ತವರು ಮನೆಗೆ ಹೋಗ್ತೀನೆಂದ ಹೆಂಡತಿಯನ್ನು ಶಿವನಪಾದ ಸೇರಿಸಿದ ಗಂಡ; ಬೋರ್‌ವೆಲ್‌ನಲ್ಲಿ ಹೂತು ಹಾಕಿ ನಾಪತ್ತೆ ನಾಟಕವಾಡಿದ!

ತವರು ಮನೆಗೆ ಹೋಗ್ತೀನೆಂದ ಹೆಂಡತಿಯನ್ನು ಶಿವನಪಾದ ಸೇರಿಸಿದ ಗಂಡ; ಬೋರ್‌ವೆಲ್‌ನಲ್ಲಿ ಹೂತು ಹಾಕಿ ನಾಪತ್ತೆ ನಾಟಕವಾಡಿದ!

Published : Oct 15, 2025, 07:24 PM IST
ತವರಿಗೆ ಹೋಗುವುದಾಗಿ ಹೇಳಿದ ಕಾರಣಕ್ಕೆ ಪತಿಯೇ ಪತ್ನಿಯನ್ನು ಕೊಲೆ ಮಾಡಿ, ಶವವನ್ನು ಜಮೀನಿನ ಬೋರ್‌ವೆಲ್‌ನಲ್ಲಿ ಮುಚ್ಚಿಹಾಕಿದ್ದಾನೆ. ನಂತರ ಪತ್ನಿ ಕಾಣೆಯಾಗಿದ್ದಾಳೆಂದು ನಾಟಕವಾಡಿ ದೂರು ನೀಡಿದ್ದ. ಪೊಲೀಸರ ತೀವ್ರ ವಿಚಾರಣೆ ವೇಳೆ ಈ ಕೊಲೆಯ ರಹಸ್ಯ ಬಯಲಾಗಿದ್ದು, ಆರೋಪಿ ಪತಿಯನ್ನು ಬಂಧಿಸಲಾಗಿದೆ.

ತವರಿಗೆ ಹೋಗಿ ಬರುವುದಾಗಿ ಹೇಳಿದ ಕಾರಣಕ್ಕೆ ಕೋಪಗೊಂಡ ಕ್ರೂರಿ ಪತಿಯೊಬ್ಬ ತನ್ನ ಪತ್ನಿಯನ್ನೇ ಕೊಲೆ ಮಾಡಿ, ಆಕೆಯ ಶವವನ್ನು ತಮ್ಮ ಜಮೀನಿನಲ್ಲಿದ್ದ ಬೋರ್‌ವೆಲ್‌ನೊಳಗೆ ಹಾಕಿ ಮುಚ್ಚಿಹಾಕಿ, ಬಳಿಕ ನಾಪತ್ತೆ ದೂರು ನೀಡಿ ನಾಟಕವಾಡಿದ್ದ ಹೃದಯ ಕಲಕುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರು ಪತಿಯ ಮೇಲೆ ಅನುಮಾನಗೊಂಡು ತೀವ್ರ ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದ್ದು, ಆತನನ್ನು ಬಂಧಿಸಲಾಗಿದೆ.

ಸಂಸಾರದಲ್ಲಿ ವೈಲೆಂಟ್‌ ಆದ ಪತಿ:

ಇದು ಗಂಡ, ಹೆಂಡತಿ ಮತ್ತು ಪುಟ್ಟ ಹೆಣ್ಣುಮಗು, ಅಜ್ಜ-ಅಜ್ಜಿಯನ್ನು ಒಳಗೊಂಡ ಒಂದು ಪುಟ್ಟ ಕುಟುಂಬದ ಕಥೆ. ಮೂರು ಎಕರೆ ತೆಂಗಿನ ತೋಟ ಮತ್ತು ಹೊಲಗಳನ್ನು ಹೊಂದಿದ್ದ ಈ ಸುಖೀ ಸಂಸಾರದಲ್ಲಿ ಮಗುವಾದ ನಂತರ ಪತಿಯ ವರ್ತನೆ ಸಂಪೂರ್ಣ ಬದಲಾಯಿತು. ಮಗು ಜನಿಸಿದ ಬಳಿಕ ಪತಿ ತನ್ನ ಪತ್ನಿಗೆ ಕಾಟ ಕೊಡಲು ಶುರು ಮಾಡಿದ್ದ. ಈತನಿಗೆ ಆತನ ಹೆತ್ತವರು ಕೂಡ ಸಹಕಾರ ನೀಡಿದ್ದರು ಎನ್ನಲಾಗಿದೆ. ಮೂವರು ಸೇರಿಕೊಂಡು ಆಕೆಯನ್ನು ಇನ್ನಿಲ್ಲದಂತೆ ಕಾಡುತ್ತಿದ್ದರು. ಆದರೂ ಆ ಹೆಣ್ಣುಮಗಳು ಯಾವುದನ್ನೂ ತನ್ನ ತವರಿಗೆ ಹೇಳಿರಲಿಲ್ಲ. ಈ ಹಿಂದೆ ಒಮ್ಮೆ ಗಂಡ ಹೊಡೆದು ಕಾಲನ್ನೂ ಮುರಿದಿದ್ದರೂ ಸಹ ಆಕೆ ತವರಿಗೆ ಬಿದ್ದುಬಿಟ್ಟೆ ಎಂದು ಹೇಳುವ ಮೂಲಕ ಸಂಸಾರ ಉಳಿಸಲು ಪ್ರಯತ್ನಿಸಿದ್ದಳು.

