ಮತ್ತೆ ಸಿಎಂ ಆಗ್ಬೇಕು! ಸಿದ್ದು ಪರ ಜಮೀರ್ ಖಾನ್‌ ಸಾಹೇಬ್ರ ಬ್ಯಾಟಿಂಗ್

Oct 29, 2020, 4:23 PM IST

ಬೆಂಗಳೂರು ( ಅ. 29): ಸಿದ್ದರಾಮಯ್ಯ- ಜಮೀರಣ್ಣ ಸಂಬಂಧ ಅವಿನಾಭಾವವಾದದ್ದು. ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಕೊಡುವುದಿಲ್ಲ. ಸಾಧ್ಯವಾದಲ್ಲೆಲ್ಲಾ ಬ್ಯಾಟಿಂಗ್ ಮಾಡುತ್ತಾರೆ. 

ರಾರಾದಲ್ಲಿ ಕೈ- ಕೇಸರಿ ಕಲಿಗಳ ಮಾರಾಮಾರಿ: ಸಿದ್ದು ಘರ್ಜನೆ, ಮುನಿರತ್ನ ಕಣ್ಣೀರು ವರ್ಕೌಟ್ ಆಗುತ್ತಾ

'ನಾನು ರಾಜ್ಯದ ಪ್ರವಾಸ ಮಾಡುವಾಗ 2018 ರಲ್ಲಿ ನಾವು ತಪ್ಪು ಮಾಡ್ಬಿಟ್ವಿ ಸಾರ್. ಸಿದ್ದರಾಮಯ್ಯನವರನ್ನೇ ಸಿಎಂ ಮಾಡಬೇಕಿತ್ತು. ಅವರೇ ಸಿಎಂ ಆಗಿದ್ರೆ ರಾಜ್ಯಕ್ಕೆ ಒಳ್ಳೆಯದಾಗುತ್ತಿತ್ತು ಎಂದು ಜನ ಬಯಸುತ್ತಿದ್ದಾರೆ. ಅದು ನನ್ನ ಅಭಿಪ್ರಾಯವೂ ಹೌದು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಬೇಕು. ಇದನ್ನು ಹೈಕಮಾಂಡ್ ತೀರ್ಮಾನ ಮಾಡಬೇಕು' ಎಂದು ಜಮೀರ್ ಭಾಯ್ ಹೇಳಿದ್ದಾರೆ.