್​​..! ಆ ಶಿಕ್ಷಕಿ ಸತ್ತಿದ್ದೇಗೆ? ಕೊಂದಿದ್ದು ಯಾರು..?
23:42ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
Read more