ಕೊಲೆ ನಡೆದ ಆ ರಾತ್ರಿ:

ಸದಾ ಹಿಂಸೆ ಅನುಭವಿಸುತ್ತಿದ್ದ ಆ ಹೆಂಡತಿ, ಆವತ್ತು ತವರಿಗೆ ಹೋಗಿ ಬರುತ್ತೇನೆ ಎಂದು ಗಂಡನ ಬಳಿ ಹೇಳಿದ್ದಳು. ಈ ಮಾತಿಗೆ ಉದ್ರೇಕಗೊಂಡ ಪತಿ, ಪತ್ನಿಗೆ ಬಲವಾಗಿ ಕಪಾಳಕ್ಕೆ ಹೊಡೆದಿದ್ದಾನೆ. ಪತಿಯ ಬಲವಾದ ಪೆಟ್ಟಿಗೆ ಆಕೆ ಅಲ್ಲೇ ಕುಸಿದುಬಿದ್ದು ತಕ್ಷಣವೇ ಪ್ರಾಣ ಬಿಟ್ಟಿದ್ದಾಳೆ. ಪತ್ನಿ ಸಾವನ್ನಪ್ಪಿದ ನಂತರ ದಾರಿ ತೋಚದೇ ಹೋದ ಆ ಕ್ರೂರಿ ಗಂಡ, ತನ್ನ ಪಾಪದ ಕೃತ್ಯವನ್ನು ಮುಚ್ಚಿಹಾಕಲು ನಿರ್ಧರಿಸುತ್ತಾನೆ. ಆತ ತಕ್ಷಣವೇ ಶವವನ್ನು ತನ್ನ ಜಮೀನಿನಲ್ಲಿದ್ದ ಬೋರ್‌ವೆಲ್‌ ಒಳಗೆ ಹಾಕಿ, ಅದನ್ನು ಮುಚ್ಚಿಹಾಕುತ್ತಾನೆ.

ಪತಿಯ ನಾಟಕೀಯ ದೂರು:

ಪತ್ನಿಯ ಶವವನ್ನು ಬೋರ್‌ವೆಲ್‌ ಒಳಗೆ ಹೂತ ನಂತರ ನಾಟಕ ಶುರು ಮಾಡಿದ ಆತ, ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ದೂರು ದಾಖಲಿಸಿದ್ದಾನೆ. "ತನ್ನ ಅಜ್ಜಿಗೆ ಹುಷಾರಿಲ್ಲ, ಆಸ್ಪತ್ರೆಯಲ್ಲಿದ್ದಾಳೆ ಎಂದು ಹೇಳಿ ಹೆಂಡತಿ ಮನೆಯಿಂದ ಹೊರಟು ಹೋಗಿದ್ದಾಳೆ, ಆದರೆ ವಾಪಸ್ ಬಂದಿಲ್ಲ" ಎಂದು ದೂರಿನಲ್ಲಿ ತಿಳಿಸಿದ್ದ. ಅಷ್ಟೇ ಅಲ್ಲದೆ, ಪತ್ನಿ ಮರಳಿ ಬರಲಿ ಎಂದು ಕಂಡ ಕಂಡ ದೇವರುಗಳಿಗೆ ಹರಕೆ ಕಟ್ಟಿಕೊಂಡು ಜನರನ್ನು ನಂಬಿಸಲು ಪ್ರಯತ್ನಿಸಿದ್ದ.

ತನಿಖೆಯಲ್ಲಿ ಬಯಲಾಯ್ತು ಸತ್ಯ:

ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದರೂ ಯಾವುದೇ ಸುಳಿವು ಸಿಗಲಿಲ್ಲ. ಆದರೆ, ಕೊನೆಗೆ ಪೊಲೀಸರಿಗೆ ಗಂಡನ ಮೇಲೆ ಅನುಮಾನ ಬಂತು. ಅನುಮಾನದ ಮೇಲೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ತಾನೇ ಕೊಲೆ ಮಾಡಿ ಬೋರ್‌ವೆಲ್‌ನಲ್ಲಿ ಮುಚ್ಚಿಹಾಕಿರುವುದನ್ನು ಒಪ್ಪಿಕೊಂಡಿದ್ದಾನೆ. ಈ ಮೂಲಕ ಒಂದು ಮಿಸ್ಸಿಂಗ್ ಕೇಸ್‌ನ ರೋಚಕ ರಹಸ್ಯ ಬಯಲಾಗಿದೆ.

ಮಗುವಿನ ಭವಿಷ್ಯ ಅತಂತ್ರ:

ಈ ಭೀಕರ ಕೊಲೆಯ ನಂತರ ಆ ಪುಟ್ಟ ಮಗುವಿನ ಭವಿಷ್ಯ ನಿಜಕ್ಕೂ ಯಕ್ಷಪ್ರಶ್ನೆಯಾಗಿದೆ. ಅಪ್ಪ ಜೈಲು ಪಾಲಾದರೆ, ಅಮ್ಮ ಸಾವಿನ ಮನೆ ಸೇರಿದಳು. ಆ ಮಗುವಿಗೆ ಈಗ ಅಜ್ಜಿಯ ಮನೆಯೇ ಆಸರೆಯಾಗಿದೆ. ಆದರೆ, ಆ ಮಗು ದೊಡ್ಡದಾದ ಮೇಲೆ ತನ್ನ ಹೆತ್ತವರ ಕಥೆಯನ್ನು ಹೇಗೆ ತಿಳಿದುಕೊಳ್ಳಬಹುದು ಎಂಬುದು ಎಲ್ಲರನ್ನೂ ಕಾಡುವ ಪ್ರಶ್ನೆಯಾಗಿದೆ. ಈಡೀ ಪ್ರಕರಣದ ಬಗ್ಗೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
03:30ರಾಜಸ್ಥಾನ ಅರಮನೆಯಲ್ಲಿ 'ಗೀತಾ-ಗೋವಿಂದ' ಮದುವೆ! ಮಡಿಕೇರಿ, ಹೈದ್ರಾಬಾದ್ ಬಿಟ್ಟು ಅಲ್ಲಿ ಯಾಕೆ?
06:10ದರ್ಶನ್ 'ಬುಲ್‌ ಬುಲ್‌' ಸುದೀಪ್ ಜೊತೆ ಮಾತಾಡಕಿಲ್ವಾ? ದಚ್ಚು ಶಿಷ್ಯೆ 'ಲೇಡಿ ಬಾಸ್' ಕಿಚ್ಚನಿಂದ ದೂರ?
25:10ತವರು ಮನೆಗೆ ಹೋಗ್ತೀನೆಂದ ಹೆಂಡತಿಯನ್ನು ಶಿವನಪಾದ ಸೇರಿಸಿದ ಗಂಡ; ಬೋರ್‌ವೆಲ್‌ನಲ್ಲಿ ಹೂತು ಹಾಕಿ ನಾಪತ್ತೆ ನಾಟಕವಾಡಿದ!
23:06ಹೆಂಡತಿ ಕಾಟಕ್ಕೆ 'ಲೈವ್' ಸೂಸೈಡ್ ಯತ್ನ: ಗಂಡನ ನೌಟಂಕಿ ನಾಟಕ ಬಿಚ್ಚಿಟ್ಟ ಕುವೈತ್ ರಿಟರ್ನ್ ಪತ್ನಿ!
24:05ಅಮ್ಮ ಸತ್ತ ಮಗುವಿಗೆ ಆಸರೆಯಾಗದೇ, 3ನೇ ಮಹಡಿಯಿಂದ ತಳ್ಳಿದ ಮಲತಾಯಿ! ಸಾವಿನ ಸತ್ಯ ಬಿಚ್ಚಿಟ್ಟ ಸಿಸಿಟಿವಿ!
23:37ಸೀನಿಯರ್ ಲಾಯರ್ ಮದುವೆಯಾಗಲು ಹೆಂಡತಿಯನ್ನೇ ಮುಗಿಸಿದ ಗಂಡ; 2 ಬಾರಿ ಜಸ್ಟ್ ಮಿಸ್, 3ನೇ ಸಲ ಮಟಾಶ್!
Read more